Posts

Showing posts from April, 2025

i'm a cement dealer, so i want to provide good quality cement to indian govt constructions. so how to provide my goods to construction?

  Supplying Cement to Indian Government Construction Projects To establish yourself as a cement supplier for government construction projects in India, you'll need to navigate a structured process. The following steps outline the key requirements and procedures: Registration and Certification Requirements Business Registration : Ensure your cement dealership is properly registered as a legal business entity. GST Registration : Maintain an active GST registration and ensure compliance with tax regulations. Quality Certifications : Obtain Bureau of Indian Standards (BIS) certification for your cement products. The primary standard for cement in India is IS 269:2015 for Ordinary Portland Cement. Environmental Clearances : Verify that your suppliers have the necessary environmental clearances from pollution control boards. Government Procurement Platforms Government e-Marketplace (GeM) : Register your business on GeM (gem.gov.in), which is the primary online procure...

ಗ್ರಂಥ : ಬದುಕಲು ಕಲಿಯಿರಿ part : 47

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು :  ಸ್ವಾಮಿ ಜಗದಾತ್ಮಾನಂದಜಿ  ಭಾಗ :  47   ಡಾ. ಅಂಬೇಡ್ಕ‌ರ್ ವಿದೇಶದಲ್ಲಿ ವಿದ್ಯಾರ್ಥಿಯಾಗಿದ್ದಾಗ ತಮ್ಮ ಅಧ್ಯಯನ ಅಭ್ಯಾಸಗಳಲ್ಲಿ ಮುಳುಗಿಹೋಗಿದ್ದರು. ಜ್ಞಾನ ಪಿಪಾಸುವಿಗೆ ನಿದ್ರೆ ಮತ್ತು ಸುಖ ಇಲ್ಲ ಎಂಬ ಸುಭಾಷಿತ ಅವರ ಪಾಲಿಗೆ ಅಕ್ಷರಶಃ ನಿಜವಾಗಿತ್ತು. ವಿದ್ಯಾಭ್ಯಾಸಕ್ಕೆಂದು  ತಾಯ್ನಾಡಿನಿಂದ  ಬಹುದೂರ ಹೋಗಿ ಕಾಲ ಹರಣ ಮಾಡಿದರೆ, ಭೋಗ ವಿಲಾಸ ವೈಭವಗಳ ಬೆನ್ನಟ್ಟಿದರೆ ದೇಶದ್ರೋಹವಾಗುತ್ತದೆಂದು ಅವರು ಯೋಚಿಸಿದರು. ಹಾಗಾಗಿ ಸಿನೆಮಾ ನೋಡುವ ಚಟವಾಗಲಿ, ಊರುಕೇರಿ ಅಲೆಯುವ ಹವ್ಯಾಸವಾಗಲಿ ಅವರ ಮನಸ್ಸನ್ನೆಂದೂ ಸೆಳೆಯಲಿಲ್ಲ. ಅಂಬೇಡ್ಕರ್ ಮಹಾ ಪುಸ್ತಕಪ್ರೇಮಿಗಳು. ಪುಸ್ತಕಗಳನ್ನು ಕಂಡರೆ ಅವರಿಗೆ ದೇಹಾಯಾಸ ಮಾನಸಿಕ ವ್ಯಥೆಗಳೂ ದೂರವಾಗುತ್ತಿದ್ದವು. ಲಂಡನ್ನಿಗೆ ಅವರು ವಿಶೇಷ ಅಧ್ಯಯನಕ್ಕಾಗಿ ಹೋದಾಗಲಂತೂ, ಪುಸ್ತಕಾಲಯದ ಕಾವಲುಗಾರ ಕಿಟಕಿಬಾಗಿಲುಗಳನ್ನು ಮುಚ್ಚಿ ಬಂದು ಅವರನ್ನು ಎಚ್ಚರಿಸುವ ತನಕವೂ ತಮ್ಮ ಆಸನದಲ್ಲೇ ಕುಳಿತು ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಅಲ್ಪಾಹಾರಿಯಾಗಿದ್ದುಕೊಂಡು ಅವರು ತಮ್ಮ ಸಾಹಸದ ಜ್ಞಾನಯಾತ್ರೆಯನ್ನು ತಡೆಯಿಲ್ಲದೇ ನಡೆಸಿದರು. ಅವರ ಜ್ಞಾನದಾಹ ಅಂತಹದಾಗಿತ್ತು.  'ಮಹತ್ಕಾರ್ಯಗಳು ಹಠಾತ್ ಬಲದಿಂದಲ್ಲ -ನಿರಂತರ ಪರಿಶ್ರಮದಿಂದ ಸಾಧ್ಯವಾಗಿವೆ' ಎಂದು ಡಾ. ಜಾನ್ಸನ್ ಹೇಳಿದ.  'ಹಿಡಿದ ಕೆಲಸವನ್ನು ಪರಿಪೂರ್ಣಗೊಳಿ...

ಅರ್ಹತೆಗೆ ಒಲಿದ ಅದೃಷ್ಟ ಗ್ರಂಥ : ಬದುಕಲು ಕಲಿಯಿರಿ part 46

 ಗ್ರಂಥ : ಬದುಕಲು ಕಲಿಯಿರಿ ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 46  ಅರ್ಹತೆಗೆ ಒಲಿದ ಅದೃಷ್ಟ   ಇತ್ತೀಚೆಗೆ ಯುವಕನೊಬ್ಬ ಪ್ರಸಿದ್ದ ಕ್ರೀಡಾಪತ್ರಿಕೆ ಏರ್ಪಡಿಸಿದ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ಹತ್ತು ಸಾವಿರ ರೂಪಾಯಿಗಳ ಬಹುಮಾನ ಪಡೆದ. ಎಲ್ಲರೂ ಅವನ ಅದೃಷ್ಟವನ್ನು ಕಂಡು ಚಕಿತರಾದರು. ಸಂತೋಷವನ್ನು ವ್ಯಕ್ತಪಡಿಸಿ ಧನ್ಯವಾದಗಳನ್ನು ಅರ್ಪಿಸಿದರು. ಆತ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ, ಅಂಥ ಒಂದು ಬಹುಮಾನ ಸಿಕ್ಕೀತೆಂದು ಕನಸಿನಲ್ಲೂ ಯೋಚಿಸಿರಲಿಲ್ಲ' ಎಂದು ಅವನು ನನಗೆ ಹೇಳಿದ. 'ಅದೃಷ್ಟವಲ್ಲದೆ ಮತ್ತೇನು?' ಎಂದವನ ಮಿತ್ರರು ದನಿ ಗೂಡಿಸಿದರು. ಅವನೂ ನಗುತ್ತ ಹೌದೆಂಬಂತೆ ತಲೆತೂಗಿದ. ಆದರೆ ಅದು ಲಾಟರಿಯ ಸ್ಪರ್ಧೆಯಾಗಿರಲಿಲ್ಲ. ಮಿತ್ರರೆಲ್ಲ ದೂರ ಸರಿದ ಮೇಲೆ ಆತನೊಬ್ಬನೇ ಇದ್ದಾಗ ನಾನೊಂದು ಪ್ರಶ್ನೆ ಕೇಳಿದೆ. "ನೀನು ಎಷ್ಟು ವರ್ಷಗಳಿಂದ ಆ ಕ್ರೀಡಾ ಪತ್ರಿಕೆಯನ್ನು ಓದುತ್ತಿದ್ದಿ?' 'ಆರನೇ ತರಗತಿಯಿಂದ' ಎಂದನಾತ. ಈಗ ಅವನು ಪಿ. ಯು. ಸಿ. ಮುಗಿಸಿದ್ದಾನೆ. ಈ ಆರು ವರ್ಷ ಕಾಲ ಪ್ರಕಟವಾದ ಪತ್ರಿಕೆಯ ಪ್ರತಿಯೊಂದು ಸಂಚಿಕೆಯನ್ನೂ ತಪ್ಪದೇ ಓದಿದ್ದ. ಆಟೋಟದ ಸ್ಪರ್ಧೆಗಳಲ್ಲಿ ತತ್ಸಂಬಂಧವಾದ ವಾರ್ತೆಗಳಲ್ಲಿ ಆತನಿಗೆ ಮೊದಲಿನಿಂದಲೂ ಆಸಕ್ತಿ. ಮಕ್ಕಳು ಸಿಹಿ ತಿಂಡಿಗಾಗಿ ಹಾತೊರೆಯುವಂತೆ ಆ ಪತ್ರಿಕೆಗಾಗಿ ಅವನ ಹಂಬಲವಿತ್ತು. ಅದು ಕೈಗೆ ಬಂದೊಡನೆ ಮೊದಲಿನಿಂದ ಕೊನೆಯವರೆಗೆ ಹಲವು ಬಾರಿ ಓದಿದವನು ಆತ. ಈ ಆರು ವ...

