Posts

ಗುಂಡಣ್ಣ ಕಾಲೇಜಿಗೆ ಹೋದ - ಗ್ರಂಥ : ಬದುಕಲು ಕಲಿಯಿರಿ PART 26

 ಗ್ರಂಥ : ಬದುಕಲು ಕಲಿಯಿರಿ ಲೇಖಕರು : ಸ್ವಾಮಿ ಜಗದಾತ್ಮಾನಂದಜಿ  ಭಾಗ  : 26  ಗುಂಡಣ್ಣ ಕಾಲೇಜಿಗೆ ಹೋದ   ಗುಂಡಣ್ಣ ಹಳ್ಳಿಯಿಂದ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಪಟ್ಟಣ ಸೇರಿದ. ಸಾಮಾನ್ಯ ಆರ್ಥಿಕ ಶಕ್ತಿಯುಳ್ಳ ಕುಟುಂಬದಿಂದ ಬಂದವನಾತ. ಅವನ ಮನೆಯವರಿಗೆ ಕಾಲೇಜು ಶಿಕ್ಷಣದ ವೆಚ್ಚವನ್ನು ನಿರ್ವಹಿಸುವ ಸಾಮರ್ಥ್ಯವಿರಲಿಲ್ಲ. ಆದರೆ ಅವನ ಒತ್ತಾಯಕ್ಕೂ ಅಧ್ಯಾಪಕರ ಪ್ರೋತ್ಸಾಹಕ್ಕೂ ಮಣಿದು, ಹುಡುಗನಿಗೆ ಭವ್ಯ ಭವಿಷ್ಯವಿದೆ ಎಂದೆಣಿಸಿ ತಂದೆ ಸಾಲ ಮಾಡಿ ಮಗನನ್ನು ಪದವೀಧರನನ್ನಾಗಿ ಮಾಡಲು ನಿಶ್ಚಯಿಸಿದರು. ತಾನು ಹುಟ್ಟಿ ಬೆಳದು ಓಡಾಡಿದ ಊರನ್ನು ಬಿಟ್ಟು ಪಟ್ಟಣಕ್ಕೆ ಹೊರಟು ನಿಂತಾಗ ಅವನ ತಾಯಿ ಕಂಬನಿದುಂಬಿ ಹೇಳಿದ್ದರು, 'ಮಗೂ, ಚೆನ್ನಾಗಿ ಕಲಿಯಬೇಕು. ನಿನ್ನ ತಂದೆ ಎಷ್ಟು ಕಷ್ಟಪಡುತ್ತಿದ್ದಾರೆಂದು ನೀನು ನೋಡಿದ್ದಿ. ನಿನ್ನ ತಂಗಿ ತಮ್ಮಂದಿರೂ ಕಲಿಯಬೇಕು, ನೆನಪಿರಲಿ. ವೇಳೆ ವ್ಯರ್ಥವಾಗದಂತೆ ನೋಡಿಕೋ.' ಎಷ್ಟು ಕಳಕಳಿಯಿಂದ ಅವರು ಈ ಮಾತು ಹೇಳಿದರೆಂದರೆ ಆತ ಗದ್ಗದಿತನಾಗಿ 'ಆಗಲಮ್ಮ' ಎಂದಷ್ಟೇ ಉತ್ತರಿಸಿದ್ದ. ಹೊರಡುವಾಗ ಊರ ಹೊರಗಿನ ಆಂಜನೇಯಸ್ವಾಮಿಗೆ ನಮಿಸಿ ಪ್ರಾರ್ಥಿಸಿಯೂ ಇದ್ದ. ಕಾಲೇಜು ಮತ್ತು ಹಾಸ್ಟೆಲುಗಳ ವಾತಾವರಣಕ್ಕೆ ಹೊಂದಿಕೊಳ್ಳಲು ಅವನಿಗೆ ಕೆಲವು ದಿನಗಳೇ ಬೇಕಾದವು. ನೂರಾರು ವಿದ್ಯಾರ್ಥಿಗಳು ತುಂಬಿದ ಕ್ಲಾಸುಗಳಲ್ಲಿ ಅವನೊಬ್ಬ ನಗಣ್ಯ ವ್ಯಕ್ತಿ. ಏನು? ಯಾರು? ಎತ್ತ? ಎಂದು ವಿಚಾರಿಸುವವರಿಲ್ಲ. ಯಾರ ಮ...

