INDIAN GEOGRAPHICAL FEATURES AND THEIR INFLUNCE

INDIAN GEOGRAPHICAL FEATURES AND THEIR INFLUNCE

ಭೌಗೋಳಿಕ ಮೇಲೆ ಲಕ್ಷಣಗಳು ಮತ್ತು ಅದರ ಪ್ರಭಾವ

GEOGRAPHICAL FEATURES AND THEIR INFLUNCE

Uploading: 148200 of 148200 bytes uploaded.

ಯಾವುದೇ ಅಥವಾ ದೇಶ ಮತ್ತು Tort foಳಿಕ ಲಕ್ಷಣಗಳಿಂದ ಪಾಳಾಗಿರುವುದು ಸಾಕ ಸಂಗತಿಯಾಗಿದೆ. ಪಾಶ್ಚಿಮಾಕ್ಕೆ ವಿದ್ಯಾರಾದ ರೀಶಣ್ ಹ್ಯಾ ಪ್ರಕಾರ 'ಭೂಗೋಳ ಮತ್ತು ಕಾಲಾನುಕ್ರಮ ಆಹಾರದ ಎಡ ಮತ್ತು ಬಲ ಕಣ್ಣುಗಳಿದ್ದ ಹಾಗೆ ಅಥವಾ ಸೂರ್ಯಚಂದ್ರರಿದ್ದ ಹಾಗೆ' ಎಂದಿದ್ದಾನೆ. ಆವನ ಹೇಳಿಕೆಯ ಪ್ರಕಾರ ಭೂಗೋಳ ಮತ್ತು ಗ್ರಹಗಳರಡು ಬಹಳ ಅಗತ್ಯ ಸಂಬಂಧ ಹೊಂದಿವೆ ಎಂದು ತಿಳಿಯುತ್ತದೆ. ಭೌಗೋಳಿಕ ಲಕ್ಷಣವೆಂದರೆ ಆ ದೇಶದ ನದಿಗಳು, ಬೆಟ್ಟಗುಡ್ಡಗಳು, ಸಮುದ್ರಗಳು, ಮರುಭೂಮಿಗಳು, ವಾಯುಗುಣ, ಪರ್ವತಗಳು, ಖರಗಳು, ಅರಣ್ಯಗಳು, ಮಳೆಯ ಪ್ರಮಾಣ, ವಾತಾವರಣ, ಭೂಮಿಯ ಫಲವತ್ತತ್ತ ಮತ್ತು ಪ್ರಾಣಿ ಸಂಪತ್ತು ಖನಿಜ ಸಂಪತ್ತು, ತೀರ ಪ್ರದೇಶ ಇತ್ಯಾದಿ, ಹಾಗೆಯೇ ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಭೌತಿಕ ಪರಿಸರಗಳು ಭಾರತೀಯ ಜನಜೀವನ ಮತ್ತು ಇತಿಹಾಸದ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರಿದೆ.


ಭಾರತವು ಏಷ್ಯಾ ಖಂಡದಲ್ಲಿ ಬೃಹತ್ ಉಪಖಂಡದೆಂದು' (Sub continent) ಪರಿಗಣಿಸಲ್ಪಟ್ಟಿದೆ. ಇದು ವ್ಯಾಖಂಡದ ದಕ್ಷಿಣ ಭಾಗದಲ್ಲಿ ಕಂಡು ಬರುತ್ತದೆ. ಭಾರತವು ಉಪಖಂಡವಾಗಿರುವುದರ ಜೊತೆಗೆ ಪರ್ಯಾಯದ್ವೀಪ ಎಂಬುದಾಗಿ ಕರೆಯಲಾಗಿದೆ. ಏಕೆಂದರೆ ಈ ಪ್ರದೇಶವು ಅಸಮವಾದ ಚಂರ್ಭುಜಾಕೃತಿಯ ಭೂಭಾಗ, ಪ್ರಾಚೀನ ಭೂಗೋಳ ವಿಜ್ಞಾನಿಗಳು ಅದನ್ನು ಚುಸ್ಸಾನವೆಂದು ಕರೆದರು. ಭಾರತದ ಭೌಗೋಳಿಕ ಲಕ್ಷಣವನ್ನು ನೋಡಿದಾಗ ಭಾರತದ ಉತ್ತರಕ್ಕೆ ಹಿಮಾಲಯ ಪರ್ವತವಿದ್ದು, ದಕ್ಷಿಣಕ್ಕೆ ಹಿಂದೂ ಮಹಾಸಾಗರ, ಪೂರ್ವಕ್ಕೆ ಬಂಗಾಳ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಅರಬ್ಬಿ ಸಮುದ್ರಗಳಿಂದ ಅವೃತವಾಗಿರುವ ಪ್ರದೇಶಗಳನ್ನು ಒಳಗೊಂಡಿದೆ. ಒಟ್ಟಿನಲ್ಲಿ ರೇಖಾಂಶ 61 ರಿಂದ ಪೂರ್ವಕ್ಕೆ 97 ಮತ್ತು ಅಕ್ಷಾಂಶ 8 ರಿಂದ ಉತ್ತರಕ್ಕೆ 37 ಈ ಚೌಕಟ್ಟಿನಲ್ಲಿ ತನ್ನ ಭೌಗೋಳಿಕ ಸ್ಥಾನವನ್ನು ಹೂಂ..!. ಭಾರತವು ಪ್ರಪಂಚದಲ್ಲಿ ಎರಡನೇ ಅತಿದೊಡ್ಡ ಜನಸಂಖ್ಯಾ ರಾಷ್ಟ್ರವಾಗಿದೆ. ಇಡೀ ಪ್ರವಚಂದ 1/5 ಭಾಗದಷ್ಟು ಜನಸಂಖ್ಯೆ ನಮ್ಮ ಭಾರತವು ಹೊಂದಿದೆ. ಪಾಕಿಸ್ತಾನ ನಿರ್ಮಾಣವಾಗುವುದಕ್ಕೆ ಮೊದಲಿಗೆ 1941ರ ಜನಗಣತಿಯಂತ 389 ಮಿಲಿಯನ್ ಜನಸಂಖ್ಯೆ ಭಾರತದಲ್ಲಿತ್ತು. ಸ್ವಾತಂತ್ರ್ಯಪೂರ್ವ ಅಖಂಡ ಭಾರತದ ಮೀರ್ಥ ಪೂರ್ವ ಮತ್ತು ಪಶ್ಚಿಮವಾಗಿ 2500 ಮೈಲಿಗಳನ್ನು ಉದ್ದವಾಗಿದೆ. ಉತ್ತರ ಮತ್ತು ದಕ್ಷಿಣವಾಗಿ 2000 ಮೈಲಿಗಳಷ್ಟು ಉದ್ದವಾಗಿದೆ. ಯೂರೋಪ್ ಖಂಡದಲ್ಲಿ ರಷ್ಯಾವನ್ನು ಹೊರತುಪಡಿಸಿ ಉ ಯೂರೋಪಿನಷ್ಟು ಅಥವಾ ಬ್ರಿಟನ್ನಿನ ಇಪ್ಪತ್ತುಪಟ್ಟು ದೊಡ್ಡದಾದ ಗವನ್ನು ಹೊಂದಿ 1935ರ ಭಾರತ ಸರಕಾರದ ಅಧಿ ನಿಯಮದ ಪ್ರಕಾರ ಭಾರತ ದೇಶದ ಒಟ್ಟು ವಿಸ್ತೀರ್ಣ ಬರ್ಮಾ ಹೊರತಪಡಿಸಿ 4,095,000 ಚದರ ಮೈಲಿ, ಆದರೆ ಈಗ 32,27,237 ಚದರ ಮೈಲಿಗಳನ್ನು ಅಥವಾ 15,000 ಚ.ಕಿ.ಮೀ. ನಮ್ಮ ಭೂ ಮೌರ್ಣವನ್ನು ಹೊಂದಿದೆ. 6000 ಮೈಲಿಗಳನ್ನು ಗಡಿಪ್ರದೇಶವನ್ನು ಹೊಂದಿದೆ, ತೀರ ಪ್ರದೇಶವು 5,000 ಮೈಲಿಗಳಷ್ಟಿದೆ. ಭಾರತ ಪ್ರಾಚೀನ ಭಾರತ ಇತಿಹಾಸ