ಪ್ರಯತ್ನವೇ ಪರಮ ಪೂಜೆ ಗ್ರಂಥ : ಬದುಕಲು ಕಲಿಯಿರಿ part :45

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 45  ಪ್ರಯತ್ನವೇ ಪರಮ ಪೂಜೆ  ನಮ್ಮ ದೇಶದ ಸುಪ್ರಸಿದ್ಧ ತಾತ್ವಿಕ  ಗ್ರಂಥವಾದ 'ಯೋಗವಾಸಿಷ್ಠ'ದಲ್ಲಿ ಸ್ವಪ್ರಯತ್ನವನ್ನು ಕುರಿತು ಹೇಳಿದ ಮಾತುಗಳನ್ನು ಕೇಳಿದ್ದೀರಾ?  'ಸರಿಯಾದ ಮತ್ತು ಉತ್ಸಾಹಪೂರಿತ ಪ್ರಯತ್ನದಿಂದ ಪಡೆಯಲು ಸಾಧ್ಯವಾಗದ ವಸ್ತು ಯಾವುದೂ ಈ ಪ್ರಪಂಚದಲ್ಲಿಲ್ಲ. ಯಾರಾದರೂ ಯಾವುದೇ ವಸ್ತುವನ್ನು ಪಡೆಯಲು ಆಶಿಸಿ, ಅದನ್ನು ಹೊಂದಲು ಯತ್ನಿಸಿದುದೇ ಆದರೆ ಅವರು ಖಂಡಿತವಾಗಿಯೂ ಸಫಲರಾಗಬಲ್ಲರು. ಆದರೆ ಹಿಡಿದ ದಾರಿಯಲ್ಲಿ ಹಿಂದೇಟು ಹಾಕದೆ ಮುಂದುವರಿಯುತ್ತಲೇ ಸಾಗಬೇಕು. 'ಈ ಪ್ರಪಂಚದಲ್ಲಿ ಹಲವು ಮಂದಿ ಅತ್ಯಂತ ನಿಮ್ನ ಪರಿಸ್ಥಿತಿಗಳಿಂದ, ದುಃಖ ದಾರಿದ್ರಗಳಿಂದ ಪಾರಾಗಿ ಪರಮಭಾಗ್ಯಶಾಲಿಗಳಾದರು. ಬುದ್ಧಿಶಾಲಿಗಳಾದವರು ಪ್ರಯತ್ನ ಮಾತ್ರದಿಂದಲೆ ಅತ್ಯಂತ ಅಪಾಯಕರ ಸನ್ನಿವೇಶಗಳನ್ನು ದಾಟಿ ಜಯಶಾಲಿಗಳಾದರಲ್ಲದೆ ಅದೃಷ್ಟದಲ್ಲಿ ಅರ್ಥಹೀನ ನಂಬಿಕೆಯನ್ನಿಟ್ಟಿಲ್ಲ. ಯಾರು ಯಾವುದಕ್ಕಾಗಿ ಹಾತೊರೆದಿದ್ದನೋ, ಯಾವುದನ್ನು ಪಡೆಯುವುದಕ್ಕಾಗಿ ಹೋರಾಡಿದ್ದನೋ ಅದನ್ನು ಪಡೆದೇ ಪಡೆಯುತ್ತಾನೆ- ಸೋಮಾರಿಯಾಗಿ ಕುಳಿತು ಯಾರು ಏನನ್ನೂ ಸಾಧಿಸಿಲ್ಲ. ಪ್ರತಿಯೊಬ್ಬನೂ ತನಗೆ ತಾನೇ ಶತ್ರು ಅಥವಾ ತನಗೆ ತಾನೇ ಮಿತ್ರ ಎಂಬುದನ್ನು ತಿಳಿಯಬೇಕು. ಯಾರು ತನ್ನನ್ನು ತಾನು ರಕ್ಷಿಸಿಕೊಳ್ಳಲಾರನೋ ಅವನನ್ನು ರಕ್ಷಿಸಲು ಯಾರೂ ಇರಲಾರರು. ಖಂಡಿತವಾಗಿಯೂ ಒಬ್ಬನು ತನ್ನ ಸ...

ಆತ್ಮ ವಿಮರ್ಶೆಯ ಅಭ್ಯಾಸ - ಗ್ರಂಥ: ಬದುಕಲು ಕಲಿಯಿರಿ. part 44;

 ಗ್ರಂಥ: ಬದುಕಲು ಕಲಿಯಿರಿ. ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ 44; ಆತ್ಮ ವಿಮರ್ಶೆಯ ಅಭ್ಯಾಸ   ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಹಂಬಲ ನಮಗಿದ್ದರೆ ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗಬೇಕೆಂದಿದ್ದರೆ, ಸಿಂಹಾವಲೋಕನದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕೆಂಬುದು ಅನುಭವಿಗಳ ಆದೇಶ, ಅರಣ್ಯದಲ್ಲಿ ಸಂಚರಿಸುವ ಸಿಂಹ ಒಮ್ಮೊಮ್ಮೆ ತನ್ನ ಮುಖ ತಿರುಗಿಸಿ ನಡೆದು ಬಂದ ದಾರಿಯನ್ನು ಅವಲೋಕಿಸುತ್ತದೆ ಎನ್ನುತ್ತಾರೆ. ಇದನ್ನು ಸಿಂಹಾವಲೋಕನ ಎನ್ನುತ್ತಾರಷ್ಟೆ. ದಿನದ ಚಟುವಟಿಕೆಗಳನ್ನೂ ಸಿಂಹಾವಲೋಕನ ಕ್ರಮದಿಂದ ಪರಿಶೀಲಿಸಬೇಕು. 'ಮನವ ಶೋಧಿಸಬೇಕು ನಿಚ್ಚ, ಅನುದಿನ ಮಾಡುವ ಪಾಪಪುಣ್ಯದ ವೆಚ್ಚ' ಎನ್ನುವ ದಾಸವಾಣಿಯಲ್ಲೂ ಆ ಅಭ್ಯಾಸದ ಆವಶ್ಯಕತೆ ಸೂಚಿತವಾಗಿದೆ. ದಿನದ ಕೊನೆಯ ಭಾಗದಲ್ಲಿ ನಿದ್ರಿಸುವ ಮೊದಲು 'ನನ್ನ ಪಾಲಿಗೆ ಬಂದ ಆಯುಸ್ಸಿನಲ್ಲಿ ಈ ಒಂದು‌ ದಿನವನ್ನು ಹೇಗೆ ಕಳೆದೆ? ನನಗೆ ಸಿಕ್ಕಿದ ಅವಕಾಶಗಳನ್ನು ಹೇಗೆ  ಉಪಯೋಗಿಸಿಕೊಂಡೆ? ಎಲ್ಲಿ ತಪ್ಪುಗಳಾದವು? ಕಾರಣಗಳೇನು ? ನಾಳಿನ ಅಂಥ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳಬಹುದು? ಈ ಹೊತ್ತು ಮಾಡಬೇಕಾಗಿದ್ದ ಕೆಲಸಗಳನ್ನು ಹೊರಗಿನ ಒತ್ತಾಯ ಒತ್ತಡಗಳಿಂದ ಗೊಣಗುತ್ತ ಮಾಡಿದೆನೆ? ಸ್ವಂತ ಯೋಚನೆ ಯೋಜನೆಗಳನ್ನನುಸರಿಸುತ್ತ ಉತ್ಸಾಹದಿಂದ ಮಾಡಿದೆನೆ? ಇನ್ನೂ ಚೆನ್ನಾಗಿ ಮಾಡಬಹುದಿತ್ತೇ? ಸ್ನೇಹಿತರೊಡನೆ ಬಂಧುಬಾಂಧವರೊಡನೆ ಮತ್ತು ನೆರೆಹೊರೆಯವರೊಂದಿಗೆ ಹೇಗೆ ವರ್ತಿಸಿದೆ?'- ಇವೇ ಮೊದಲಾದ ...

ಅಭ್ಯಾಸದ ಹಿನ್ನೆಲೆ ಗ್ರಂಥ: ಬದುಕಲು ಕಲಿಯಿರಿ part : 43

 ಗ್ರಂಥ: ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 43   ಅಭ್ಯಾಸದ ಹಿನ್ನೆಲೆ   ಒಂದು ಹೊಸ ಅಭ್ಯಾಸವನ್ನು ಕಲಿತು ರೂಢಿಸಿ ದೃಢಪಡಿಸಿಕೊಂಡು ಅದನ್ನು ಮನಸ್ಸಿನಲ್ಲಿ ನೆಲೆ ನಿಲ್ಲುವಂತೆ ಮಾಡಲು ಅತ್ಯಂತ ದೃಢಸಂಕಲ್ಪದಿಂದ ಪ್ರಾರಂಭಿಸಬೇಕು. ಚಂಚಲತೆ, ಅನಿಶ್ಚಿತತೆ ಇವು ಯಾವ ಶಿಸ್ತಿಗೂ ಒಳಪಡದ ದುರ್ಬಲ ಮನಸ್ಸಿನ ಸ್ಥಿತಿ. ಈ ತೆರನಾದ ಮನಸ್ಸಿನ ಶಕ್ತಿ ಏಕಕಾಲದಲ್ಲಿ ಹಲವು ಕಡೆ ಹರಿದು ವ್ಯರ್ಥವಾಗಿ ವ್ಯಯವಾಗುತ್ತದೆ. ಇಂಥ ವ್ಯಕ್ತಿಗಳಿಂದ ಯಾವ ಉತ್ತಮ ಕಾರ್ಯವೂ ಸಾಧ್ಯವಾಗದು. ಸಣ್ಣ ಕೆಲಸವನ್ನಾದರೂ ನಿಯಮ ಪೂರ್ವಕವಾಗಿ ಮನಗೊಟ್ಟು ಮಾಡುವುದರಿಂದ ಕೆಲಸ ಮಾಡುವ ಶಕ್ತಿ ಸಂಚಯವಾಗುವುದು.   ಪರಿಣತ ಸೈಕಲ್ ಸವಾರನನ್ನು ಪರಿಶೀಲಿಸಿ. ಸೈಕಲ್ ಸವಾರಿ ಮಾಡುತ್ತಿರುವಾಗಲೇ ಸ್ನೇಹಿತನ ಹತ್ತಿರ ಮಾತನಾಡುತ್ತ ಸುತ್ತಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತ, ರಸ್ತೆಯಲ್ಲಿ ಎದುರುಗಡೆ ಬರುತ್ತಿರುವ ವಾಹನ ಮತ್ತು ಜನರ ಮಧ್ಯೆ, ಭಯ ಉದ್ವೇಗ ಗೊಂದಲಗಳಿಲ್ಲದೆ ದಾರಿ ಮಾಡಿಕೊಂಡು ಮುನ್ನುಗ್ಗುತ್ತಾನೆ. ಎಲ್ಲಿ ಬ್ರೇಕ್ ಹಾಕಬೇಕೋ ಅಲ್ಲಿ ತಾನೇ ತಾನಾಗಿ, ಎಂದರೆ ಗಮನವಿತ್ತು ಯೋಚಿಸದೇ ಸರಿಯಾಗಿ ಬ್ರೇಕ್ ಹಾಕಿಬಿಡುತ್ತಾನೆ. ಒಂದು ಅಭ್ಯಾಸದಿಂದ ಬಹಳಷ್ಟು ಶಕ್ತಿ ಉಳಿತಾಯವಾಗುತ್ತದೆ. ರೂಢಮೂಲವಾದ ಆ ಒಂದು ಅಭ್ಯಾಸದೊಂದಿಗೆ ಇನ್ನೊಂದು ಪುಟ್ಟ ರಚನಾತ್ಮಕ ಅಭ್ಯಾಸವನ್ನು ಪ್ರಾರಂಭಿಸಬಹುದು. ನಿತ್ಯವೂ ಸ್ನಾ...