ಮುನ್ನಡೆಯ ಮೂಲಮಂತ್ರ - ಗ್ರಂಥ : ಬದುಕಲು ಕಲಿಯಿರಿ PART 25

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ  ಭಾಗ : 25  ಮುನ್ನಡೆಯ ಮೂಲಮಂತ್ರ  ಹಾಗಾದರೆ ಬದುಕಿನಲ್ಲಿ ಸದ್ಯ ನಿಂತ ಸ್ಥಾನದಿಂದ ಉನ್ನತಿಯ ಪಥದಲ್ಲಿ ಮುನ್ನಡೆಯಬೇಕೆನ್ನುವವರಿಗೆ ಯಾವ ಸಾಮಗ್ರಿಗಳು ಬೇಕು? ಮುನ್ನಡೆಯಬೇಕು, ಮೇಲೇರಬೇಕು, ಸರ್ವತೋಮುಖವಾದ ಪ್ರಗತಿಯಾಗಬೇಕು ಎನ್ನುವ ಪ್ರಬಲ ಆಸೆ ಬೇಕು.  ಯಾವ ದಿಕ್ಕಿನಲ್ಲಿ ಮುನ್ನಡೆಯಬೇಕೆಂಬುದನ್ನು ಸ್ಪಷ್ಟವಾಗಿ ನಿರ್ದಿಷ್ಟ ಪಡಿಸಿಕೊಳ್ಳಬೇಕು. ಎಂದರೆ ನಿಮ್ಮ ಗುರಿಯನ್ನು ಕುರಿತು ಸ್ಪಷ್ಟ ಅರಿವು ಬೇಕು. ನಿಮಗೇನು ಬೇಕು ಎಂಬುದನ್ನು ಸ್ಥಿರಚಿತ್ತರಾಗಿ ಯೋಚಿಸಿ, ಅವು ವಾಸ್ತವವೂ, ಸಾಧ್ಯವೂ ಆಗುವ ಬೇಕುಗಳಾಗಲಿ. ಜಗುಲಿ ಹಾರದೇ ಗಗನ ಹಾರುವ ಕಲ್ಪನೆಯ ಗಾಳಿಗೋಪುರದ ಬೇಕುಗಳಾಗದಿರಲಿ.   ನಿಮ್ಮ ಮುಖ್ಯ 'ಬೇಕು'ವಿಗೆ ಪೂರಕವಾದ ಪುಟ್ಟ 'ಬೇಕು'ಗಳ ಒಂದು ಪಟ್ಟಿಯನ್ನು ಮಾಡಿ.  ಅವುಗಳು ನಿಮಗೇಕೆ ಬೇಕು ಎಂಬುದಕ್ಕೆ ಕಾರಣಕೊಡಿ.  ನೀವು ಒಂಭತ್ತನೇ ತರಗತಿಯಲ್ಲಿ ಓದುತ್ತಿರುವಾಗ ವಿಮಾನ ಚಾಲಕನಾಗಬೇಕೆಂದು ನಿಮ್ಮ ನೆಚ್ಚಿನ ಮುಖ್ಯ 'ಬೇಕು'ವಿನ ಬಗೆಗೆ ನಿರ್ಧರಿಸಿಕೊಂಡಿರಬಹುದು. ಆ ಬೇಕು ಅಸಾಧ್ಯವೇನಲ್ಲ. ಆದರೆ ಆ 'ಮುಖ್ಯ ಬೇಕು' ಪೂರೈಸಬೇಕಾದರೆ ಇತರ 'ಪುಟ್ಟ ಬೇಕುಗಳ' ಪೂರಣವಾಗುವುದು ಉಚಿತ. ದೃಷ್ಟಿಪಾಟವ, ಆರೋಗ್ಯವಂತ ಶರೀರ, ಶಾಂತ ನಿರ್ಭಿತ ಮನಸ್ಸು, ಇವುಗಳ ಜೊತೆಗೆ ವರ್ಷಾಂತ್ಯದ ಪರೀಕ್ಷೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಪ...