ಸಂಪದ್ಭರಿತ ದೇಶವಾಗಿದ್ದ ಫಲವತ್ತಾದ ಭೂಮಿ, ಅಪಾರ ಪ್ರಮಾಣದ ಕಲ್ಲಿದ್ದಲು, ಕಬ್ಬಿಣ ಮುಂತಾದ ಖನಿಜ ಸಂಪತ್ತು ಹೇರಳವಾಗಿದೆ. ದೇಶದಾದ್ಯಂತ ಹರಿಯುವ ನದಿಗಳು ಕೃಷಿ ಮತ್ತು ವಿದ್ಯುಚ್ಛಕ್ತಿ ತಯಾರಿಕೆಗೂ ಮತ್ತು ದೇಶದ ಪ್ರಗತಿಗೆ ನೆರವಾಗಿದೆ. ಸುಮಾರು 200ಕ್ಕೂ ಹೆಚ್ಚು ಮಾತನಾಡುವ ಭಾಷೆಗಳಿವೆ. ಹದಿನೆಂಟು (18) ಅಧಿಕೃತ ಭಾಷೆಗಳಿವೆ. ಹಲವಾರು ಧರ್ಮಗಳ ನೆಲೆವೀಡಾಗಿದೆ. ಸರ್ವಧರ್ಮ ಸಮನ್ವಯದ ನಾಡಾಗಿದೆ. ಹಿಂದೂ, ಜೈನ, ಬೌದ್ಧ, ಕ್ರಿಶ್ಚಿಯನ್, ಇಸ್ಲಾಮ್, ಸಿಖ್, ಜೊರಾಸ್ಟಿಯನ್, ಪಾರ್ಸಿ ಧರ್ಮಗಳು ಭಾರತದಲ್ಲಿವೆ. ಇವೆಲ್ಲಾ ಅಂಶಗಳನ್ನು ಹೊಂದಿರುವ ಭಾರತವು ಒಂದು ಜಾತ್ಯಾತೀತ ರಾಷ್ಟ್ರವಾಗಿದೆ.


ಸದಾ ಮಂಜಿನಿಂದ ಕೂಡಿದ ಗಿರಿಶಿಖರಗಳಿವೆ. ಪ್ರಪಂಚದಲ್ಲಿಯೇ ಅತಿಹೆಚ್ಚು ಮಳೆ ಬೀಳುವ ಪ್ರದೇಶವಾದ ಚಿರಾಪುಂಜಿ ಭಾರತದಲ್ಲಿದೆ. ಹಾಗೂ ಅತಿ ಕಡಿಮೆ ಮಳೆ ಬೀಳುವ ರಾಜಸ್ಥಾನದ ಥಾರ್ ಮರುಭೂಮಿ ಕೂಡಾ ಇಲ್ಲಿದೆ. ಶೀತೋಷ್ ಪ್ರದೇಶಗಳು, ಉಷ್ಣವಲಯಗಳು, ಸಮಶೀತೋಷ್ಣವಲಯಗಳು ಕೂಡಾ ಭಾರತದಲ್ಲಿವೆ.


ಭಾರತದ ವಿವಿಧ ನಾಮಾಂಕಿತಗಳು


(VARIOUS NAMES OF THE BHARATHA):


ಭವ್ಯ ಭಾರತದ ಪ್ರಾಚೀನ ಇತಿಹಾಸ ನೋಡಿದಾಗ ನಮ್ಮ ಗಮನಕ್ಕೆ ಬರುವ ಅಂಶವೆಂದರೆ ಭಾರತ ದೇಶವನ್ನು ಭರತ, ಭರತ ನಾಡು, ಭರತ ಖಂಡ, ಆರ್ಯಾವರ್ತ, ಜ೦ಬೂ ದ್ವೀಪ, ಭಾರತ, ಇಂಡಿಯಾ, ಹಿಂದೂಸ್ಥಾನ ಎನ್ನುವ ಹೆಸರುಗಳಿಂದ ಕರೆಯಲಾಗಿದೆ. ವಿಶ್ವವಿವರಣಶಾಸ್ತ್ರಜ್ಞರ ಪ್ರಕಾರ ಇಡೀ ಭೂಮಂಡಲ ಸಪ್ತ ದ್ವೀಪಖಂಡಗಳಾಗಿ ವಿಭಾಗ ಮಾಡಲಾಗಿದೆ. ಅದರಲ್ಲಿ ಭಾರತವು ಸಮಾನ ಕೇಂದ್ರಿಯ ಸಪ್ತ ದ್ವೀಪ ಖಂಡಗಳ ಮಧ್ಯಭಾಗದಲ್ಲಿದೆ. ಹಾಗಾಗಿ ಬೃಹತ್ ಜಂಬೂ ದ್ವೀಪ ಅದರ ಒಂದು ಭಾಗ ಎಂದು ಹೇಳಲಾಗಿದೆ. ಈ ದ್ವೀಪ ಖಂಡದ ಬಗ್ಗೆ ಪುರಾಣಗಳು ಕಾಲ್ಪನಿಕ ವಿವರಣೆಗಳನ್ನು ನೀಡುತ್ತವೆ.


ಅ) ಶಾಕುಂತಲ ಮತ್ತು ದುಶ್ಯಂತರ ಮಗನಾದ ಹಾಗು ಪುರಾಣ ಪುರುಷನಾದ ಭರತನು ಭವ್ಯ ಭಾರತವನ್ನು ಪ್ರಥಮವಾಗಿ ಮತ್ತು ಬಹುಕಾಲ ವ್ಯಾಪಕವಾದ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದರಿಂದ, ಭರತ, ಭರತ ನಾಡು ಎಂಬ ಹೆಸರು ಬಂದಿದೆ.


ಅ) ಪ್ರಚಲಿತವಾದ ಅಭಿಪ್ರಾಯದ ಪ್ರಕಾರ, ಪುರಾತನ ಕಾಲದಲ್ಲಿ ಭರತ ಎಂಬ ಬಣವೊಂದು


ಇತ್ತು ಎಂಬ ಕಾರಣದಿಂದ ಭರತ ನಾಡು ಎಂದು ಕರೆದಿದ್ದಾರೆ. ಇ) ಭರತ ಎಂಬ ಮಹಾನ್ ದಾರ್ಶನಿಕನು ಭಾರತದಲ್ಲಿ ಇದ್ದುದರಿಂದ ಭರತನಾಡು ಎಂದು ಕರೆಯಲಾಗಿತ್ತು.


ಜೈನ ಸಂಪ್ರದಾಯದ ಪ್ರಕಾರ ವೃಷಭದೇವ ಮತ್ತು ಯಶಸ್ಸತಿದೇವಿ (ಅಥವಾ ಮಹಾ ದೇವಿ)ಯರ ಪುತ್ರನಾದ ಭರತನು ಭಾರತವನ್ನು ಬಹುದೀರ್ಘವಾಗಿ ವ್ಯಾಪಕವಾಗಿ ಆಳ್ವಿಕೆ ಮಾಡಿರುವುದರಿಂದ ಭರತ ನಾಡು ಎಂಬ ಹೆಸರು ಬಂದಿದೆ.