ಅಸಾಧ್ಯವೂ ಸಾಧ್ಯ ಗ್ರಂಥ : ಬದುಕಲು ಕಲಿಯಿರಿ part : 42

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ :  42   ಅಸಾಧ್ಯವೂ ಸಾಧ್ಯ  ಸುಮಾರು ಐವತ್ತು ವರ್ಷಗಳ ಹಿಂದೆ ಆಂಗ್ಲ ಮಾಸಪತ್ರಿಕೆಯೊಂದರಲ್ಲಿ ಜಪಾನ್ ಪ್ರವಾಸದಿಂದ ಹಿಂದಿರುಗಿದ ಭಾರತೀಯರೊಬ್ಬರು 'ಜಪಾನ್ ಮಹಾರಾಷ್ಟ್ರವಾಗಲು ಕಾರಣವೇನು?' ಎಂಬ ಲೇಖನವನ್ನು ಪ್ರಕಟಿಸಿದರು. ಅವರ ಹಲವು ಅನುಭವಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಓದುಗರ ಅವಗಾಹನೆಗೆ ತರುತ್ತಲಿದ್ದೇನೆ. ಅರ್ಧಶತಮಾನದ ಹಿಂದೆಯೇ ಒಂದು ಜನಾಂಗ ಸಾಮಾಜಿಕವಾಗಿ ಶಿಸ್ತು, ಶಾಂತಿ ಸಹಕಾರ ಭಾವನೆಯನ್ನು ಕಾರ್ಯರೂಪಕ್ಕೆ ತಂದ ಒಂದು ಘಟನೆ ಅದು:  'ಜಪಾನಿನ ಒಂದು ಹಳ್ಳಿಯಲ್ಲಿ ಎರಡು ದಿನ ತಂಗಿದ್ದೆ. ಅಲ್ಲೊಂದು ಬಿಸಿ ನೀರಿನ ಊಟೆ (ಬುಗ್ಗೆ) ಇತ್ತು. ಅಲ್ಲಿಗೆ ಒಂದು ಜಪಾನೀ ಪ್ರವಾಸಿಗಳ ಗುಂಪು ಬಂದಿತ್ತು. ಸುಮಾರು ಐನೂರು ಮಂದಿ ವಯಸ್ಕರೂ, ನೂರೈವತ್ತು ಮಂದಿ ಮಕ್ಕಳೂ ಆ ತಂಡದಲ್ಲಿದ್ದರು. ಅಷ್ಟು ಮಂದಿ ಅಲ್ಲಿ ಸೇರಿದ್ದಾರೆಂಬುದನ್ನು ಪ್ರತ್ಯಕ್ಷ ನೋಡದಿದ್ದರೆ ಊಹಿಸುವಂತೆಯೂ ಇರಲಿಲ್ಲ. ಎಲ್ಲರೂ ಅಷ್ಟೊಂದು ಮೌನವಾಗಿದ್ದುಕೊಂಡು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು! ಅಲ್ಲಿ ಒಂದು ಸಭಾಂಗಣದಲ್ಲಿ ಸಹಸ್ರಾರು ಮಂದಿ ಕಿಕ್ಕಿರಿದು ತುಂಬಿದ್ದರೂ ಪೂರ್ಣ ಮೌನ ನೆಲಸಿರುತ್ತದೆ!' ನಡತೆಯಲ್ಲಿ ನಯ ಗಾಂಭೀರ್ಯ, ದುಡಿಮೆಯಲ್ಲಿ ಆಸಕ್ತಿ ಮತ್ತು ಏಕಾಗ್ರತೆ, ಪ್ರಾಮಾಣಿಕತೆ, ಸರಳ ಜೀವನವೇ ಮೊದಲಾದ ಗುಣಗ...

ಮಕ್ಕಳ ಮೇಲ್ಮೆಗೆ ಗ್ರಂಥ : ಬದುಕಲು ಕಲಿಯಿರಿ part : 41

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು: ಸ್ವಾಮಿ ಜಗದಾತ್ಮಾನಂದಜಿ  ಭಾಗ : 41   ಮಕ್ಕಳ ಮೇಲ್ಮೆಗೆ   ಈಗಿನ ದಿನಗಳಲ್ಲಿ ಎಷ್ಟೋ ಮಂದಿ ತಂದೆತಾಯಂದಿರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ವೆಚ್ಚ ಮಾಡಲು ಹಿಂಜರಿಯುವುದಿಲ್ಲ. ಮಕ್ಕಳ ಭವಿಷ್ಯ ಭವ್ಯವಾಗಬೇಕೆಂಬ ಅವರ ಕನಸು ಸಹಜವಾದುದೇ. ಆದರೆ ತಮ್ಮ ಮಕ್ಕಳು ಕಲಿಕೆಯ ಸಮಯದಲ್ಲಿ ಎಂಥ ಯೋಚನೆ ಭಾವನೆಗಳನ್ನು ಸಂಗ್ರಹಿಸುತ್ತಿದ್ದಾರೆ, ಎಂಥ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಕುರಿತು ಅವರು ಜಾಗರೂಕರಾಗಿದ್ದಾರೆಯೇ? ಓದು ಬರಹ ಕಲಿತ ಮಕ್ಕಳು ಜೀವನ ಸಂಗ್ರಾಮವನ್ನು ಎದುರಿಸಲು ಸಹಾಯಕವಾಗುವ ವಿಚಾರಗಳಿಗಿಂತಲೂ ಮನುಷ್ಯರ ದೌರ್ಬಲ್ಯಗಳನ್ನು ರಂಜಕವಾಗಿ ತೋರಿಸುವ, ವರ್ಣಿಸುವ ಅಸಂಖ್ಯ ಚಲನಚಿತ್ರ ಮತ್ತು ಬರಹಗಳಿಂದ ಸಾಕಷ್ಟು ಪ್ರಭಾವಿತರಾಗುತ್ತಾರೆ. ಸಂಶೋಧಕ ವಿಜ್ಞಾನಿಗಳ, ಸಾಹಸೀ ಉದ್ಯಮಶೀಲ ವ್ಯಕ್ತಿಗಳ, ಸ್ವಾರ್ಥ ತ್ಯಾಗಿಗಳ, ಕರ್ಮವೀರರ, ದೇಶಪ್ರೇಮಿ ಸಮಾಜಸೇವಕರ, ದೈವವನ್ನು ನೆಚ್ಚಿ ಬದುಕಿದ ಸಾಧು ಸಂತರ ಜೀವನ ಸಂದೇಶಗಳನ್ನು ಅವರು ಓದುವುದೇ ಇಲ್ಲವೆಂದರೂ ಸಲ್ಲುವುದು. ಮನುಷ್ಯರ ಶೀಲ ಸಂವರ್ಧನೆಗೆ ಬೇಕಾಗುವ ಸಾಮಗ್ರಿಗಳನ್ನು ಬೆಳವಣಿಗೆಯ ಅತ್ಯುತ್ತಮ ಸಮಯದಲ್ಲಿ ಮಕ್ಕಳಿಗೆ ನೀಡಲಾಗದಿರುವುದು ಒಂದು ದೊಡ್ಡ ದೌರ್ಭಾಗ್ಯ ಮಾತ್ರವಲ್ಲ, ನಮ್ಮ ಶಿಕ್ಷಣತಜ್ಞರೆನ್ನಿಸಿಕೊಂಡವರ, ಹೆತ್ತವರ ಅಸಹಾಯಕತೆ ಅಥವಾ ದೂರದರ್ಶಿತ್ವದ ಅಭಾವಕ್ಕೆ ಹಿಡಿದ ಕನ್ನಡಿಯೂ ಹೌ...

ವಿಭೂತಿ ಪೂಜೆ ಗ್ರಂಥ : ಬದುಕಲು ಕಲಿಯಿರಿ part : 40

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು ,: ಸ್ವಾಮಿ ಜಗದಾತ್ಮಾನಂದಜಿ ಭಾಗ : 40   ವಿಭೂತಿ ಪೂಜೆ   ನೀವು ಯಾರನ್ನು ಹೃತ್ಪೂರ್ವಕವಾಗಿ ಗೌರವಿಸಿ ಪ್ರೀತಿಸುವಿರೊ, ಅವರ ಗುಣಗಳನ್ನೂ ಆದರ್ಶವನ್ನೂ ನಿಮ್ಮದಾಗಿ ಮಾಡಿಕೊಳ್ಳುವಿರಿ. ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮಾ ಗಾಂಧೀಜಿಯವರನ್ನು ಜನಾಂಗವೇ ಪ್ರೀತಿಸಿ ಗೌರವಿಸಿತು. ಎಂಥ ಸ್ವಾರ್ಥತ್ಯಾಗಿ ಮೃತ್ಯುಂಜಯ ಕರ್ಮವೀರರು ಆಗ ಉದಯಿಸಿದರು!  ಅಲೆಕ್ಸಿಸ್ ಕೆರೆಲ್ ಅವರ ಮಾತನ್ನು ಕೇಳಿ: 'ಉದಾತ್ತ ಗುಣಗಳಿಂದ ಶೋಭಿಸುವ ಉನ್ನತ ಮಟ್ಟದ ವ್ಯಕ್ತಿಗಳನ್ನು ಶ್ರದ್ಧಾಭಕ್ತಿಗಳಿಂದ ನೋಡುವ “ವಿಭೂತಿ ಪೂಜೆ" ಮಾನವನ ಆವಶ್ಯಕತೆಗಳಲ್ಲಿ ಒಂದು. ಅದು ಮಾನಸಿಕ ಪ್ರಗತಿಗೆ ಅವಶ್ಯವೂ ಹೌದು. ಪ್ರಜಾಸತ್ತಾತ್ಮಕ ದೇಶಗಳಲ್ಲಿ ಎಳೆಯರಿಗೆ ಮಾದರಿಯಾಗಬಲ್ಲ ವ್ಯಕ್ತಿಗಳೆಲ್ಲ ಸುದೈವದಿಂದ ಸಮಾಜದಲ್ಲಿ ಜೀವಂತರಾಗಿರುವವರಲ್ಲದೆ ಗತಿಸಿದ ವ್ಯಕ್ತಿಗಳೂ ಇದ್ದಾರೆ. ಅವರು ನಮ್ಮ ನಡುವೆ ಜೀವಂತವಾಗಿಯೇ ಇರುತ್ತಾರೆ. ಅವರನ್ನೂ ಅವರ ಜೀವನ ಸಂದೇಶಗಳನ್ನೂ ಕುರಿತು ನಾವು ಯೋಚಿಸಬಹುದು. ಅವರ ದನಿಯನ್ನು ಆಲಿಸಬಹುದು. ಸಿನೆಮಾ ನಟನಟಿಯರನ್ನು ಕುರಿತ ವಿಚಾರಕ್ಕಿಂತ ಕೋಲಾ, ದಾಂತೆ, ಪ್ಯಾಶ್ಚರ್ ಇವರ ಸತ್ಸಂಗ ಒಳಿತಲ್ಲವೇ? ಮಹಾವಿದ್ವಾಂಸರ, ವೀರರ, ಸಂತರ ಜೀವನ ಕಥೆಗಳಲ್ಲಿ ಅವ್ಯಯವಾದ ಆತ್ಮಶಕ್ತಿಯ ಸಂಚಯವಿದೆ. ಅವರು ಬಯಲು ನೆಲದಿಂದ ಎದ್ದು ನಿಂತ ಪರ್ವತ ಶಿಖರಗಳಂತಿದ್ದಾರೆ. ಎಷ್ಟು ಎತ್ತರಕ್ಕೆ ನಾವು ಏರಬಹ...