ಹಂಬಲದ ಬೆಂಬಲ - ಗ್ರಂಥ : ಬದುಕಲು ಕಲಿಯಿರಿ PART 24

 ಗ್ರಂಥ : ಬದುಕಲು ಕಲಿಯಿರಿ ಲೇಖಕರು : ಸ್ವಾಮಿ ಜಗದಾತ್ಮಾನಂದಜಿ  ಭಾಗ : 24  ಹಂಬಲದ ಬೆಂಬಲ  ಜರ್ಮನ್ ದೇಶದ ಫ್ರಾಂಕ್‌ಫರ್ಟ್ ನಗರದ ಒಂದು ಗಲ್ಲಿಯಲ್ಲಿನ ಪುಸ್ತಕಾಲಯ . ಪುಸ್ತಕಗಳಿಂದ ಆವೃತರಾಗಿ ಏಕಾಗ್ರ ಚಿತ್ತ ಸಮಾಧಿಸ್ಥ ಯೋಗಿಯಂತೆ ಒಬ್ಬರು ಅಲ್ಲಿ ಕುಳಿತಿದ್ದಾರೆ. ಅದು ಅವರ ಸ್ವಂತ ಗ್ರಂಥಾಲಯ. ಅಲ್ಲಿ ಸುಮಾರು ಮೂವತ್ತು ಸಾವಿರ ಪುಸ್ತಕಗಳಿವೆ. ಬಹಳಷ್ಟು ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳೇ. ಅವರು ಒಂದಲ್ಲ ಎರಡಲ್ಲ, ಹತ್ತಲ್ಲ, ನೂರಲ್ಲ ಸುಮಾರು ಮುನ್ನೂರು ಭಾಷೆಗಳನ್ನು ಬಲ್ಲರು. ಓದು ಬರಹ ಮಾತ್ರವಲ್ಲ, ಅನುವಾದ ಕಾರ್ಯವನ್ನೂ ಮಾಡಬಲ್ಲರು. ಸರಳವಾಗಿ ಮಾತನಾಡಬಲ್ಲರು. ಇದು ಕಲ್ಪಿತ ಕಥೆಯಲ್ಲ. ವಾಸ್ತವ ವಿಚಾರ. ಅವರ ಹೆಸರು ಡಾ. ಹೆರಾಲ್ಡ್ ಸ್ರುಜ್. ಡಾ. ಸ್ರುಜ್ ಬಹುಭಾಷಾತಜ್ಞರಷ್ಟೇ ಅಲ್ಲ, ಶ್ರೇಷ್ಠ ಕವಿಗಳೂ ಹೌದು.  ಇಷ್ಟೊಂದು ಭಾಷೆಗಳನ್ನು ಹೇಗೆ ಕಲಿತಿರಿ? ಎಂದು ಅವರನ್ನು ಪ್ರಶ್ನಿಸಿದಾಗ ಅವರು ನಗುತ್ತ ಉತ್ತರಿಸಿದರು : 'ಬಹುಭಾಷಾಜ್ಞಾನ ಪಡೆಯಲು ಮೂರು ಸಂಗತಿಗಳು ಬೇಕೇ ಬೇಕು. ಮೊದಲನೆಯದು ಕಲಿಯಬೇಕು, ತಿಳಿಯಬೇಕು ಎಂಬ ತೀವ್ರ ಹಂಬಲ, ಎರಡನೆಯದು ಅನವರತ ಶ್ರದ್ಧೆಯಿಂದ ಕೂಡಿದ ಪರಿಶ್ರಮ ಮತ್ತು ಮೂರನೆಯದೇ ಅವಕಾಶ . ಬಹುಭಾಷೆಗಳನ್ನು ಕಲಿಯುವ ತೀವ್ರ ಹಂಬಲ ಬಾಲ್ಯದಿಂದಲೇ ನನ್ನಲ್ಲಿ ಬಲವಾಗಿ ಬೇರೂರಿತ್ತು. ಮುಂದೆ ಅವಕಾಶ ದೊರೆತುದರಿಂದ ಶ್ರದ್ಧೆಯಿಂದ ಪ್ರಯತ್ನಿಸಿದೆ ಸಾಧ್ಯವಾಯಿತು' ಎಂದು.  ...