ಭಾರತಕ್ಕೆ ಬಂದ ಪರ್ಶಿಯನ್ನರು ಮತ್ತು ಗ್ರೀಕರು ಭಾರತವನ್ನು ಹಿಂದೂಸ್ತಾನ್ ಮತ್ತು ಇಂಡಿಯಾ ಎಂದು ಕರೆದಿದ್ದಾರೆ. ಕ್ರಿ.ಪೂ. 6ನೆಯ ಶತಮಾನದಲ್ಲಿ ಪರ್ಶಿಯನ್ನರು ಭಾರತಕ್ಕೆ ಡೇರಿಯಸ್‌ನ ನಾಯಕತ್ವದಲ್ಲಿ ದಾಳಿ ಮಾಡಿ ಭಾರತದ ವಾಯುವ್ಯ ಭಾಗಕ್ಕೆ ಬಂದಾಗ ಬೃಹತ್ತಾಗಿ ಭೌಗೋಳಿಕ ಮೇಲೆ ಲಕ್ಷಣಗಳು ಮತ್ತು ಅದರ ಪ್ರಭಾವ ಹರಿಯುತ್ತಿದ್ದ ಸಿ೦ಧು ನದಿಯು ಪರ್ಶಿಯನ್ನರಿಗೆ ತಡೆಯನ್ನೊಡ್ಡಿತು. ಅವರು ಆ ರೀತಿ ಹರಿಯುವ ನದಿಯ ರಭಸವನ್ನು ನೋಡಿ ಮೂಕ ವಿಸ್ಮಿತರಾಗಿ ನಾವು ಏನಾದರೂ ಮಾಡಿ ಈ 'ಹಿಂದ್' ನದಿಯನ್ನು ದಾಟಿ ಹಿಂದ್‌ರನ್ನು ಗೆಲ್ಲಬೇಕು ಎಂದು ಹೇಳಿದರು. ಏಕೆಂದರೆ ಪರ್ಶಿಯನ್ನರ ವರ್ಣಮಾಲೆಯಲ್ಲಿ ಅವರ 'ಸ' ಕಾರಗಳನ್ನು ''ಹ' ಕಾರಗಳಾಗಿ ಉಚ್ಛಾರಣೆ ಮಾಡುತ್ತಾರೆ. ಹೀಗಾಗಿ ಸಿಂಗ್‌ನ್ನು ಹಿಂದ್‌ಯಾಗಿ ಉಚ್ಛಾರಣೆ ಮಾಡಿದರು. ಇದು ಕ್ರಮೇಣವಾಗಿ “ಹಿಂದೂ ಎಂದು ಕರೆಯಲ್ಪಟ್ಟಿತು. ಈ ಭೂಮಿಯಲ್ಲಿ ವಾಸ ಮಾಡುವ ಜನರನ್ನು ಮುಸ್ಲಿಂರು ಹಿಂದೂಸ್ತಾನಿಗಳೆಂದು ಕರೆದರು. ಹೀಗೆ ಭಾರತಕ್ಕೆ ಹಿಂದೂ ಎಂಬ ಹೆಸರು ಬಳಕೆಗೆ ಬಂದಿತು.




ಗ್ರೀಕರ ರಾಜನಾದ ಅಲೆಕ್ಸಾಂಡರ್ ಭಾರತವನ್ನು ಆಕ್ರಮಣ ಮಾಡಿದಾಗ ಇವನಿಗೂ ಕೂಡ ಸಿಂಧು ನದಿ ತಡೆಯನ್ನುಂಟು ಮಾಡಿತು. ಅವರು ಈ ನದಿಯನ್ನು 'ಇಂಡಿಸ್' ಎಂದು ಕರೆದರು. ಕ್ರಮೇಣವಾಗಿ ಅದು 'ಇಂಡಿಯಾ' ಎಂದಾಯಿತು.


ಭಾರತವನ್ನು ಆರ್ಯರು ಆಳ್ವಿಕೆ ಮಾಡಿದ ಕಾರಣ ಇದಕ್ಕೆ ಆರ್ಯಾವರ್ತ ಎಂದು ಹೆಸರು ಬಂದಿತು. ಆರ್ಯರು ಸಿಂಧೂ ನದಿಯಿಂದ ಮಧ್ಯ ಭಾರತದವರೆಗೆ ಆಳ್ವಿಕೆ ಮಾಡಿದರು. ಆದ್ದರಿಂದ ಆರ್ಯಾವರ್ತ ಎಂಬ ಹೆಸರಿನಿಂದ ಕರೆಯಲಾಗಿದೆ. ಮೌರ್ಯರು ಅಖಂಡ ಭಾರತವನ್ನು ಆಳ್ವಿಕೆ ಮಾಡಿದ್ದರಿಂದ ಜಂಬೂದ್ವೀಪ ಎಂದು


ಕರೆದರು.


ಹೀಗೆ ಭಾರತವು ಭರತ, ಭರತನಾಡು, ಹಿಂದೂಸ್ಥಾನ್, ಇಂಡಿಯಾ, ಆರ್ಯಾವರ್ತ, ಜಂಬೂದ್ವೀಪ ಮುಂತಾದ ರೂಪ ನಿಷ್ಪತ್ತಿಯನ್ನು ಹೊಂದಿದೆ. ಅನಂತರ ಮಧ್ಯಕಾಲೀನ ಮುಸ್ಲಿಮ್ ಇತಿಹಾಸಕಾರರು ಉತ್ತರ ಭಾರತವನ್ನು ಹಿಂದೂಸ್ಥಾನ'' ಎಂದು ಕರೆದರು. ಆಧುನಿಕ ಭಾರತದಲ್ಲಿ ಆಳ್ವಿಕೆ ಮಾಡಿದ ಬ್ರಿಟಿಷರು ಭಾರತ ದೇಶವನ್ನು 'ಇಂಡಿಯಾ' ಎಂಬ ಹೆಸರಿನಿಂದ ಕರೆದರು. ಆದರೆ ಭಾರತ ಕ್ರಿ.ಶ. 1947ರಲ್ಲಿ ಸ್ವತಂತ್ರವಾದಾಗ ನಮ್ಮ ದೇಶದ ಸಂವಿಧಾನದಲ್ಲಿ ಇಂಡಿಯಾ ಅಂದರೆ 'ಭಾರತ' ಎಂಬುದಾಗಿ ಉಲ್ಲೇಖಿಸಲಾಗಿದೆ. ಏನೇ ಆದರೂ ಭಾರತ ಎಂಬ ಪದ ಭಾರತೀಯರ ರಾಜಕೀಯ, ಸಾಮಾಜಿಕ, ಆದ್ಯಾತ್ಮಿಕ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪದವಾಗಿದೆ.


ಭಾರತದ ಭೌಗೋಳಿಕ ವಿಭಾಗಗಳು (MAIN GEOGRAPHICAL DIVISIONS) :


ಭಾರತದ ಭೌಗೋಳಿಕ ಲಕ್ಷಣಗಳನ್ನು ಪ್ರಧಾನವಾಗಿ ನಾಲ್ಕು ವಿಭಾಗಗಳಾಗಿ ಎಂಗಡಿಸಲಾಗಿದೆ. ಅವುಗಳು ಈ ರೀತಿ ಇವೆ:


1) ಉತ್ತರ ಪರ್ವತ ಪ್ರದೇಶ (The hilly Country of the North)


2) ಉತ್ತರ ಮೈದಾನ ಪ್ರದೇಶ ಅಥವಾ ಸಿಂದೂ ಮತ್ತು ಗಂಗಾ ನದಿಗಳ ಬಯಲು ಪ್ರದೇಶ (The Great Northern I lain) 3) ದಖನ್ ಪ್ರಸ್ತಭೂಮಿ (Deccan Plateau)


4) ಪೂರ್ವ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳು (The Eastern and Western Ghats)


1) ಉತ್ತರ ಪರ್ವತ ಪ್ರದೇಶ (The hilly Country of the North)


ತರೆ ಚೌಗು ಪ್ರದೇಶದಿಂದ ಹಿಮಾಲಯದ ಶಿಖರದ ಅಂಚಿನವರೆಗೆ ಮತ್ತು ಹಿಂದೂಕುಷ್ ಪರ್ವತ ಪ್ರದೇಶದಿಂದ ಬರ್ಮಾವರೆಗೆ ಹರಡಿರುವ ಉತ್ತರ ಪರ್ವತ ಪ್ರದೇಶವು ಸುಮಾರು 1500 ಮೈಲಿಗಳನ್ನು ಉದ್ದವಾಗಿ ರಂಟೆ, 15 ರಿಂದ 200 ಮೈಲಿಗಳನ್ನು ಆಗುಲವಾಗಿದೆ. ಉತ್ತರ ಸರ್ವತ ಪ್ರದೇಶವು ಭರ್ವತಗಳಿಂದಲೂ ರುರ್ಗಮುವಾದ ಕಣಿವೆಗಳಿಂದಲೂ ವಿಶ್ವದಲ್ಲಿಯೇ ಅತ್ಯಂತ ಎತ್ತರವಾದ ಶಿಬಿರಗಳಿಂದ ಕೂಲ ಮಹತ್ತರವಾದ ಸ್ಥಾನವನ್ನು ಪಡೆದಿದೆ.