ಪರಿಸರದ ಪ್ರಭಾವ ಗ್ರಂಥ: ಬದುಕಲು ಕಲಿಯಿರಿ part : 39

 ಗ್ರಂಥ: ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 39    ಪರಿಸರದ ಪ್ರಭಾವ   ಪರಿಸರದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯೋಗ್ಯ ಮಾರ್ಗದರ್ಶನ ಮತ್ತು ತೀವ್ರ ಹಂಬಲದ ಪ್ರಯತ್ನಗಳಿಲ್ಲದಿದ್ದರೆ ಮನುಷ್ಯನ ಬಾಳು ಹೇಗೆ ರೂಪುಗೊಳ್ಳಬಹುದೆಂಬುದನ್ನು ತಿಳಿಸುವ ಒಂದು ನಿದರ್ಶನವಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಕೊಲೆಗಡುಕನಾಗಿ ಪರಿವರ್ತಿತನಾಗ ಬಹುದಾದ ವಿಧಾನದ ಬಗೆಗೆ ತಜ್ಞ ಸಂಶೋಧಕನ ಅಂಬೋಣ ಅದು.  'ಪ್ರಥಮ ಬಾರಿ ಕೊಲೆಯನ್ನು ಪ್ರತ್ಯಕ್ಷ ನೋಡಿದವನು ತೀವ್ರವಾಗಿ ಸಂಕಟಪಟ್ಟು ವಿಪರೀತ ಅಸಹ್ಯ ಭಾವನೆಯನ್ನು ಬೆಳೆಸಿಕೊಳ್ಳುವನು. ಕೆಲವು ಕಾಲ ಅಂಥ ಕೃತ್ಯಗಳ ಸಮೀಪದಲ್ಲೇ ಇರುತಿದ್ದರೆ ಮೆಲ್ಲನೆ ಹೊಂದಿಕೊಳ್ಳುತ್ತ ಅದನ್ನು ಸಹಿಸಿಕೊಳ್ಳುವನು. ದೀರ್ಘಕಾಲ ಕೊಲೆಗಡುಕರ ಸನಿಹದಲ್ಲಿದ್ದು ಕೊಲೆ ಹಿಂಸಾಕೃತ್ಯಗಳನ್ನು ಕಾಣುತ್ತ ಅವುಗಳ ಸಂಸ್ಪರ್ಶದಲ್ಲೇ ಇದ್ದವನು ಕ್ರಮೇಣ ಅವುಗಳಿಂದ ಪ್ರಭಾವಿತನಾಗಿ ಯಾವ ಹಿಂಸಾಕೃತ್ಯಕ್ಕಿಳಿಯಲೂ ಹಿಂಜರಿಯನು. '  ಜೈಲಿನಲ್ಲೇ ಬದುಕಿನ ಹೆಚ್ಚಿನ ದಿನಗಳನ್ನು ಕಳೆದ ಕೈದಿಗಳು ಶಿಕ್ಷಾವಧಿಯ ನಂತರ ಬಿಡುಗಡೆ ಹೊಂದಿ ಹೊರಗೆ ಬಂದರೂ ದಿಕ್ಕುತೋಚದಂತಾಗಿ ಅಧಿಕಾರಿಯನ್ನು ತಿರುಗಿ ಜೈಲಿಗೆ ಸೇರಿಸಿಕೊಳ್ಳಿ' ಎಂದು ಕೇಳಿಕೊಳ್ಳುವುದೂ ಇದಕ್ಕೆ!  ಹೊಲಸಿನ ಮಧ್ಯೆ ವಾಸಿಸುತ್ತ ಕ್ರಮೇಣ ಮನುಷ್ಯರು ಎಲ್ಲ ಶುಚಿತ್ವದ ನಿಯಮಗಳನ್ನೂ ಮರೆತು ಅಂಥ ಪರಿಸರದಿಂದ ಮೇಲಕ್ಕೇಳಲಾರದೆ ಹೇಗ...

ನಿಮ್ಮ ಅಭ್ಯಾಸಗಳೇ ನೀವು ಗ್ರಂಥ : ಬದುಕಲು ಕಲಿಯಿರಿ part: 38

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಜಗದಾತ್ಮಾನಂದಜಿ ಭಾಗ : 38  ನಿಮ್ಮ ಅಭ್ಯಾಸಗಳೇ ನೀವು   ಮನುಷ್ಯ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಒಳಿತು ಕೆಡಕುಗಳ ಮತ್ತು ಚಾರಿತ್ರ್ಯ ನಿರ್ಮಾಣದ  ಹಿನ್ನೆಲೆಯಲ್ಲಿ ಯೋಚನೆ, ಭಾವನೆ ಮತ್ತು ಚಟುವಟಿಕೆ ಇವುಗಳಿಗೆ ಸಂಬಂಧಿಸಿದ ಅಭ್ಯಾಸಗಳು ಪ್ರಮುಖ ಪಾತ್ರವಹಿಸುತ್ತವೆ. ಒಳಿತೋ, ಕೆಡುಕೋ ಒಂದೇ ಕೆಲಸವನ್ನು ಪದೇ ಪದೇ ಮಾಡುತ್ತ ಅದು ನಮ್ಮ ಮನಸ್ಸು ಮತ್ತು ನರಮಂಡಲವನ್ನು ಎಷ್ಟು ಬಲವತ್ತರವಾಗಿ ವ್ಯಾಪಿಸಿಬಿಡುತ್ತದೆ ಎಂದರೆ ರೂಢ ಕ್ರಿಯೆಗಳಂತೆ ಸಂದರ್ಭವೊದಗಿದಾಗ ಪ್ರಯತ್ನವಿಲ್ಲದೆ ಸಹಜ ಪ್ರತಿಕ್ರಿಯೆ ನಡೆಯುತ್ತದೆ!  ನಿವೃತ್ತ ಸೈನಿಕನೊಬ್ಬ ಬೀದಿಯಲ್ಲಿ ಆಹಾರ ಸಾಮಗ್ರಿಯ ಹೊರೆಯನ್ನು ಹೊತ್ತುಕೊಂಡು ಹೋಗುತ್ತಿದ್ದ. ತುಂಟ ಹುಡುಗನೊಬ್ಬ ಆ ಸೈನಿಕನು ಆ ಮಾರ್ಗವಾಗಿ ಹೋಗುತ್ತಿರುವುದನ್ನು ಹಲವು ಬಾರಿ ನೋಡಿದ್ದ. ಒಂದು ದಿನ ಚರಂಡಿಯ ಸಮೀಪದಲ್ಲಿ ಸೈನಿಕ ಹೊರೆಯನ್ನು ಹೊತ್ತು ಅನ್ಯಮನಸ್ಕನಾಗಿ ನಡೆದು ಹೋಗುತ್ತಿದ್ದಾಗ ಹುಡುಗ ಗಟ್ಟಿಯಾಗಿ 'ಆಟೆನ್‌ಶನ್' ಎಂದು ಕೂಗಿ ಕೊಂಡ. 'ಆಟೆನ್‌ಶನ್' ಶಬ್ದ ಕಿವಿಯ ಮೇಲೆ ಬೀಳುತ್ತಲೇ ಸೈನಿಕ ತಲೆಯ ಮೇಲಿನ ಹೊರೆಯನ್ನು ಆಧರಿಸಿ ಹಿಡಿದಿದ್ದ ಕೈಗಳನ್ನು ಥಟ್ಟನೆ ಕೆಳಕ್ಕೆ ಬಿಟ್ಟು ನೆಟ್ಟಗೆ ನಿಂತು ಸೆಲ್ಯೂಟ್ ಹೊಡೆಯಲು ಸಿದ್ಧನಾದ. ಹೊತ್ತುಕೊಂಡಿದ್ದ ಹೊರೆ ಕೆಳಗೆ ಚರಂಡಿಯಲ್ಲಿ ಬಿದ್ದು ಸಂಗ್ರಹಿಸಿದ ಸಾಮಾನು ಚೆಲ್ಲಾಪಿಲ್ಲಿಯಾಗಿ ಚೆದುರಿತು....