ಬದುಕಿನ ಸಾರ್ಥಕತೆ - ಗ್ರಂಥ : ಬದುಕಲು ಕಲಿಯಿರಿ PART 23

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ  ಭಾಗ : 23  ಬದುಕಿನ ಸಾರ್ಥಕತೆ   'ಏನು ಆಗಬೇಕೆಂದು ಯೋಚಿಸಿ ಚಿತ್ರಿಸಿ ಕಲ್ಪಿಸಿಕೊಂಡಿರುತ್ತೇವೆಯೋ ಅದನ್ನು ಕುರಿತು ನಾವು ಅರ್ಧಜಾಗೃತರಾಗಿರುತ್ತೇವೆ. ನಮ್ಮ ದೈಹಿಕ ಹಾಗೂ ಮಾನಸಿಕ ಶಕ್ತಿಗಳ ಬಹು ಅಲ್ಪಭಾಗವನ್ನು ಮಾತ್ರ ನಾವು ಉಪಯೋಗಿಸುತ್ತೇವೆ. ಒಟ್ಟಿನಲ್ಲಿ ಮಾನವನು ತನ್ನ ಶಕ್ತಿಯ ವಿಸ್ತಾರ ಪರಿಧಿಯೊಳಗಣ ತೀರ ಸೀಮಿತ ಕ್ಷೇತ್ರದಲ್ಲೇ ಬದುಕುತ್ತಾನೆ. ನಾನಾವಿಧದ ಶಕ್ತಿಗಳನ್ನು ಪಡೆದೂ, ಅವನ್ನು ಉಪಯೋಗಿಸಲು ಹಂಬಲಿಸದೇ, ಆ ನಿಟ್ಟಿನಲ್ಲಿ ಯತ್ನಿಸದೆ ಅಸಮರ್ಥನಾಗಿಯೇ ಬದುಕುತ್ತಾನೆ.' ಹೀಗೆಂದು ಹೇಳಿದವರು ಪ್ರಸಿದ್ಧ ಮನೋವಿಜ್ಞಾನಿ ವಿಲಿಯಮ್ ಜೇಮ್ಸ್.  ವಿಶಾಲವಾದ ಮೈದಾನದಲ್ಲಿ ಹಾಯಾಗಿ ಹುಲ್ಲು ಮೇದು ತಿರುಗಾಡುವಷ್ಟು ಉದ್ದವಾದ ಹಗ್ಗವಿದೆ. ಆದರೂ ಗೂಟಕ್ಕೆ ಕಟ್ಟಿದ ಹಸು ಗೂಟದ ಬಳಿಯೇ ಹಗ್ಗ ಸುತ್ತಿಕೊಂಡು ತನ್ನ ಸಂಚಾರದ ಸ್ವಾತಂತ್ರ್ಯ, ಸೌಲಭ್ಯಗಳನ್ನು ಮೊಟಕುಗೊಳಿಸಿಕೊಂಡಂತೆ ಇದು. ಮನುಷ್ಯರೂ ತಮ್ಮಲ್ಲಿರುವ ಶಕ್ತಿ ಸಾಧ್ಯತೆಗಳನ್ನರಿಯದೆ ಬಹಳಷ್ಟು ಪರಿಮಿತ ಪರಿಧಿಯಲ್ಲೇ ಬದುಕಿಕೊಂಡಿರುತ್ತಾರೆಂಬುದು ಮನೋವಿಜ್ಞಾನಿಯ ಮಾತಿನ ಅರ್ಥ.  ಎಂಥ ಅದ್ಭುತ ಯಂತ್ರ ನಮ್ಮ ದೇಹ! ಎಷ್ಟು ಅದ್ಭುತ ಶಕ್ತಿ ಹುದುಗಿದೆ ನಮ್ಮಲ್ಲಿ! ಆದರೂ ಕಣ್ಣನ್ನು ಮುಚ್ಚಿಕೊಂಡು ಕತ್ತಲೆ ಎಂದು ಅಳುವವರು ನಾವು!  ನಮಗೆ ಜೀವನದಲ್ಲಿ ಮಹತ್ವಾಕಾಂಕ್ಷೆಗಳಿಲ...