ಉತ್ತರ ಪರ್ವತ ಪ್ರದೇಶವು ಕಾಶ್ಮೀರ, ನೇವಾಳ, ಸಿಕ್ಕಿಂ, ಭೂತಾನ್, ಟೆಹರೆ, ಕುಮಾವ, ಬಲೂಚಿ ಪ್ರದೇಶಗಳನ್ನು ಒಳಗೊಂಡಿದೆ. 146 ಶಿಖರಗಳನ್ನು ಪ್ರಸ್ತುತ ಒಳಗೊಂಡಿದೆ. ಸುಮಾರು 40 ಶಿಖರಗಳು 2400 ಅಡಿಗಳಷ್ಟು ಎತ್ತರವಾಗಿದೆ. ಅದರಲ್ಲಿ ಗೌರಿಶಂಕರ ಶಿಖರ ಅಥವಾ ಮೌಂಟ್ ಎವರೆಸ್ಟ್ ಶಿಖರವು 3,848 ಮೀ ಅಡಿಗಳಷ್ಟು ಎತ್ತರವಿದೆ. ಇದು ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಶಿಖರವಾಗಿದೆ. ನಂಗಾ ಪರ್ವತ 8,126 ಮೀ., ಕಾಂಚನ ಗಂಗ 8, 598 ಮೀ. ಎತ್ತರ ಮತ್ತು ನಂದಾದೇವಿ 7,817 ಮೀ ಎತ್ತರವಿದೆ ಎಂಬವು ಮೂರು ಅತಿ ಎತ್ತರವಾದ ಶಿಖರಗಳಿವೆ, ಹಿಮಾಲಯ ಪರ್ವತ ಶ್ರೇಣಿ ಸಮುದ್ರಮಟ್ಟದಿಂದ 25,000 ಅಡಿಗಳಿಗಿಂತಲೂ ಎತ್ತರವಾಗಿರುವ ಹಲವು ಶಿಖರಗಳ ಪ್ರಕೃತಿ ಸೌಂದರ್ಯಕ್ಕೆ ಸುಪ್ರಸಿದ್ಧವಾಗಿದೆ. ಈ ಪರ್ವತ ಪ್ರದೇಶವು ಸರ್ವಕಾಲದಲ್ಲೂ ಹಿಮದಿಂದ ಆವೃತವಾಗಿರುತ್ತದೆ. ಜೊತೆಗೆ ದಟ್ಟವಾದ ಅರಣ್ಯಗಳನ್ನು ಹೊಂದಿದೆ. ಭಾರತದ ಉತ್ತರ ಪರ್ವತ ಪ್ರದೇಶದಲ್ಲಿ ಹಿಮಾಲಯ ಪರ್ವತ ಶ್ರೇಣಿಗಳ ಮಧ್ಯೆ ಕೆಲವು ಸಣ್ಣಕಣಿವೆ ಮಾರ್ಗಗಳಿವೆ. ಅವುಗಳಲ್ಲಿ ಚುಂಬಿ ಕಣಿವೆ ಪ್ರಸಿದ್ಧವಾಗಿದೆ.


ಹಿಮಾಲಯದ ದಕ್ಷಿಣ ಭಾಗದ ಶ್ರೇಣಿಯನ್ನು ಸಿವಾಲಿಕ್ ಶ್ರೇಣಿಯೆಂದು ಕರೆಯಲಾಗಿದೆ. ಸಿವಾಲಿಕ್ ಶ್ರೇಣಿಯು ದಕ್ಷಿಣಕ್ಕಿರುವ ಅರಣ್ಯ ಮತ್ತು ಹಲ್ಲುಗಾವಲು ಪ್ರದೇಶವನ್ನು 201 ಎಂದು ಕರೆಯಲಾಗಿದೆ. ಸಿವಾಲಿಕ್ ಶ್ರೇಣಿಯ ಉತ್ತರಕ್ಕಿರುವ ಹಿಮಾಲಯದ ಕೊಳ್ಳ ಪ್ರದೇಶಗಳಲ್ಲಿ ಹಲವಾರು ಗಿರಿಧಾಮಗಳಿವೆ, ಹಿಮಾಲಯದ ವಾಯವ್ಯ ಭಾಗದಲ್ಲಿ ಲಡಾಬ್ ಪ್ರಸ್ತಭೂಮಿ ಇದೆ. ಹಿಮಾಲಯದ ಪಶ್ಚಿಮಕ್ಕೆ ಅಪಘಾನಿಸ್ತಾನದಲ್ಲಿ ಹಿಂದೂಕುಪ್ ಮತ್ತು ಸುಲೈಮಾನ್ ಪರ್ವತ ಶ್ರೇಣಿಗಳಿವೆ. ಸುಲೈಮಾನ್ ಮತ್ತು ಸದ್ಹ್ ಪರ್ವತಗಳು ಭಾರತವನ್ನು ಅಪಘಾನಿಸ್ತಾನದಿಂದಲೂ ಕಿರ್ಕಾರ ಸದನಗಳು ಬಲೂಚಿಸ್ತಾನದಿಂದಲೂ ನಾಗರಾಜ್ ಕ್ಯೂ, ಲುಷಾಂಗ್ ಪರ್ವತಗಳು ಬರ್ಮಾದಿಂದಲೂ ವಿಭಜನೆ ಮಾಡಿವೆ.


ಭಾರತದ ಅತ್ಯಂತ ಪ್ರಮುಖ ನದಿಗಳಾದ ಸಿಂಧು, ಗಂಗಾ, ಬ್ರಹ್ಮಕ್ಷತ್ರ, ಯಮುನಾ, ಸರಸ್ವತಿ ಗೋಗ್ರ, ಜಿಲಂ, ಚೀನಾಜ್, ರಾವಿ, ಬಿಯಾಸ್, ಸಟೇಜ್ ಮುಂತಾದ ನದಿಗಳು ಹಾಗೂ ಅವುಗಳ ಉಪ ನದಿಗಳು ಇಲ್ಲಿಯೇ ಹುಟ್ಟುತ್ತವೆ ಅವುಗಳಲ್ಲಿ ಗಂಗಾನದಿಯು ಅತ್ಯಂತ ಪ್ರಮುಖವಾಗಿದೆ. ಗಂಗಾ ನದಿಯ ಹಿಮಾಲಯದಲ್ಲಿ ಜನಿಸಿ 500 ಮೈಲಿಗಳಷ್ಟು ಉದ್ದವಾಗಿ ಉತ್ತರ ಮೈದಾನದಲ್ಲಿ ಹರಿಯುತ್ತದೆ. ಇದು ಹರಿಯುವ ಭಾಗವನ್ನು ಫಲವತ್ತಾಗಿ ಮಾಡಿ ಆ ಜಾಗವನ್ನು ಧಾರ್ಮಿಕವಾಗಿ ಪವಿತ್ರವನ್ನಾಗಿಸಿದೆ.


ದುರಾದೃಷ್ಟವಶಾತ್ ಭಾರತದ ವಾಯುವ್ಯ ಭಾಗದಲ್ಲಿ ಸುಲೈಮಾನ್ ಮತ್ತು ಹಿಂದೂಕುಷ್ ಎಂಬ ಎರಡು ಶಿಖರಗಳು ಅತಿ ಎತ್ತರವಿರದ ಶಿಖರಗಳಾಗಿವೆ. ಪ್ರಮುಖ ಸ್ಥಳಗಳಾದ ಬೈಬರ್, ತೋಚ, ಕುರಂ, ಗೋಮಾಲ್, ಬೋಲಾನ್ ಕಣಿವೆಗಳು ಎತ್ತರವಾಗಿರದ ಕಾರಣ ಈ ಭಾಗಗಳ ಮೂಲಕ ವಿದೇಶಿಯರು ಆಕ್ರಮಣ ಮಾಡಿದ್ದಾರೆ. ಯೂರೋಪಿಯನ್ನರನ್ನು ಹೊರತುಪಡಿಸಿ ಶಕರು, ಹೂಣರು, ಮಂಗೋಲಿಯನ್ನರು, ಗ್ರೀಕರು, ಪಾರ್ಥಿಯನ್ನರು, ಬ್ಯಾಕ್ಟಿರಿಯನ್ನರು ಕುಶಾನರು, ದೆಹಲಿಯ ಸುಲ್ತಾನರು, ಮೊಘಲರು ಭಾರತದ ಮೇಲೆ ಈ ಕಣಿವೆಗಳ ಮೂಲಕ ಆಕ್ರಮಣ ಮಾಡಿ ಭಾರತವನ್ನು ವಶ ಪಡಿಸಿಕೊಂಡು ಬಹುಕಾಲ ಆಳ್ವಿಕೆ ಮಾಡಿದರು, ಸಣ್ಣ ಕಣಿವೆ ಮಾರ್ಗಗಳು ಆಕ್ರಮಣಗಳಿಗೆ ಮಾತ್ರವೇ ದ್ವಾರ ಬಾಗಿಲಗಳಾಗಿರಲಿಲ್ಲ. ಅವು ಭಾಲಕಬಾಚಿನ ರಾಷ್ಟ್ರಗಳೊಂದಿಗೆ ಶಾಂತಿಯುತ ಸಂಪರ್ಕವನ್ನು ಹೊಂದಲು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ನಮ್ಮ ದೇಶಕ್ಕೆ ವಿದೇಶಿಯರಾದ ವ್ಯಾಪಾರಿಗಳು, ಯಾತ್ರಿಕರು, ಪ್ರವಾಸಿಗರು ಭಾರತಕ್ಕೆ ಬರಲು ಅನುಕೂಲವಾಯಿತು. ಪರಿಣಾಮವಾಗಿ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆ ಏಷ್ಯಾಖಂಡದ ಎಲ್ಲ ಭಾಗಗಳಿಗೂ ಮತ್ತು ಇತರ ಖಂಡಗಳಿಗೂ ಹರಡಲು ಶ್ರೇಷ್ಠ ಮಾರ್ಗಗಳಾದವು.