ಅಭ್ಯಾಸದ ಅದ್ಭುತಗಳು ಗ್ರಂಥ : ಬದುಕಲು ಕಲಿಯಿರಿ part : 37

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ  ಭಾಗ : 37   ಅಭ್ಯಾಸದ ಅದ್ಭುತಗಳು   ಸ್ಯಾಮ್ಯುಯೆಲ್    ಸ್ಮಾಲ್ಸ್ ತಮ್ಮ 'ಸ್ವಸಹಾಯ' ಎನ್ನುವ ಪುಸ್ತಕದಲ್ಲಿ ರಾಬರ್ಟ್ ಪೀಲ್ ಅವರನ್ನು ಕುರಿತ ಒಂದು ಸುಂದರ ಉದಾಹರಣೆ ನೀಡಿದ್ದಾರೆ. ಬಾಲ್ಯದಿಂದಲೇ ಪೀಲ್ ಅವರಿಗೆ ಭಾಷಣ ಕಲೆಯನ್ನು ಕಲಿಸಲು ಅವರ ತಂದೆ ಅವರನ್ನು ಒಂದು ವೇದಿಕೆಯ ಮೇಲೆ ನಿಲ್ಲಿಸಿ ಮಾತನಾಡುವಂತೆ ಪ್ರೋತ್ಸಾಹಿಸುತ್ತಿದ್ದರು. ಚರ್ಚಿನಲ್ಲಿ ಕೇಳಿದ್ದ ಭಾನುವಾರದ ಉಪನ್ಯಾಸವನ್ನು ಪೀಲ್ ಪುನರುಚ್ಚರಿಸಬೇಕಾಗಿತ್ತು. ಮೊದಮೊದಲು ಅಂಥ ಯಾವ ಪ್ರಗತಿಯೂ ಕಾಣಿಸಲಿಲ್ಲ. ಕ್ರಮೇಣ ನಿಯಮಿತ ನಿರಂತರ ಪ್ರಯತ್ನದಿಂದ ಅಸಾಧಾರಣ ಅವಧಾನ ಏಕಾಗ್ರತೆಗಳನ್ನು ಅವರು ಗಳಿಸಿದರು. ದೀರ್ಘಕಾಲ ಮಾಡಿದ ಉಪನ್ಯಾಸಗಳನ್ನೂ ಯಾವ ಟಿಪ್ಪಣಿಯ ಸಹಾಯವಿಲ್ಲದೇ ಚಾಚೂ ತಪ್ಪದೇ ಒಂದೇ ಒಂದು ಶಬ್ದವನ್ನೂ ಬಿಡದೆ ಪುನರುಚ್ಚರಿಸುವ ಸಾಮರ್ಥ್ಯವನ್ನು ಪಡೆದರು. ಮುಂದೆ ಪಾರ್ಲಿಮೆಂಟಿನಲ್ಲಿ ವಿರೋಧಿಗಳ ಹಲವಾರು ಪ್ರಶ್ನೆಗಳನ್ನು ಕ್ರಮವಾಗಿ ಉತ್ತರಿಸುವ ಅವರ ಅದ್ಭುತ ಸ್ಮೃತಿಶಕ್ತಿಯು ಎಲ್ಲರನ್ನೂ ಅಚ್ಚರಿಗೊಳಿಸಿತು.  ಆ ಶಕ್ತಿಯ ಬೆಳವಣಿಗೆಗೆ ಬಾಲ್ಯದಲ್ಲೇ ತಂದೆಯ ಪ್ರೇರಣೆಯಂತೆ ಅವರು ರೂಢಿಸಿಕೊಂಡಿದ್ದ ಅಭ್ಯಾಸದ ವಿಚಾರ ಎಲ್ಲರಿಗೂ ತಿಳಿದಿರಲಿಲ್ಲ.  ಓದು ಬರಹದ ಆವಿಷ್ಕಾರಕ್ಕೆ ಮೊದಲೇ, ನಿಯಮಿತ ಅಭ್ಯಾಸದಿಂದ ವೇದೋಪನಿಷತ್ತುಗಳನ್ನೂ ಸಹಸ್ರಾರು ...

ಯೋಚನೆಯೇ ರೂವಾರಿ ಗ್ರಂಥ : ಬದುಕಲು ಕಲಿಯಿರಿ part : 36

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 36   ಯೋಚನೆಯೇ ರೂವಾರಿ  ಮನುಷ್ಯ ಜೀವನದ ಮೇಲೆ ಪ್ರಭಾವ ಬೀರುವ ಅತ್ಯಂತ ಪ್ರಮುಖವಾದ ಸಂಗತಿಗಳು ಯೋಚನೆಗಳು ಮತ್ತು ಭಾವನೆಗಳು ಎಂಬುದು ಬೆಳಕಿನಷ್ಟು ಸ್ಪಷ್ಟ.  ಪ್ರಗತಿ ಪಥದಲ್ಲಿ ನಡೆಯಬೇಕೆನ್ನುವ ಯಾವ ವ್ಯಕ್ತಿಯೇ ಆಗಲಿ ಯೋಚನೆಯ ಈ ಮಹಾಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು.  ಪ್ರತಿಯೊಂದು ಯೋಚನೆ ಭಯ, ಸಂಶಯಗಳಿಂದ ಕೂಡಿಕೊಂಡು ಹೊರಮುಖವಾಗಿ ಹರಿದು ಕಾರ್ಯರೂಪಕ್ಕೆ ಬಂದಾಗ ಅದು ನಿಷೇಧಾತ್ಮಕವಾಗಿ ಕೊನೆಗೊಳ್ಳುವುದು.  ಪ್ರತಿಯೊಂದು ಯೋಚನೆ ಆತ್ಮವಿಶ್ವಾಸ ಮತ್ತು ಆಶಾಭಾವನೆಯಿಂದ ಕೂಡಿ ಹೊರಮುಖವಾಗಿ ಹರಿದು ಕಾರ್ಯರೂಪಕ್ಕೆ ಬಂದಾಗ  ಅದು ರಚನಾತ್ಮಕವಾಗಿ ಪರ್ಯವಸಾನವಾಗುವುದು. ಮನಸ್ಸಿನ ಶಕ್ತಿಯನ್ನು ಕುರಿತು ನಿಸ್ಸಂದಿಗ್ಧವಾದ ಒಂದು ನಿಯಮ ಹೀಗಿದೆ : 'ಸದೃಶವಾದ ಯೋಚನೆಗಳು ತತ್‌ಸದೃಶ ಯೋಚನೆಗಳೆಡೆಗೆ ಎಳೆಯುತ್ತವೆ'.  ಇದನ್ನು ಸರಳವಾದ ಮಾತಿನಲ್ಲಿ ಹೇಳುವುದಾದರೆ ಒಳ್ಳೆಯ ಯೋಚನೆಗಳನ್ನು ಮಾಡುತ್ತಾ ಹೋದರ ಅವು ಒಳ್ಳೆಯ ವ್ಯಕ್ತಿಗಳೆಡೆಗೆ, ವಸ್ತುಗಳೆಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ.  ಕೆಟ್ಟ ಯೋಚನೆಗಳನ್ನು ಮಾಡುತ್ತ ಹೋದರೆ ಅವು ಕೆಟ್ಟ ವ್ಯಕ್ತಿಗಳೆಡೆಗೆ, ಕೆಟ್ಟ ವಸ್ತುಗಳೆಡೆಗೆ ನಮ್ಮನ್ನು ಸೆಳೆಯುತ್ತವೆ. ಆಧುನಿಕ ಪ್ರಯೋಗ ಪರೀಕ್ಷಣಗಳಿಂದ ಸತ್ಯವೆಂದು ಸಾರಲ್ಪಡುವ ಈ ವಿಚಾರವನ್ನು ಎರಡೂವರೆ ಸಹಸ್ರವರ್ಷಗಳ...

ಚಿತ್ರಗುಪ್ತ 'ನಿದ್ದಾನೆ ! ಎಚ್ಚರಿಕೆ ! ಗ್ರಂಥ : ಬದುಕಲು ಕಲಿಯಿರಿ part : 35

 ಗ್ರಂಥ : ಬದುಕಲು ಕಲಿಯಿರಿ ಲೇಖಕರು : ಸ್ವಾಮಿ ಜಗದಾತ್ಮಾನಂದಜಿ  ಭಾಗ : 35  ಚಿತ್ರಗುಪ್ತ 'ನಿದ್ದಾನೆ ! ಎಚ್ಚರಿಕೆ !   ನಾವು ಯೋಚಿಸುವುದು ಚಿತ್ರದ ಮೂಲಕ. ಶಬ್ದಗಳು ಚಿತ್ರಗಳನ್ನು ನೆನಪಿಗೆ ತರುವ ಸಂಕೇತಗಳು ಅಷ್ಟೇ. 'ಮರ' ಎಂದು ಉಚ್ಚರಿಸಿದಾಗಲೇ ಮರದ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. 'ಆಲದ ಮರ, ಮಾವಿನ ಮರ' ಎಂದಾಗ ಚಿತ್ರಗಳಲ್ಲಿ ವೇಗವಾಗಿ ಉಂಟಾಗುವ ಬದಲಾವಣೆಯನ್ನು ನಾವು ಗ್ರಹಿಸಬಹುದು.  'ನಾನು ಡಾಕ್ಟರ್ ಆಗುತ್ತೇನೆ. ದಿಲ್ಲಿಗೆ ಹೋಗುತ್ತೇನೆ, ಮನೆ ಕಟ್ಟುತ್ತೇನೆ, ವಿಜ್ಞಾನ ವಿಚಾರ ತಿಳಿಯುತ್ತೇನೆ, ಆಫೀಸರ್ ಆಗುತ್ತೇನೆ, ಮದುವೆಯಾಗುತ್ತೇನೆ, ನಟನಾಗುತ್ತೇನೆ, ನಾನಾ ಊರುಗಳನ್ನು ಸಂಚರಿಸುತ್ತೇನೆ, ಶತ್ರುವಿಗೆ ಬುದ್ದಿ ಕಲಿಸುತ್ತೇನೆ' ಎಲ್ಲವೂ ಮಾನಸಿಕ ಚಿತ್ರಗಳೇ! ಮನಸ್ಸು ಇವುಗಳ ಬಗೆಗೆ ಇನ್ನೂ ವಿವರಗಳನ್ನು ಕಲ್ಪಿಸುತ್ತ ಹೋಗುತ್ತದೆ. ನಾವು ಬಾಲ್ಯದಿಂದಲೇ ಸಂಗ್ರಹಿಸುತ್ತಿರುವ ಅಸಂಖ್ಯ ಚಿತ್ರಗಳು ಅಥವಾ ಯೋಚನೆಗಳು ನಮ್ಮ ಮನಸ್ಸಿನಲ್ಲಿರುತ್ತವೆ. ಅವು ಮನಸ್ಸಿನ ಆಳದಲ್ಲಿ ಹುದುಗಿರುತ್ತವೆ. ಬೇಕಾದಾಗ ಮೇಲಕ್ಕೆ ಬರುತ್ತವೆ.  'ಹಲಸಿನ ಹಣ್ಣು' ಎಂದಾಗ ಹಣ್ಣಿನ ಚಿತ್ರ ಮತ್ತು ಬಣ್ಣದೊಂದಿಗೆ ಹಿಂದೆ ನೀವು ತಿಂದ ಹಣ್ಣಿನ ರುಚಿಯೂ, ಅದರ ಸುವಾಸನೆಯೂ ಮನಸ್ಸಿಗೆ ಬಂದು ಬಾಯಲ್ಲಿ ನೀರೂರುವುದಿಲ್ಲವೇ?    ಎಂದರೆ ಕೇವಲ ಚಿತ್ರ ಮಾತ್ರವಲ್ಲ, ನೀವು ಪಡೆದ ಪ್ರತಿಯೊಂದು ಪ್ರತಿಯೊಂದು...