ಡಾಕ್ಟರ್ ಸ್ವಾಮೀಜೀಯೊಬ್ಬರ ಅನುಭವ - ಗ್ರಂಥ : ಬದುಕಲು ಕಲಿಯಿರಿ PART 22

 ಗ್ರಂಥ : ಬದುಕಲು ಕಲಿಯಿರಿ ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 22  ಡಾಕ್ಟರ್ ಸ್ವಾಮೀಜೀಯೊಬ್ಬರ ಅನುಭವ  ವೈದ್ಯಕೀಯ ವಿಜ್ಞಾನವನ್ನು ಓದಿ ಎಂ.ಬಿ. ಬಿಎಸ್. ಪಾಸು ಮಾಡಿದ್ದ ನಮ್ಮ ಮಿಷನ್ನಿನ ಸ್ವಾಮಿಗಳೊಬ್ಬರು ತಮ್ಮ ಅನುಭವವನ್ನು ಕುರಿತು ಹೀಗೆಂದರು: 'ಎಂ.ಬಿ.ಬಿ.ಎಸ್. ಕೊನೆಯ ಪರೀಕ್ಷೆ ಯಲ್ಲಿ ಉತ್ತೀರ್ಣನಾದ ಕೂಡಲೆ ಔಷಧೋಪಚಾರ ವಿಭಾಗದಲ್ಲಿ ನನಗೆ ಡೆಮೊನ್‌ಸ್ಟ್ರೇಟ‌ರ್ ಹುದ್ದೆ ದೊರಕಿತ್ತು. ಮೂರನೇ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ರೋಗಿಗಳನ್ನು ಪರೀಕ್ಷಿಸಿ ರೋಗದ ಕಾರಣವನ್ನು ತಿಳಿಯುವ ವಿಧಾನವನ್ನು ಬೋಧಿಸುವ ಕೆಲಸ ನನ್ನದಾಗಿತ್ತು. ಹದಿಮೂರು ಮಂದಿ ವಿದ್ಯಾರ್ಥಿಗಳನ್ನು ಆರು ವಾರಗಳ ಕಾಲ ಮುಂದೆ ಅದು ಹನ್ನೆರಡು ವಾರಗಳ ಅವಧಿಗೆ ವಿಸ್ತರಿಸಿತು -ನಾನು ನೋಡಿಕೊಳ್ಳಬೇಕಾಗಿತ್ತು. ಆಸ್ಪತ್ರೆಯ ವಾರ್ಡಿನಲ್ಲೇ ದಿನವೂ ಎರಡು ಮೂರು ಗಂಟೆಗಳ ಕಾಲ, ಒಂದು ವಾರದಲ್ಲಿ ನಾಲ್ಕು ದಿನಗಳು ಕ್ಲಾಸನ್ನು ತೆಗೆದುಕೊಳ್ಳುತ್ತಿದ್ದೆ, ರೋಗದ ಲಕ್ಷಣಗಳನ್ನು ಪರಿಶೀಲಿಸಿ ಅದನ್ನು ಸರಿಯಾಗಿ ಹೇಗೆ ಅರ್ಥೈಸಿಕೊಳ್ಳಬೇಕೆಂಬುದನ್ನು ವಿವರಿಸುತ್ತಿದ್ದೆ, ಆಗ ನಾನು ಸ್ವಾಮಿ ವಿವೇಕಾನಂದರ ಬರಹಗಳನ್ನು ಓದಿ ಸ್ಫೂರ್ತಿ ಪಡೆದುಕೊಂಡಿದ್ದೆ. ಪ್ರತಿಯೊಬ್ಬನಲ್ಲೂ ಅಪಾರಶಕ್ತಿ ಅಡಗಿದೆ, ಆ ಶಕ್ತಿಯನ್ನು ಶ್ರದ್ಧೆ ಅತ್ಮವಿಶ್ವಾಸ ಮತ್ತು ಸರಿಯಾದ ಪ್ರಯತ್ನಗಳಿಂದ ಎಚ್ಚರಿಸಿ ಏನನ್ನೂ ಸಾಧಿಸಬಹುದು. ಸಾಮಾನ್ಯನೂ ಸಮರ್ಥನಾಗಬಹುದು ಎಂಬ ಅವರ ಮಾತುಗಳನ...