ಉತ್ತರ ಪರ್ವತ ಪ್ರದೇಶದ ಪ್ರಾಮುಖ್ಯತ (Importance of the hilly Country of the North):


ಉತ್ತರ ಪರ್ವತ ಪ್ರದೇಶವು ಭಾರತದ ಇತಿಹಾಸದ ಮೇಲೆ ಅಮೂಲ್ಯ ಪಾತ್ರವನ್ನು ವಹಿಸಿ ರಾಜಕೀಯ, ಆರ್ಥಿಕ, ಧಾರ್ಮಿಕ ಸಾಂಸ್ಕೃತಿಕವಾಗಿ ಭಾರತದ ಮೇಲೆ ಪ್ರಭಾವ ಬೀರಿದೆ. ಭಾರತದ ರಕ್ಷಣಾಗೋಡೆಯಂತಿರುವ ಹಿಮಾಲಯ ಪರ್ವತಗಳು ವಿದೇಶಿಯರ ಆಕ್ರಮಣವನ್ನು ತಡೆಯುತ್ತದೆ ಹಾಗೂ ಹಿಮಾಲಯ ಪರ್ವತವು ಶೀತ ಮಾರುತಗಳನ್ನು ತಡೆದು ಮಳೆಯನ್ನು ಸುರುಸುತ್ತದೆ. ಬಹುತೇಕ ಪ್ರಮುಖ ನದಿಗಳು ಮತ್ತು ಅದರ ಉಪನದಿಗಳು ಇಲ್ಲಿಯೇ ಹುಟ್ಟಿ ಸದಾಕಾಲ ಹರಿಯುವ ಜೀವನದಿಗಳಾಗಿವೆ. ಈ ನದಿಗಳು ಸದಾಕಾಲ ಹರಿದು ತಮ್ಮೊಡನೆ ತರುವ ಮೆಕ್ಕಲ ಮಣ್ಣಿನಿಂದಾಗಿ ಗಂಗಾ ಬಯಲು ಪ್ರದೇಶಗಳು ಅತ್ಯಂತ ಫಲವತ್ತಾಗಿದೆ. ಇದರಿಂದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಹಿಮಾಲಯ ಪರ್ವತ ಪ್ರದೇಶದಲ್ಲಿರುವ ಅರಣ್ಯಗಳು, ಪ್ರಾಣಿಗಳು ಹಾಗೂ ಇತರ ಸಂಪನ್ಮೂಲಗಳು ದೇಶದ ಆರ್ಥಿಕ ದೃಷ್ಟಿಯಿಂದ ಮಹತ್ತರವಾಗಿದೆ.


ಉತ್ತರ ಪರ್ವತ ಪ್ರದೇಶಗಳಲ್ಲಿ ಹರಿದ್ವಾರ, ಬದರಿನಾಥ, ಋಷಿಕೇಶ, ಅಮರನಾಥ, ಕೇದಾರನಾಥ, ಕೈಲಾಸಗಿರಿ, ಧವಳಗಿರಿ, ಕಾಂಚನ ಗಂಗಾ, ಗೌರಿಶಂಕರ ಶಿಖರ ಮತ್ತು ಮಾನಸ ಸರೋವರ ಮುಂತಾದ ಧಾರ್ಮಿಕ ಪವಿತ್ರ ಕ್ಷೇತ್ರಗಳು ನೆಲೆವಿದಾಗಿದೆ. ಮಸ್ಸಂ, ನೈನಿತಾಲ್, ರಹರಾಡೂನ್, ಡಾರ್ಜಲಿಂಗ್ ಮುಂತಾದ ಬೇಸಿಗೆಯ ವಿಶ್ರಾತಿಧಾಮಗಳುರುವ ಪ್ರದೇಶ ಇದಾಗಿದೆ. ಸಾಂಸ್ಕೃತಿಕವಾಗಿಯೂ ಕೂಡ ಪ್ರಭಾವ ಬೇರಿದೆ. ಅನಾದಿ ಕಾಲದಿಂದಲೂ ಓಮಾಲಯ ಪರ್ವತ ಪ್ರದೇಶ, ಋಷ ಮುನಿಗಳು, ಸಾಧು ಸಂತರ ಪವಿತ್ರ ಸ್ಥಳವಾಗಿದೆ. ಭಾರತದೊಂದಿಗೆ ವಿದೇಶಿಯರು ವ್ಯಾಪಾರ-ವಾಣಿಜ್ಯ ಇತರೆ ಕ್ಷೇತ್ರಗಳ ಬಗ್ಗೆ ಸಂಬಂಧ ಹೊಂದಲು ಸಹಾಯವಾಗಿದೆ.


2. ಉತ್ತರ ಮೈದಾನ ಪ್ರದೇಶ (The Great Northern Plain) : (ಸಿಂಧೂ-ಗಂಗಾ ನದಿಗಳ ಬಯಲು ಪ್ರದೇಶ)