ಯೋಚನೆಯ ಪತ್ತೆದಾರ ಗ್ರಂಥ : ಬದುಕಲು ಕಲಿಯಿರಿ part : 34

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು  : ಸ್ವಾಮಿ ಜಗದಾತ್ಮಾನಂದಜಿ  ಭಾಗ : 34  ಯೋಚನೆಯ ಪತ್ತೆದಾರ  ರಷ್ಯಾ ದೇಶದ ವೂಲ್ಸ್ ಮೆಸ್ಸಿಂಗ್ ತನ್ನ ಅತೀಂದ್ರಿಯ ಶಕ್ತಿಗಾಗಿ ಪ್ರಸಿದ್ಧನಾಗಿದ್ದ. ಇತರ ಮನಸ್ಸಿನಲ್ಲಿ ಏನಿದೆ? ಎಂಬುದನ್ನು ಅವನು ಸರಿಯಾಗಿ ಸ್ಪಷ್ಟವಾಗಿ ಓದಬಲ್ಲ ಸಿದ್ಧಿಯನ್ನು ಪಡೆದಿದ್ದ. ಸರ್ವಾಧಿಕಾರಿ ಸ್ಟಾಲಿನ್‌ನಿಂದ ಪರೀಕ್ಷಿತನಾಗಿ ಸೈ ಎನ್ನಿಸಿಕೊಂಡವನಾತ. ಜಗತ್ತಿನ ಅಂದಿನ ಪ್ರಮುಖರಲ್ಲಿ ಐನ್‌ಸ್ಟಿನ್, ಫ್ಲ್ಯಾಡ್ ಮತ್ತು ಗಾಂಧೀಜಿ ಇವರನ್ನು ಭೇಟಿಯಾಗಿ ತನ್ನ ಸಿದ್ಧಿಯನ್ನು ಪ್ರದರ್ಶಿಸಿ ಅವರನ್ನು ಬೆರಗುಗೊಳಿಸಿದ ಆತ, 1927 ರಲ್ಲಿ ಭಾರತಕ್ಕೆ ಬಂದಾಗ ಸಬರಮತಿ ಆಶ್ರಮದಲ್ಲಿ ಗಾಂಧೀಜಿಯನ್ನು ಕಂಡು ಮೌನವಾಗಿ ಅವರು ನೀಡಿದ ಆದೇಶವನ್ನು ಮಾಡಿ ತೋರಿಸಿದವನು. ಎರಡನೇ ಮಹಾ ಯುದ್ಧದ ಹೊತ್ತಿಗೆ ಹಿಟ್ಲರನ ಮೃತ್ಯುಪಾಶವನ್ನು  ಹೇಗೋ ತಪ್ಪಿಸಿಕೊಂಡು ಪೋಲೆಂಡನ್ನೂ ಬಿಟ್ಟು ರಷ್ಯಾಕ್ಕೆ ಬಂದು, ಸಾರ್ವಜನಿಕ ಪ್ರದರ್ಶನಗಳನ್ನು ನೀಡುತ್ತಿದ್ದರೂ, ವೈಯಕ್ತಿಕ ಹಾಗೂ ರಾಜಕೀಯ ಭವಿಷ್ಯಗಳನ್ನು ಕುರಿತು ಆತ ಹೇಳುತ್ತಿರಲಿಲ್ಲ. ನೆರೆದ ಜನರಲ್ಲಿ ಯಾರಾದರೂ ಮೌನವಾಗಿದ್ದು ಕೊಂಡು ಆತನಿಗೆ ಮಾನಸಿಕವಾಗಿ ಆಜ್ಞೆ ನೀಡಿದರೆ, ಅದನ್ನವನು ಗ್ರಹಿಸಿಕೊಂಡು ಅಂತೆಯೇ ವರ್ತಿಸುತ್ತಿದ್ದ. 'ನಾನು ಮಾಡಬೇಕೆಂದು ನೀವು ಹೇಳಲು ಬಯಸಿರುವ ಅಥವಾ ಸಂಕಲ್ಪಸಿರುವ  ಆಜ್ಞೆಯನ್ನು ಮಾತ್ರ ಮನಸ್ಸಿನಲ್ಲಿ ಸ್ಪಷ್ಟವಾಗಿ ಚಿಂತಿಸಿ' ...

ಗ್ರಂಥ : ಬದುಕಲು ಕಲಿಯಿರಿ part : 33

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು :  ಸ್ವಾಮಿ ಜಗದಾತ್ಮಾನಂದಜಿ  ಭಾಗ : 33  ನಮ್ಮನ್ನು ದುರ್ಬಲಗೊಳಿಸುವ ನೂರಾರು ಕತೆಗಳು, ಘಟನೆಗಳು, ಚಿತ್ರಗಳು, ಧಾರ್ಮಿಕ ಮತ್ತು ರಾಜಕೀಯದ ರಾಗದ್ವೇಷಗಳು ನಿತ್ಯವೂ ಪ್ರಸಾರವಾಗುತ್ತಿರಬಹುದು. ಅವು ಯುವಕರ ಮನಸ್ಸನ್ನು ತಲ್ಲಣಗೊಳಿಸಲೂಬಹುದು. ಆದರೆ ಬದುಕು ಎಷ್ಟೇ ನಿರಾಶಾದಾಯಕವಾದರೂ ಅದನ್ನು ದಾಟಿ ಮೇಲೇರಲು ಬೇಕಾದ ಶಕ್ತಿ ನಮ್ಮಲ್ಲೇ ಇದೆ, ನಮ್ಮ ಸಮೀಪದಲ್ಲೇ ಇದೆ, ನಮ್ಮ ಅಂತರ್ಯದ ಆಳದಲ್ಲೇ ಇದೆ. ಜಾತಿ ಮತ ಕುಲ ಗೋತ್ರ ಭೇದವಿಲ್ಲದೇ ಪ್ರತಿಯೊಬ್ಬ ಮನುಷ್ಯನ ಮನಸ್ಸಿನ ಆಳದಲ್ಲಿ ಸಾವಿಲ್ಲದ, ನೋವಿಲ್ಲದ ದೈವೀಶಕ್ತಿ ಇದೆ. ಮನೋವಿಜ್ಞಾನಿ ಇಂದು ಈ ಮಾತನ್ನು ಹೇಳುವ ಸ್ಥಿತಿಯಲ್ಲಿದ್ದಾನೆ. ಒಟ್ಟಿನಲ್ಲಿ ನಮಗೆ ಬೇಕಾದ ಮಾರ್ಗದರ್ಶನ ಶಕ್ತಿ, ಸಹಾಯ, ಸ್ಫೂರ್ತಿ, ಶಾಂತಿ ಇವೇ ಮೊದಲಾದ ಬದುಕನ್ನು ಬೆಳಗುವ ಅಂಶಗಳು ನಮ್ಮಲ್ಲಿವೆ. ಇಂಥ ಅಪಾರ ಶಕ್ತಿಯನ್ನು ಒಳಗಡೆ ಇರಿಸಿಕೊಂಡು ಗುಲಾಮರಂತೆ ವರ್ತಿಸಲು ಕಾರಣವೇನು? ಒಂದು: ಅಜ್ಞಾನ. ಇನ್ನೊಂದು : ಬಾಲ್ಯದಿಂದ ಬೆಳೆಸಿಕೊಂಡು ಬಂದ ನಿಷೇಧಾತ್ಮಕ ಭಾವನೆ. ಪ್ರತಿಯೊಂದು ನಿಷೇಧಾತ್ಮಕ ಭಾವನೆ ಅಥವಾ ಯೋಚನೆ, ಒಳಗಿನ ಆ ಅಪಾರವಾದ ಶಕ್ತಿಯನ್ನು ಪರಿಮಿತಗೊಳಿಸಿ ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ. ಪ್ರತಿಯೊಂದು ಆತ್ಮವಿಶ್ವಾಸದ ಮತ್ತು ರಚನಾತ್ಮಕ ಯೋಚನೆಯು ನಮ್ಮ ಅಭ್ಯುದಯ ಅಭಿವೃದ್ಧಿಗೆ ನೆರವಾಗುತ್ತದೆ.  ಈ ವಿವೇಕವಾಣಿಯನ್ನು ಮತ್ತೆ ಮತ...

ನಿಮಗೆ ನೀವೇ ಗ್ರಂಥ : ಬದುಕಲು ಕಲಿಯಿರಿ part : 32

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು ,: ಸ್ವಾಮಿ ಜಗದಾತ್ಮಾನಂದಜಿ   ಭಾಗ : 32   ನಿಮಗೆ ನೀವೇ   ಸತ್ತಮೇಲೆ ಜೀವಾತ್ಮನ ಅವಸ್ಥೆಯನ್ನು ಕುರಿತು ಪುರಾಣಗಳು ಹೇಳುವ ಕತೆಯನ್ನು ನೀವು ಕೇಳಿದ್ದೀರಾ? ಈ ಲೋಕದಲ್ಲಿ ಆತ ಮಾಡಿದ ತಪ್ಪಿಗಾಗಿ ನರಕದಲ್ಲಿ ಭೀಕರವಾದ ದಂಡನೆಯನ್ನು ಅನುಭವಿಸಬೇಕಾಗುತ್ತದಲ್ಲವೇ? ಅದನ್ನು ನೀವು ನರಕಯಾತನೆ ಎನ್ನುತ್ತೀರಷ್ಟೆ? ಅದಕ್ಕಿಂತಲೂ ಭೀಕರವಾದ ಯಮಯಾತನೆಯನ್ನು ನಾವಿಲ್ಲಿ ಅನುಭವಿಸಬೇಕಾಗುತ್ತದೆಂದು ಜೇಮ್ಸ್ ಹೇಳಿದ. ಕಾರಣ ಗೊತ್ತೇನು? ನಮ್ಮ ದುರಭ್ಯಾಸ ದುರ್ನಡತೆಗಳು.  'ತಪ್ಪು ದಾರಿಯಲ್ಲಿ ನಡೆಯುವ ಅಭ್ಯಾಸದಿಂದ ಈ ಜಗತ್ತಿನಲ್ಲಿ ನಾವು ನಿರ್ಮಿಸಿಕೊಳ್ಳುವ ನರಕ, ಪುರಾಣಗಳು ಹೇಳುವ ನರಕಕ್ಕಿಂತ ಕನಿಷ್ಠವಾದುದಲ್ಲ ಎಂದು ಆತ ಸಾರಿದ. ಹೌದು! ಪುರಾಣಗಳು ಹೇಳುವ ನರಕಕ್ಕಿಂತಲೂ ನಮ್ಮ ದುರ್ನಡತೆಗಳಿಂದ ನಾವೇ ನಿರ್ಮಿಸಿಕೊಳ್ಳುವ ನರಕ ಭಯಾನಕವಾದುದು. ಆಶ್ಚರ್ಯ! ನಮ್ಮ ನರಕವನ್ನು ನಿರ್ಮಿಸಿಕೊಳ್ಳುವವರು ನಾವೇ! ನರಕ ಮಾತ್ರವಲ್ಲ, ಸ್ವರ್ಗವನ್ನು ನಿರ್ಮಿಸಿಕೊಳ್ಳುವವರೂ ಹೌದು. ತಂದೆ ಮಾಡಿದ ಸಾಲವನ್ನು ಮಗ ತೀರಿಸಬಹುದು. ಅಣ್ಣ ಕಟ್ಟಿಸಲು ಪ್ರಾರಂಭಿಸಿದ ಸೌಧವನ್ನು ತಮ್ಮನು ಪೂರ್ಣಗೊಳಿಸಬಹುದು. ಆದರೆ ನಿಮ್ಮ ಹಸಿವು ನೀರಡಿಕೆಗಳನ್ನು ನೀವೇ ಪರಿಹರಿಸಿಕೊಳ್ಳಬೇಕಲ್ಲವೇ? ನಿಮ್ಮ ಸಮಸ್ಯೆಗಳಿಗೆ ನೀವೇ ಉತ್ತರ ಹುಡುಕಬೇಕು. ಇತರರೇನೋ ನಿಮಗೆ ಮಾರ್ಗದರ್ಶನ ಮಾಡಬಹುದು. ಆದರೆ ಆ ಮಾ...