ಗ್ರಂಥ : ಬದುಕಲು ಕಲಿಯಿರಿ PART 21

 ಗ್ರಂಥ : ಬದುಕಲು ಕಲಿಯಿರಿ ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 21 ನಿಜವಾಗಿಯೂ ವಿದ್ಯಾರ್ಥಿಯು ದಡ್ಡನಾಗಿರಲಿಲ್ಲ. ಅವನ ತಂದೆ ಓದು ಬರಹ ಬಲ್ಲ ವಿದ್ಯಾವಂತರು ಮಾತ್ರವಲ್ಲ, ವಿದ್ವಾಂಸರೂ ಆಗಿದ್ದರು. ಅವರ ವೈಶಿಷ್ಟ್ಯವೋ, ದೋಷವೋ, ಮಕ್ಕಳು ಬೇಗನೆ ಓದು ಕಲಿತು ಮುಂದೆ ಬರಬೇಕು ಎಂಬ ಆತುರದವರು. ಅವರು ತಾವು ಕಲಿಯುತ್ತಿದ್ದಾಗ ಎಲ್ಲ ಕ್ಲಾಸುಗಳಲ್ಲೂ ಪ್ರಥಮದರ್ಜೆಯವರಂತೆ. ಯಾವುದೇ ವಿಚಾರವನ್ನು ಬಹುಬೇಗನೇ ಗ್ರಹಿಸಬಲ್ಲವರು. ಮಗನನ್ನು ಮಹಾ ಮೇಧಾವಿಯನ್ನಾಗಿ ಮಾಡಲು ನಾಲ್ಕನೇ ವಯಸ್ಸಿನಿಂದಲೇ ಅವನ ತಲೆಯಲ್ಲಿ ಗಣಿತವನ್ನು ತುರುಕಲು ತೊಡಗಿದ್ದರು. ಅವನು ಥಟ್ಟನೆ ಗ್ರಹಿಸದಿದ್ದಾಗ ತಾಳ್ಮೆಗೆಟ್ಟ ಅವರು ಬೈದು ಹೊಡೆದು ಹೇಳಿಕೊಡಲು ಯತ್ನಿಸಿ ವಿಫಲರಾದರು. ಅವರು ಹೆಚ್ಚು ಹೆಚ್ಚು ವ್ಯಗ್ರರಾಗಿ ಬೋಧಿಸಹೊರಟಂತೆ ಹುಡುಗನ ಮನಸ್ಸು ಅಷ್ಟಷ್ಟೂ ಭಯದಿಂದ ಒರಟಾಗುತ್ತ ಬಂದಿತು. ಆ ಬಳಿಕ ತಮ್ಮ ಗಣಿತ ಬೋಧನೆಯಿಂದ ಹುಡುಗನನ್ನು ಬಾಧಿಸದಿದ್ದರೂ, ಆಗಾಗ 'ಕಲಿಯುವುದರಲ್ಲಿ ಹಿಂದೆ ಊಟದಲ್ಲಿ ಮುಂದೆ' ಎಂದು ಚಟಾಕಿ ಹಾರಿಸುತ್ತಿದ್ದರು. ಹುಡುಗ ಆಗಲೇ ತನಗೆ ಲೆಕ್ಕಬಾರದು ಎಂದುಕೊಂಡು ತನಗರಿವಿಲ್ಲದೆ ಲೆಕ್ಕವನ್ನು ದ್ವೇಷಿಸತೊಡಗಿದ. ಆತ ಶಾಲೆ ಸೇರಿಕೊಂಡಾಗ ಅಲ್ಲಿಯೂ ಇತರ ವಿದ್ಯಾರ್ಥಿಗಳೊಂದಿಗೆ ತನ್ನನ್ನು ಹೋಲಿಸಿಕೊಂಡಾಗ ತಾನು ಲೆಕ್ಕದಲ್ಲಿ ಹಿಂದೆ ಎಂಬುದನ್ನು ಇಷ್ಟವಿಲ್ಲದಿದ್ದರೂ ಒಪ್ಪಬೇಕಾಯಿತು. ದಿನದಿನವೂ ಉಳಿದ ಹುಡುಗರು, ಅಧ್ಯಾಪಕರು 'ಅರ್ಥವಾ...