ಉತ್ತರ ಮೈದಾನ ಪ್ರದೇಶವನ್ನು ಸಿಂಧೂ-ಗಂಗಾ ನದಿಗಳ ಬಯಲು ಪ್ರದೇಶವೆಂದೂ ಕೂಡ ಕರೆಯುತ್ತಾರೆ. ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಸುಮಾರು 2000 ಮೈಲಿಗಳಷ್ಟು ಉದ್ದವಾಗಿ ಹರಡಿದೆ. 150 ರಿಂದ 200 ಮೈಲಿಗಳಷ್ಟು ಅಗಲವಾಗಿದೆ. ಭಾರತದಲ್ಲಿಯೇ ಅತ್ಯಂತ ಫಲವತ್ತಾದ ಭೂಮಿ ಉತ್ತರ ಮೈದಾನ ಪ್ರದೇಶವಾಗಿದೆ. ಈ ಪ್ರದೇಶವು ಮೂರು ಪ್ರಮುಖ ನದಿಗಳಾದ ಸಿಂಧೂ, ಗಂಗಾ, ಬ್ರಹ್ಮಪತ್ರ ಮತ್ತು ಅದರ ಉಪನದಿಗಳಿಂದ ಆವೃತವಾಗಿದೆ. ಈ ಪ್ರದೇಶವು ಸಿಂಧೂ ಮತ್ತು ಗಂಗಾ ನದಿಗಳಿಂದ ವ್ಯವಸಾಯಕ್ಕೆ ಅನುಕೂಲವಾದ್ದರಿಂದ ಸಿಂದೂ-ಗಂಗಾ ನದಿಗಳ ಬಯಲು ಪ್ರದೇಶವೆಂದು ಕರೆಯಲಾಗಿದೆ. ಸಿಂಧೂ-ಗಂಗಾ ನದಿ ಬಯಲು ಪ್ರದೇಶಗಳು ವ್ಯವಸಾಯಕ್ಕೆ ಅನುಕೂಲಕರವಾದ ಪ್ರದೇಶಗಳಾಗಿವೆ. ಸಿಂದ್ ಮತ್ತು ಪಂಜಾಬಿನ ಅರ್ಧದಷ್ಟು ಭಾಗವು ಪ್ರಸ್ತುತ ದಿನಗಳಲ್ಲಿ ಪಾಕಿಸ್ತಾನಕ್ಕೆ ಸೇರಿದುದಾಗಿದೆ. 'ಪಂಜಾಬ್‌' ಪ್ರಾಂತ್ಯವು ರಾವಿ, ಸಟೇಜ್, ಬಿಯಾಸ್, ಚೀಲಂ, ಚೀನಾಬ್ ಮುಂತಾದ ಐದು ನದಿಗಳಿಂದ ಆವೃತವಾಗಿರುವ ಪ್ರದೇಶವಾಗಿದೆ. ಈ ನದಿಗಳು ಹಿಮಾಲಯದಲ್ಲಿ ಹುಟ್ಟಿ ಪಂಜಾಬ್‌ನಲ್ಲಿ ಹರಿದು ಸಿಂಧೂ ನದಿಯಲ್ಲಿ ಸೇರುತ್ತವೆ. ಸಿಂಧೂ, ಗಂಗಾ, ಬ್ರಹ್ಮಪುತ್ರ, ಯಮುನಾ, ದೋಹಾಬ್ ನದಿಗಳು ಹಿಮಾಲಯದಲ್ಲಿ ಹುಟ್ಟಿ ಉತ್ತರ ಮೈದಾನದಲ್ಲಿ ಹರಿದು ಪೂರ್ವದ ಬಂಗಾಳ ಕೊಲ್ಲಿಯನ್ನು ಸೇರುತ್ತವೆ. ಸಿಂದೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಮಳೆಗಾಲದಲ್ಲಿ ಮಳೆಯಿಂದ ತುಂಬಿ ಹರಿದರೆ, ಬೇಸಿಗೆಯಲ್ಲಿ ಹಿಮಕರಗಿ ವರ್ಷವಿಡೀ ಜಲ ಭರಿತವಾಗಿ ಹರಿಯುತ್ತವ. ಗಂಗಾ ನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಜನಿಸಿ ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಳದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತವೆ.


ಉತ್ತರ ಮೈದಾನ ಪ್ರದೇಶದ ಪ್ರಾಮುಖ್ಯತೆ


(IMPORTANCE OF THE NORTHERN PLAINS) :


ಸಿಂಧು-ಗ೦ಗಾನದಿ ಬಯಲು ಪ್ರದೇಶವು ಸಾಂಸ್ಕೃತಿಕವಾಗಿ ನಮ್ಮ ಭಾರತೀಯ ಇತಿಹಾಸದ ಮೇಲೆ ಪ್ರಭಾವ ಬೀರಿದೆ. ಈ ಬಯಲು ಪ್ರದೇಶವು ಆರ್ಯರ ಮತ್ತು ಸಿಂಧೂ ಕೊಳ್ಳದ ನಾಗರೀಕತೆಯ ಕಾಲದಲ್ಲೂ ಅಸ್ತಿತ್ವದಲ್ಲಿದ್ದುದು ಕಂಡುಬಂದಿದೆ. ವೈದಿಕ ಋಷಿ, ಮಹಾಋಷಿಗಳು ಜನಿಸಿದ ನಾಡಾಗಿದೆ. ಈ ಪ್ರದೇಶದಲ್ಲಿ ಧಾರ್ಮಿಕ ಕ್ರಾಂತಿಯಾಯಿತು. ಕ್ರಿ.ಪೂ. 6ನೆಯ ಶತಮಾನದಲ್ಲಿ ಜೈನಧರ್ಮ, ಬೌದ್ಧಧರ್ಮದ ಉಗವಾದವು. ಇಲ್ಲಿ ಪ್ರಾಚೀನ ಕಾಲಾವಧಿಯಲ್ಲಿ ಸುಪ್ರಸಿದ್ಧ ಮತ್ತು ವಿಶ್ವ ವಿಖ್ಯಾತ, ಶಿಕ್ಷಣ ಕೇಂದ್ರಗಳಾದ ನಳಂದಾ, ತಕ್ಷಶಿಲೆ, ಉಜ್ಜಯನಿ, ಕಾಶಿ ಮುಂತಾದವು ಇದ್ದಂತಹ ಪ್ರದೇಶವಾಗಿದೆ. ತನ್ ಮತ್ತು ನಾಣಿಪತ್' ಎಂಬ ನಿರ್ಣಾಯಕ ಯುದ್ಧಗಳ ನಡೆದ ಭಾರತ ದೇಶದ ಇತಿಹಾಸದ ಗತಿಯನ್ನೇ ಬದಲಿಸಿದ ಪ್ರದೇಶ ಇದಾಗಿದೆ. ವಿಶ್ವವಿಖ್ಯಾತ ತಾಜ್‌ಮಹಲ್‌ನ ನೆಲೆಯಾದ ಆಗ್ರಾ, ತುರ್ಕಿ ಸುಲ್ತಾನರ ಮತ್ತು ಮೊಘಲರ ರಾಜಧಾನಿಯಾಗಿ ಮರದ ದೆಹಲಿ ಮುಂತಾದ ಇತಿಹಾಸ ಪ್ರಸಿದ್ಧ ನೆಲೆಗಳು ಸಿಂಧೂ ಗಂಗಾ ನದಿಗಳ ಬಯಲು ಪ್ರದೇಶದಲ್ಲಿ ಮಹಾ ಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ ಈ ಪ್ರದೇಶದಲ್ಲಿದೆ, ರಾಮ ಜನ್ಮಭೂಮಿಯಾದ ಆಯೋದ್ಯಯು ಸಹ ಈ ಪ್ರದೇಶದಲ್ಲಿದೆ. ಗೋಧಿ ಭತ್ತ ಕಬ್ಬು, ಸೆಣಬು ಹಾಗೂ ಇನ್ನೂ ಮುಂತಾದ ಉಪಯುಕ್ತ ಬೆಳೆಗಳನ್ನು ಈ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು.


ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ವಾರಣಾಸಿ, ಮಧುರಾ, ಅಲಹಾಬಾದ್, ಕುರುಕ್ಷೇತ್ರ, ಹರಿದ್ವಾರ, ಅಯೋಧ್ಯ ಮುಂತಾದವುಗಳು ಅಸ್ತಿತ್ವದಲ್ಲಿರುವ ಸ್ಥಳವಾಗಿದೆ. ಜೈನ ಮತ್ತು ಬೌದ್ಧರ ಪವಿತ್ರ ಕ್ಷೇತ್ರಗಳಾದ ಕುಂದ ಗ್ರಾಮ ಸಾರನಾಥ, ಬುದ್ಧಗಯಾ, ಲುಂಬಿಣಿವನ, ಕೌಶಾಂಬಿ ಸ್ಥಳಗಳು ಇಲ್ಲಿ ಕಂಡುಬರುತ್ತವೆ.


ಉತ್ತರ ಮೈದಾನ ಪ್ರದೇಶವು ರಾಜಕೀಯವಾಗಿಯೂ ಬೃಹತ್ ಏಕೀಕೃತ ರಾಜ್ಯಗಳ ಉದಯಕ್ಕೆ ಕೂಡ ಪ್ರಭಾವ ಬೀರಿದೆ. ಆರ್ಯರು ರಾಜಕೀಯವಾಗಿ ಮೊದಲು ಈ ಪ್ರದೇಶದಲ್ಲಿ ನೆಲೆಸಿದ್ದರು ಮತ್ತು ಸಿಂಧೂಕೊಳ್ಳದ ಜನರೂ ಕೂಡ ಇಲ್ಲಿ ನೆಲೆಸಿದ್ದರು. ರಾಜ ಸಂತತಿಗಳಾದ ಮಗುಧ, ನಂದರು, ಶೃಂಗರು, ಮೌರ್ಯರು, ಗುಪ್ತರು, ಕುಶಾನರು, ವರ್ಧನರು ಮೊದಲಾದ ಸಂತತಿಯವರು ಆಳ್ವಿಕೆ ಮಾಡಿದ್ದಾರೆ. ಅಲ್ಲದೇ ಸುಪ್ರಸಿದ್ಧ ರಾಜರಾದ ಅಶೋಕ, ಸಮುದ್ರಗುಪ್ತ ವಿಕ್ರಮಾಧಿತ್ಯ, ಚಂದ್ರಗುಪ್ತಮೌರ್ಯ, ಇಮ್ಮಡಿ ಚಂದ್ರಗುಪ್ತ, ಕಾನಿಷ್ಕ, ಹರ್ಷವರ್ಧನರು


15


ಆಳ್ವಿಕೆ ನಡೆಸಿದ ಸ್ಥಳ ಇದಾಗಿದೆ.