ನನ್ನ ಸಮಯ ಅಮೂಲ್ಯ - ಗ್ರಂಥ : ಬದುಕಲು ಕಲಿಯಿರಿ PART 31

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ :  31   ನನ್ನ ಸಮಯ ಅಮೂಲ್ಯ   ಪ್ರಸಿದ್ಧ ಜನನಾಯಕರೂ, ಉದ್ಯಮಿಗಳೂ ಆದ ಹಿರಿಯರೊಬ್ಬರನ್ನು ನಾನು ಅವರ ಆಫೀಸಿನಲ್ಲಿ ಭೇಟಿಯಾದೆ. ಅವರ ಕೋಣೆಯಲ್ಲಿದ್ದ ಮೇಜಿನ ತುದಿಗೆ 'ನನ್ನ ಸಮಯ ಅಮೂಲ್ಯವಾಗಿದೆ' ಎಂಬ ಪುಟ್ಟ ಬೋರ್ಡನ್ನು ತೂಗಹಾಕಿದ್ದರು. ಏನಿದು? ಇವರ ಸಮಯ ಅಮೂಲ್ಯ, ನನ್ನ ಸಮಯ ಅಮೂಲ್ಯವಲ್ಲವೇ? ಎಂದು ಯೋಚಿಸುತ್ತ ತಿರುಗಿ ಅದೇ ವಾಕ್ಯವನ್ನು ಓದಿದೆ. ಯಾರು ಅಲ್ಲ ಎಂದವರು? ತನ್ನ ಸಮಯ ಅಮೂಲ್ಯವಾಗಿದೆ ಎಂಬುದನ್ನು ತಿಳಿಯದ ಹಲವರು ಇತರರ ಸಮಯವನ್ನು ಹಾಳು ಮಾಡಲೂ ಹಿಂಜರಿಯುವುದಿಲ್ಲ. ಅಂಥವರಿಗೆ ಎಚ್ಚರಿಕೆಯಾಗಿ ಅವರು ಅಲ್ಲಿ ಆ ಮಾತನ್ನು ಬರೆದಿದ್ದರು.   'ನನ್ನ ಸಮಯ ಅಮೂಲ್ಯವಾಗಿದೆ' ಎಂದು ಬರೆದಿರಿಸಿಕೊಂಡ ಅವರು ದಿನದಲ್ಲಿ ಹದಿನಾರು ಗಂಟೆಗಳಿಗಿಂತಲೂ ಹೆಚ್ಚು ಹೊತ್ತು ದುಡಿಯಬಲ್ಲರು. ವಿಶಾಲವಾಗಿ ಬೆಳೆದ ಸಂಸ್ಥೆಯ ನೂರಾರು ಸಮಸ್ಯೆಗಳಿಗೆ ಸಮಾಧಾನವನ್ನೂ, ಸೂಕ್ತ ಸಲಹೆಗಳನ್ನೂ ನೀಡಬಲ್ಲರು. ಅಲ್ಲಿ ಬರೆದ ಮಾತಿನ ಅರ್ಥವನ್ನು ಅವರು ಬದುಕಿನಲ್ಲಿ ಆಚರಿಸಿ, ಉಪದೇಶಿಸುವಂತಿತ್ತು.  ನೀವು ನಿಮ್ಮ ಮನಸ್ಸಿನ ಎದುರು ಆ ಮಾತುಗಳನ್ನು ಬರೆದ ಒಂದು ಬೋರ್ಡನ್ನು ತೂಗು ಹಾಕಿ. ನಿಜವಾಗಿಯೂ ನಿಮ್ಮ ಸಮಯ ಅಮೂಲ್ಯವಾಗಿದೆ. ಒಂದು ಸಣ್ಣ ಲೆಕ್ಕ ಮಾಡುತ್ತೀರಾ? ಒಂದು ವರ್ಷದಲ್ಲಿ 8760 ಗಂಟೆಗಳಿವೆಯಷ್ಟೆ! ಈ ಸಮಯವನ್ನು ನೀವು ಹೇಗೆ ...

ಬೇಗ ಬೇಗನೆ, ಮೆಲ್ಲ ಮೆಲ್ಲನೆ - ಗ್ರಂಥ : ಬದುಕಲು ಕಲಿಯಿರಿ PART 30

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ  ಜಗದಾತ್ಮಾನಂದಜಿ  ಭಾಗ : 30  ಬೇಗ ಬೇಗನೆ, ಮೆಲ್ಲ ಮೆಲ್ಲನೆ   ಬೇಗ ಬೇಗನೇ ಮುಂದುವರಿಯಲು ನೀವು ಮೆಲ್ಲ ಮೆಲ್ಲನೇ ನಡೆಯಬೇಕು. ಇದೆಂಥ ವಿರೋಧಾಭಾಸ ಎನ್ನಬಹುದು ನೀವು ಯೋಚಿಸಿ ನೋಡಿ. ಆಂಗ್ಲ ಭಾಷೆಯಲ್ಲಿನ hasten slowly ಎನ್ನುವ ಉಕ್ತಿಯನ್ನು ಕೇಳಿದ್ದೀರಾ? ಒಂದು ಪತ್ರಿಕಾ ಕಛೇರಿಗೆ ಒಬ್ಬ ಟೈಪಿಸ್ಟ್ ಹೊಸದಾಗಿ ಸೇರಿಕೊಂಡ. ಅವನು ವೇಗವಾಗಿ ತಪ್ಪಿಲ್ಲದೇ ಟೈಪ್ ಮಾಡುತ್ತಿದ್ದ. ಮ್ಯಾನೇಜರ್ ಅವನ ದಕ್ಷತೆಯನ್ನು ಕಂಡು ಸಂತುಷ್ಟರಾಗಿ 'ಉಳಿದವರಿಗೂ ವೇಗದ ರಹಸ್ಯವನ್ನು ತಿಳಿಸಿಕೊಡು' ಎಂದು ಆತನನ್ನು ಕೇಳಿಕೊಂಡರು. 'ವೇಗವಾಗಿ ಟೈಪು ಮಾಡಬೇಕಾದರೆ ಮೆಲ್ಲನೇ ಟೈಪ್ ಮಾಡಬೇಕು' ಎಂದು ಅವನು ರಹಸ್ಯ ಭೇದಿಸಿದಾಗ ಎಲ್ಲರೂ ಚಕಿತರಾದರು. ಅವನ ಅಭಿಪ್ರಾಯ ಇದು: 'ವೇಗವಾಗಿ ಟೈಪ್ ಮಾಡಬೇಕಾದರೆ ಮೊದಲು ಮೆಲ್ಲ ಮೆಲ್ಲನೇ ಟೈಪ್ ಮಾಡಬೇಕು. ಯಾವ ಆತುರ ಉದ್ವೇಗಗಳಿಲ್ಲದೇ ಒದ್ದಾಟ ಮಾಡದೇ, ಕೂಡಲೇ ವೇಗವನ್ನು ವರ್ಧಿಸುವ ಹಂಬಲವಿಲ್ಲದೇ ಟೈಪ್ ಮಾಡಬೇಕು. ಹೀಗೆ ಮಾಡಲು ಸದ್ಯದ ನಮ್ಮ ವೇಗವನ್ನು ಅರ್ಧಕ್ಕಿಳಿಸಬಹುದು. ಹಾಗೆ ವೇಗವನ್ನು ಅರ್ಧಕ್ಕಿಳಿಸಿದಾಗ ನಮ್ಮ ಗಲಿಬಿಲಿ ಗೊಂದಲ, ಎಲ್ಲಿ ತಪ್ಪಾಗುತ್ತದೆಯೋ ಎನ್ನುವ ಭೀತಿ ದೂರವಾಗುತ್ತದೆ. ಶಾಂತ ಚಿತ್ತರಾಗಿ ಆನಂದದಿಂದಲೇ ನಾವು ಟೈಪು ಮಾಡುತ್ತೇವೆ. ಹಾಗೆ ಒಂದು ವಾರ ಟೈಪು ಮಾಡುವಾಗ ನಮಗೆ ಗೊತ್ತಿರದಂತೆ ವೇಗವು ಹೆಚ್ಚಾಗಿರುವುದನ...