ದಡ್ಡನು ಧೀರನಾದ - ಗ್ರಂಥ : ಬದುಕಲು ಕಲಿಯಿರಿ PART 20

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು :  ಸ್ವಾಮಿ ಜಗದಾತ್ಮಾನಂದಜಿ  ಭಾಗ : 20  ದಡ್ಡನು ಧೀರನಾದ   ನಮ್ಮ ಆಶ್ರಮ ನಡೆಸುವ ಒಂದು ಹಾಸ್ಟೆಲಿನಲ್ಲಿ ಒಬ್ಬ ವಿದ್ಯಾರ್ಥಿಯಲ್ಲಾದ ಆಮೂಲಾಗ್ರ ಬದಲಾವಣೆಯನ್ನು ಕುರಿತು ಸೋದರ ಸ್ವಾಮೀಜಿ ಒಮ್ಮೆ ಹೇಳಿದ್ದರು. ಅವರ ಮಾತಿನಲ್ಲೇ ಆ ಘಟನೆಯನ್ನು ಇಲ್ಲಿ ನೀಡುತ್ತಿದ್ದೇನೆ.  “ಒಂದು ದಿನ ಹಾಸ್ಟೆಲಿನ ಎಲ್ಲ ಹುಡುಗರನ್ನೂ ಹತ್ತಿರ ಕುಳ್ಳಿರಿಸಿಕೊಂಡು ಮಾತನಾಡುತ್ತಿದ್ದೆ. ನಮ್ಮ ದೇಶದಲ್ಲಿ ಎಷ್ಟು ಮಂದಿ ಹುಡುಗರಿಗೆ ಒಳ್ಳೆಯ ರೀತಿಯ ಅಧ್ಯಯನ ಮಾಡಲು ಅವಕಾಶವಿದೆ? ನೋಡಿ, ಮನೆಯವರಿಗೆ ಓದು ಬರಹ ಬಾರದು. ದೂರದಲ್ಲಿರುವ ಹಳ್ಳಿಯ ಶಾಲೆ. ಅಲ್ಲಿ ಸೌಕರ್ಯ ಸಾಲದು. ತಪ್ಪದೇ ಶಾಲೆಗೆ ಹೋಗಲು ಅನುಕೂಲವಿಲ್ಲ. ಶಾಲೆಗೆ ಹೋದರೆ ಒಬ್ಬರೋ, ಇಬ್ಬರೋ ಅಧ್ಯಾಪಕರು ಇನ್ನೂರು ಮಕ್ಕಳಿಗೆ ಪಾಠ ಹೇಳಬೇಕು. ನಾಲ್ಕೈದು ವರ್ಷಗಳ ಕಾಲ ಶಾಲೆಗೆ ಹೋಗಿದ್ದರೂ ಪೇಟೆ ಪಟ್ಟಣಗಳಲ್ಲಿ ಓದಿದ ಹುಡುಗರನ್ನು ಕಂಡಾಗ ಹಳ್ಳಿಯ ಹುಡುಗರಿಗೆ ತಮ್ಮ ಅಭಿವೃದ್ಧಿಯ ಬಗೆಗೆ ಸಂಕೋಚವೆನಿಸಬಹುದು, ಭಯವೂ ಆಗಬಹುದು. ನಿಮಗಾದರೆ ಚೆನ್ನಾಗಿ ಓದಿ ಮುನ್ನಡೆಯಲು ಎಷ್ಟೊಂದು ಅವಕಾಶಗಳಿವೆ. ಒಳ್ಳೆಯ ಪುಸ್ತಕಾಲಯವಿದೆ. ಹಿರಿಯ ವಿದ್ಯಾರ್ಥಿಗಳಿದ್ದಾರೆ. ಓದುವಾಗ ನಿಮಗೆ ಯಾವ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಸಣ್ಣಪುಟ್ಟ ನಿಯಮಿತವಾದ ಕೆಲಸಗಳನ್ನು ಬಿಟ್ಟರೆ ಬೇರಾವ ತಾಪತ್ರಯವಿಲ್ಲ ಬೇರಾವ ಜವಾಬ್ದಾರಿ, ಚಿಂತೆಗಳಿಲ್...