ಇಲ್ಲಿನ ನದಿಗಳಾದ ಗಂಗಾ, ಒಂದು, ಬ್ರಹ್ಮಪತ್ರ ಹಾಗೂ ಅದರ ಉಪನದಿಗಳು ವರ್ಷ ಹರಿಯುವುದರಿಂದ ಆರ್ಥಿಕವಾಗಿ ಈ ಪ್ರದೇಶ ಪ್ರಭಾವ ಬೀರಿದೆ. ಸಿಂಧೂ ಮತ್ತು ಗಂಗಾ ನದಿಗಳು ಮತ್ತು ಅವುಗಳ ಮುಖ್ಯ ಉಪನದಿಗಳು ನೌಕಾ ಸಂಚಾರಕ್ಕೆ ಅನುಕೂಲವಾಗಿದೆ. ಪ್ರಾಚೀನ ಕಾಲದಲ್ಲಿ ಈ ನದಿ ಜಲಮಾರ್ಗಗಳು ವ್ಯಾಪಾರ, ಮಾನವ ಸಂಚಾರ ಸಂಪರ್ಕಗಳಿಗಾಗಿ కుంబ ಅನುಕೂಲವಾಗಿದ್ದವು. ಜೀವನದಿಗಳಾಗಿ ಇವುಗಳು ಹರಿಯುವುದರಿಂದ ನೀರಿನ ಸೌಕರ್ಯ ಉತ್ತಮವಾಗಿದ್ದು ಫಲವತ್ತಾದ ಭೂಮಿಯಿಂದ ಆಹಾರ ಧಾನ್ಯಗಳ ಉತ್ಪಾದನೆಗೆ ಸಹಾಯಕವಾಗಿದೆ. ಗಂಗಾನದಿಯ ತೀರ ಭಾಗದಲ್ಲಿ ನಾಟಲೀಪುತ್ರ, ಅನಾರಸ್ ಮುಂತಾದ ನಗರಗಳು, ಯಮನಾ ನದಿ ತೀರದಲ್ಲಿ ವಾಣಿವತ್, ಕುರುಕ್ಷೇತ್ರ, ದೆಹಲಿ, ಆಗ್ರಾ, ಮಥುರಾ, ಕಾಬ್ರಿ ಇಟವಾ ಮುಂತಾದ ಐತಾಸಿಕ ಸ್ಥಳಗಳನ್ನು ಹೊಂದಿರುವ ಪ್ರದೇಶವಾಗಿದೆ. ಅಪಾರ ಪ್ರಮಾಣದ ಇಳುವರಿ ಸಾಧ್ಯವಾಗಿ ಕೃಷಿಕ್ಷೇತ್ರ ಆರಿಸಿದ್ದರಿಂದ ಕೈಗಾರಿಕಾ ಕೇಂದ್ರಗಳು, ನಗರಗಳು, ರಾಜಧಾನಿಗಳ ಅಭಿವೃದ್ಧಿಗೆ ಸಹಾಯಕವಾಗಿರುವ ಪ್ರದೇಶವಾಗಿದೆ. ಅಲ್ಲದೆ ವೇದಗಳು, ಅರಣ್ಯಗಳು, ಬ್ರಾಹ್ಮಣಗಳು, ರಾಮಾಯಣ, ಮಹಾಭಾರತ ಮತ್ತು ಪುರಾಣಗಳು ಮುಂತಾದ ಶ್ರೀಮಂತ ವೈದಿಕ ಸಾಹಿತ್ಯ ಸೃಷ್ಟಿಯಾದ ಪ್ರದೇಶವಾಗಿದೆ. ಕಾಳಿದಾಸ, ಭಾಸ, ಶೂದ್ರಕ, ಬಾಣ, ಗಾರ್ಜುನ, ವಸುಬಂಧು ವಿಶಾಖದತ್ರ, ಅಶ್ವಘೋಷ, ಅಸಂಗ ಮುಂತಾದ ದಾರ್ಶನಿಕರು ಜನಿಸಿದ ಭೂಮಿ ಇದಾಗಿದೆ. ಕಾಳಿದಾಸ ಎಂಬ ಸುಪ್ರಸಿದ್ಧ ಕವಿ ಜನದ ಜನ್ಮಸ್ಥಳವಾಗಿದೆ. ಕೋನಾರ್ಕ್, ದೇವ್‌ಫರ್, ಮೌಂಟು ಅಬು, ಖುಜರಹೋ ಮತ್ತು ಭುವನೇಶ್ವರ ಮುಂತಾದ ಪ್ರಸಿದ್ಧ ದೇವಾಲಯಗಳಿರುವ ಸ್ಥಳವಾಗಿದೆ.


3. ದಖನ್ ಪ್ರಸ್ಥಭೂಮಿ (DECCAN PLATEAU) : ಸಾತ್ಪುರ, ಎಂಡ್ಯ ಮತ್ತು ಅರಾವಳಿ ಪರ್ವತಗಳಿಂದ ಪೂರ್ವ ಮತ್ತು ಪಶ್ಚಿಮ ತೀರ ಪ್ರದೇಶಗಳಿಂದ ಪ್ರತ್ಯೇಕವಾಗಿರುವ ಎತ್ತರವಾದಂತಹ ದಕ್ಷಿಣ ಪರ್ಯಾಯ ದ್ವೀಪದ ಭಾಗವಾಗಿದೆ. ಈ ಪ್ರದೇಶವು ತ್ರಿಕೋನಾಾರವಾಗಿದ್ದು ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾದ ಭಾಗವಾಗಿದೆ. ಗುಜರಾತ್‌ನಿಂದ ಬಂಗಾಳದವರೆಗೆ ಈ ಪ್ರದೇಶವು ವಿಸ್ತರಿಸಿದೆ. ವಿಂಧ್ಯಪರ್ವತ ಸಾತ್ಪುರ ಮತ್ತು ಅರಾವಳಿ ಬೆಟ್ಟಗಳು ಉತ್ತರ ಮತ್ತು ದಕ್ಷಿಣ ಭಾರತವನ್ನು ಪ್ರತ್ಯೇಕ ಮಾಡಿವೆ. ಸುತ್ತುರ ಬೆಟ್ಟಗಳು 1000 ಅಡಿಗಳಷ್ಟು ಎತ್ತರ ಮತ್ತು ದಟ್ಟವಾದ ಅರಣ್ಯ ಪ್ರದೇಶವಾಗಿದ್ದು ಉತ್ತರ ಭಾರತದಲ್ಲಿ ಸಂಭವಿಸುವ ಆಕ್ರಮಣಗಳು ದಕ್ಷಿಣಕ್ಕೆ ವ್ಯಾಪಿಸದಂತೆ ಬದುಟ್ಟಿಗೆ ತಡೆಯೊಡ್ಡುತ್ತವೆ. ಭೂಗರ್ಭಶಾಸ್ತ್ರಜ್ಞರ ಪ್ರಕಾರ ದಖನ್ ಪ್ರಸ್ಥಭೂಮಿಯು ಹಿಮಾಲಯ ಮತ್ತು ಸಿಂಧೂ-ಗಂಗಾನದಿಗಳ ಪ್ರದೇಶಕ್ಕಿಂತ ಅತ್ಯಂತ ಪುರಾತನ ಪ್ರದೇಶವಾಗಿದೆ. ಈ ಭಾಗದಲ್ಲಿ ನರ್ಮದಾ ಮತ್ತು ತಪತಿ ನದಿಗಳು ಮಾತ್ರ ಪಶ್ಚಿಮದಲ್ಲಿ ಹುಟ್ಟಿ, ಅರಬ್ಬಿ ಸಮುದ್ರವನ್ನು ಸೇರುತ್ತವೆ. ಉಳಿದ ಎಲ್ಲಾ ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಬಂಗಾಳಕೊಲ್ಲಿಯನ್ನು ಸೇರುತ್ತವೆ. ಈ ಪ್ರದೇಶದ ಪ್ರಮುಖ ನದಿಗಳಾದ ಗೋದಾವರಿ, ತುಂಗಭದ್ರ, ಕೃಷ್ಣ ಕಾವೇರಿ, ಮಹಾನದಿ, ನದಿಗಳು ಮತ್ತು...ಪೆರಿಯಾರ್, ಭವಾನಿ, ಕಾಳಿ, ಭೀಮಾ ಮುಂತಾದ ಸಣ್ಣ ನದಿಗಳು ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ. ಇವುಗಳು ವರ್ಷವಿಡಿ ತುಂಬಿ ಹರಿಯುವುದಿಲ್ಲ, ಆದ್ದರಿಂದ ಈ ನದಿಗಳು ಸಾರಿಗೆ ಸಂಪರ್ಕಕ್ಕೆ ಅನುಕೂಲಕರವಾಗಿಲ್ಲ ಎಂದ ಮತ್ತು ಸಾತ್ಪುರ