ಏಕಿಷ್ಟು ಅವಸರ ? - ಗ್ರಂಥ : ಬದುಕಲು ಕಲಿಯಿರಿ PART 29

 ಗ್ರಂಥ  : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ   ಭಾಗ :  29  ಏಕಿಷ್ಟು ಅವಸರ ?*   ಕೆಲವರ ಅವಸರ ಹೇಳತೀರದು. ಅವರು ಆಫೀಸಿನಿಂದ ಮನೆಗೆ ಓಡೋಡಿ ಬರುತ್ತಾರೆ, ಬೇಗ ಬೇಗನೇ ಊಟ ಮಾಡುತ್ತಾರೆ, ಎಲ್ಲ ಕೆಲಸಗಳಲ್ಲೂ ತಲೆ ಹಾಕುತ್ತಾರೆ. ಯಾವುದನ್ನೂ ಪೂರ್ಣ ಮಾಡುವುದಿಲ್ಲ. 'ಬೇಗ ಬೇಗನೇ' ಎನ್ನುವ ಪಲ್ಲವಿಯನ್ನು ಹಾಡುತ್ತಿರುತ್ತಾರೆ. ಐದು ವರ್ಷ ದಾಟಿರದಿದ್ದರೂ ಮಗುವನ್ನು ನೇರವಾಗಿ ಶಾಲೆಯಲ್ಲಿ ಮೂರನೇ ಕ್ಲಾಸಿಗೆ ಸೇರಿಸುವ ಹುಮ್ಮಸ್ಸು ಅವರದ್ದು. ಸ್ಟೇಷನ್‌ನಿಂದ ಟ್ರೈನ್ ಹೊರಟ ಮೇಲೇ ತರಲು ಮರೆತಿದ್ದ ಅತಿ ಮುಖ್ಯವಾದ ಕಾಗದಪತ್ರಗಳನ್ನು ನೆನಪಿಸಿಕೊಂಡು ಅವರು ಚಡಪಡಿಸುವರು. ಆಫೀಸಿನಿಂದ ಕಂಗಾಲಾಗಿ ಮನೆಗೆ ಬರುವುದನ್ನು ಕಂಡು ಅವರ ಹೆಂಡತಿ ಯಾವ ಹೊತ್ತಿಗೆ ಏನು ಗಂಡಾಂತರ ಕಾದಿದೆಯೋ ಎಂದು ನಡುಗುತ್ತಾಳೆ. ಅಲ್ಲೇ ಇರುವ ರೇಡಿಯೊ ಕೊಂಚ ತಿರುಗಿಸಿ ಸಂಗೀತ ಕೇಳಲು ಹೊರಡುತ್ತಾರೆ. ಒಂದೆರಡು ನಿಮಿಷ ಕೇಳಿದಂತೆ ಮಾಡಿ ಅಲ್ಲಿಗೇ ನಿಲ್ಲಿಸಿ, ಹತ್ತು ದಿನಗಳ ಹಿಂದೆ ಪುಸ್ತಕಾಲಯದಿಂದ ತಂದ ಗ್ರಂಥ ಬಿಡಿಸುತ್ತಾರೆ. ಅದನ್ನು ಹಿಂದಿರುಗಿಸಬೇಕು, ಪೂರ್ಣ ಓದಿ ಆಗಲಿಲ್ಲ ಎಂಬ ತವಕ. ಸ್ವಲ್ಪ ಹೊತ್ತು ಓದುವ ಶಾಸ್ತ್ರ ಮಾಡಿ ಅದನ್ನು ಅಲ್ಲೇ ಎಸೆಯುತ್ತಾರೆ. 'ಛೇ ಬೋರ್', 'ಬೇಸರ', 'ಆಯಾಸ' ಮೊದಲಾದ ಶಬ್ದಗಳನ್ನು ಅವರು ಜಪಿಸುತ್ತಾರೆ. ತಿಂಡಿ ಮುಗಿಸಿ ಆಟಕ್ಕೆ ಹೊರಟ ಮಗನನ್ನು ಕರೆದು 'ನೋಡೋ, ಅಲ್...

ಯೋಗ್ಯತೆಯ ಅಳತೆಗೋಲು - ಗ್ರಂಥ : ಬದುಕಲು ಕಲಿಯಿರಿ PART 28

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು  : ಸ್ವಾಮಿ  ಜಗದಾತ್ಮಾನಂದಜಿ   ಭಾಗ : 28  ಯೋಗ್ಯತೆಯ ಅಳತೆಗೋಲು   ಪ್ರಸಿದ್ಧ ಶಿಲ್ಪಕಲಾವಿದ ಮೈಕೇಲ್ ಎಂಜೆಲೋ ಅವನ ಕಲಾಕೇಂದ್ರಕ್ಕೆ ಒಮ್ಮೆ ಕಲಾಪ್ರೇಮಿ ಸಂದರ್ಶಕನೊಬ್ಬ ಬಂದನಂತೆ. ಮೈಕೇಲ್ ತಾನು ಸದ್ಯ ತಯಾರಿಸುತ್ತಿದ್ದ ಮೂರ್ತಿಯನ್ನು ಕುರಿತು ವಿವರಿಸುತ್ತಿದ್ದ. ಆ ಮೂರ್ತಿಯ ನಿರ್ಮಾಣ ಕಾರ್ಯವನ್ನು ನೋಡಲು ಆ ಸಂದರ್ಶಕನೇ ಹಿಂದೊಮ್ಮೆ ಬಂದಿದ್ದ. ಅವನು ಬಂದು ಹೋದಂದಿನಿಂದ ಏನೆಲ್ಲ ಕೆಲಸಗಳು ನಡೆದವು ಎಂಬುದನ್ನು ಮೈಕೇಲ್ ಹೇಳಿದ: 'ಆ ಭಾಗವನ್ನು ಸ್ವಲ್ಪ ಬದಲಿಸಿದೆ, ಕೈಗಳ ಮಾಂಸಖಂಡ ಬಲಿಷ್ಠವಾಗಿ ತೋರುವಂತೆ ಮಾಡಿದೆ, ತುಟಿಗಳಲ್ಲಿ ಕೊಂಚ ಭಾವ ಪ್ರಕಾಶವಾಗುವಂತೆ ಮಾಡಿದೆ, ಕಾಲುಗಳು ಶಕ್ತವಾಗಿ ಕಾಣುವಂಥ ಕೆತ್ತನೆಯ ಕೆಲಸ ಅಲ್ಪಸ್ವಲ್ಪ ನಡೆಯಿತು' ಎಂದ. ಸಂದರ್ಶಕ ಇನ್ನೂ ಕೆಲಸ ಮುಗಿಯಲಿಲ್ಲವೆನ್ನುವ ಭಾವನೆಯಿಂದಿರಬೇಕು, 'ಓಹ್, ಇಷ್ಟು ದಿನವೂ ಅತಿ ಸಾಮಾನ್ಯವಾದ ಸಣ್ಣಪುಟ್ಟ ಕೆಲಸಗಳನ್ನೇ ಮಾಡಿದುದೇ?' ಎಂದು ಉದ್ಗರಿಸಿದ. ಮೈಕೇಲ್ ಅರ್ಥಪೂರ್ಣ ವಾಗಿ ನಕ್ಕು ಹೇಳಿದ: 'ನೆನಪಿರಲಿ; ಸಾಮಾನ್ಯವೆನಿಸುವ ಈ ಸಣ್ಣ ಪುಟ್ಟ ಕೆಲಸಗಳಿಂದ 'ಪರಿಪೂರ್ಣತೆ' ಉಂಟಾಗುತ್ತದೆ. ಆದರೆ ಪರಿಪೂರ್ಣತೆ ಎನ್ನುವುದು ಸಾಮಾನ್ಯವಲ್ಲ.'* ಇಂತಿದೆ ಸಣ್ಣ ಕೆಲಸದ ಮಹತ್ವ ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವ ಸಂದೇಶ. ಬರಹಗಾರನು ತನ್ನ ಮಸಿಕುಡಿಕೆ ಮತ್ತು ಲೇಖನಿಯನ್ನು ಇರಿಸಿಕೊಂಡ...

ಛಲದಿಂದ ಬಲ - ಗ್ರಂಥ: ಬದುಕಲು ಕಲಿಯಿರಿ PART 27

 ಗ್ರಂಥ: ಬದುಕಲು ಕಲಿಯಿರಿ. ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ 27;  ಛಲದಿಂದ ಬಲ   ಹೈಸ್ಕೂಲು ವಿದ್ಯಾಭ್ಯಾಸವನ್ನು ಮುಗಿಸಿದ ಮಿತ್ರರೊಬ್ಬರು ಒಂದು ಸಂಸ್ಥೆಯಲ್ಲಿ ದುಡಿಯುತ್ತಿದ್ದರು . ದಿನದ ಎಂಟು ಗಂಟೆಗಳ ಕೆಲಸದೊಂದಿಗೆ ಸಂಸಾರ ನಿರ್ವಹಣೆಯ ಭಾರವು ಅವರ ಮೇಲಿತ್ತು. ಖಾಸಗಿಯಾಗಿಯೇ ಎಂ. ಎ. ಪರೀಕ್ಷೆಯಲ್ಲಿ ಪಾಸಾದರು. 'ಖಾಸಗಿಯವರೆಂದು ಪ್ರಥಮ ದರ್ಜೆ ಕೊಡಲಿಲ್ಲ. ಐವತ್ತೊಂಬತ್ತು ಪರ್ಸೆಂಟ್ ಬಂದಿದೆ' ಎಂದರು. ಅವರೇನೂ ಹುಟ್ಟಿನಿಂದಲೇ ಮಹಾ ಮೇಧಾವಿಯಾಗಿರಲಿಲ್ಲ. ' ಈ ನಾನಾ ಕಾರ್ಯಗಳ ಮಧ್ಯೆ ಅಷ್ಟೊಂದು ಅಧ್ಯಯನ ಹೇಗೆ ನಡೆಯಿಸಿದಿರಿ?' ಎಂದು ಕೇಳಿದೆ. ಅವರ ಉತ್ತರ ಕುತೂಹಲಕಾರಿಯಾಗಿತ್ತು: 'ಒಂದೊಂದೇ ಮೆಟ್ಟಲು ಮೇಲೇರುತ್ತ ಹೋದೆ. ಕಷ್ಟವಾಗಲಿಲ್ಲ' ಎಂದರು. ದಿನವೂ ಎರಡು ಗಂಟೆಗಳ ಕಾಲ ನಿತ್ಯ ನಿಯಮಿತ ರೀತಿಯಿಂದ ಅಧ್ಯಯನ ಮಾಡಿದೆ ಎಂಬುದನ್ನು ಅವರು ಮೇಲಿನ ಉದಾಹರಣೆಯಿಂದ ತಿಳಿಸಿದರು.  ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಸಿದ್ಧಿಯನ್ನು ಪಡೆದವರನ್ನು ಕಂಡಾಗ ಅವರು ಒಳ್ಳೆಯ ಆಟಗಾರರಿರಲಿ, ಸಂಗೀತತಜ್ಞರಿರಲಿ, ವಾಗ್ಮಿಗಳಿರಲಿ ಅವರಂತೆ ನಾವಾಗಲು ಸಾಧ್ಯವೇ ಇಲ್ಲ ಅದೊಂದು ದೈವದತ್ತವಾದ ವರ ಎಂದು ನಾವು ತಿಳಿಯುವುದುಂಟು. ಅವರು ಆ ಮಟ್ಟವನ್ನು ಮುಟ್ಟುವುದಕ್ಕೆ ಮೊದಲು ವರ್ಷಗಳ ಕಾಲ ಅಭ್ಯಾಸ ಮಾಡಿದ್ದಾರೆ ಎಂಬುದನ್ನು ನಾವು ಮರೆಯುತ್ತೇವೆ. ನಾವು ಸದ್ಯ ಮಾಡಲಸಾಧ್ಯವಾದುದನ್ನು ಅಷ್ಟು ವರ್ಷಗಳ ಪ್ರಯತ್ನದ ಬಲದಿಂದ ಅವ...