ಬೆಟ್ಟಗಳು ದಕ್ಷಿಣ ಮತ್ತು ಉತ್ತರ ಭಾರತವನ್ನು ಪ್ರತ್ಯೇಕ ಮಾಡಿರುವುದರಿಂದ ಉತ್ತರ ಮತ್ತು ದಕ್ಷಿಣ ಭಾರತದ ಸಂಸ್ಕೃತಿಗಳು ಭಿನ್ನವಾಗಿ ಬೆಳೆಯಲು ಕಾರಣವಾಗಿವೆ.


ದಖನ್ ಪ್ರಸ್ಥಭೂಮಿಯ ಪ್ರಾಮುಖ್ಯತ (IMPORTANCE OF DECCAN PLATEAU):


ದಖನ್ ಪ್ರಸ್ತಭೂಮಿಯು ಅತ್ಯಂತ ಪುರಾತನ ಪ್ರದೇಶವಾಗಿದೆ. ಆದ್ದರಿಂದ ಭಾರತೀಯ ಇತಿಹಾಸದ ಮೇಲೆ ಇದು ತನ್ನ ಪ್ರಭಾವ ಬೀರಿದೆ. ದಕ್ಷಿಣದ ಪರ್ಯಾಯ ದ್ವೀಪವು ಬೆಟ್ಟ ಗುಡ್ಡಗಳು, ಪ್ರಸ್ಥಭೂಮಿ ಮತ್ತು ನದಿ ಕಣಿವೆಗಳಿಂದಾಗಿ ಸಣ್ಣ ಸಣ್ಣ ಪ್ರದೇಶಗಳಲ್ಲಿ ವಿಭಜಿತವಾಗಿದೆ. ಹೀಗೆ ಬದಲಾದ ಭೌಗೋಳಿಕ ಸ್ವರೂಪಗಳಿಂದಾಗಿ ಉತ್ತರಭಾರತದ ಬಯಲು ಪ್ರದೇಶಕ್ಕಿಂತ ದಕ್ಷಿಣಭಾರತ ಅತ್ಯಂತ ಕಡಿಮೆ ರಾಜಕೀಯ ವ್ಯವಸ್ಥೆ ಏರ್ಪಡಲು ಸಾಧ್ಯವಾಯಿತು. ರಾಮಾಯಣ ಮತ್ತು ಮಹಾಭಾರತ ಕಾಲದ ಪ್ರದೇಶಗಳಾದ ಹಿಂದೆ ಮತ್ತು ವಿರಾಟನಗರ ಇಲ್ಲಿ ಇವೆ, ಮಹಾನ್ ಋಷಿಗಳಾದ ಋಷಿಶುಂಗ ಕಣ್ವ, ಮಾರ್ಕಂಡೇಯ ಮುಂತಾದ ಪುರಾಣ ಪುರುಷರು ಈ ಸ್ಥಳದಲ್ಲಿ ವಾಸವಾಗಿದ್ದಾರೆ.


ರಾಜಕೀಯವಾಗಿಯೂ ಸಹ ದಖನ್ ಪ್ರಸ್ಥಭೂಮಿಯು ಭಾರತದ ಇತಿಹಾಸದ ಮೇಲೆ ಪ್ರಭಾವ ಬೀರಿದೆ. ಶಾತವಾಹನರು, ಪಲ್ಲವರು, ಚೋಳರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ದೇವಗಿರಿಯ ಯಾದವರು ಕಾಳಶೀಯರು, ವಿಜಯನಗರ ಸಾಮ್ರಾಜ್ಯ ಮುಂತಾದ ಸಾಮ್ರಾಜ್ಯಗಳು, ಅಧಿಕಾರಕ್ಕೆ ಬಂದು ಅಳ್ವಿಕೆ ಮಾಡಿದ್ದಾರೆ. ಉತ್ತರ ಮತ್ತು ದಕ್ಷಿಣ ಭಾರತಗಳನ್ನು ರಾಜಕೀಯವಾಗಿ ಒಂದುಗೂಡಿಸುವಲ್ಲಿ ಔರಂಗಜೇಬ್, ಸಮುದ್ರಗುಪ್ಪ ಅಶೋಕ, ಅಲ್ಲಾವುದ್ದೀನ್ ಖಿಲ್ಲಿ, ಮಹಮ್ಮದ್ ಬಿನ್ ತೊಘಲಕ್ ಮುಂತಾದ ರಾಜರುಗಳು ಪ್ರಯತ್ನಪಟ್ಟಿದ್ದಾರೆ.


ಆರ್ಥಿಕವಾಗಿ ದಖನ್ ಪ್ರಸ್ತಭೂಮಿ ಭಾರಕದ ಸಹಾಸದ ಮೇಲೆ ಪ್ರಭಾವ ಬೀರಿದೆ. ಈ ಪ್ರದೇಶದಲ್ಲಿ ಬಹುಕಾಲ ಶಾಂತಿ ಸುವ್ಯವಸ್ಥೆಗಳು ನೆಲೆಸಿದ್ದರಿಂದ ದಖನ್ ಪ್ರಸ್ಥಭೂಮಿಯು ಕೃಷಿ, ಕೈಗಾರಿಕೆ, ವಾಣಿಜ್ಯ-ವ್ಯಾಪಾರಗಳು ಸಮೃದ್ಧವಾಗಲು ಕಾರಣವಾಗಿದೆ. ದಖನ್ ಪ್ರಸ್ಥಭೂಮಿಯು ಏಷ್ಯಾ ಮತ್ತು ಯುರೋಪ್: ರಾಷ್ಟ್ರಗಳೊಡನೆ ವ್ಯಾಪಾರ ಸಂಪರ್ಕವನ್ನು ಹೊಂದಿದ್ದು ಆರ್ಥಿಕವಾಗಿ ಬಲಿಷ್ಠವಾಗಿದೆ.


ಹಾಗೆಯೇ ಇಲ್ಲಿ ಹರಿಯುವ ನದಿಗಳು ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಪ್ರಭಾವ ಬೀರಿದೆ, ದಖನ್ ಪ್ರಸ್ತಭೂಮಿ ದ್ರಾವಿಡ ಸಂಸ್ಕೃತಿಗೆ ತವರುಮನೆಯಾಗಿದೆ. ಹಾಗಾಗಿ ದಖನ್ ದ್ರಾವಿಡರ ಮೂಲಸ್ಥಾನವಾಗಿದೆ. ವಿಜಯನಗರ, ಬಾದಾಮಿ, ಐಹೊಳೆ, ಬೇಲೂರು, ಮೈಸೂರು, ಅಂಜತಾ ಕಾರ್ಲೆ, ನಾಸಿಕ್, ನಾಗರ್ಜುನಕೊಂಡ ಮೊದಲಾದ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳು ಈ ಭಾಗದಲ್ಲಿದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸ ಶಂಕರಚಾರ್ಯ, ಮಧ್ವಚಾರ್ಯ, ರಾಮಾನುಜಾಚಾರ್ಯ ಮುಂತಾದವರು ಈ ಭಾಗದಲ್ಲಿ ಕ್ರಾಂತಿಕಾರಿ ಸಿದ್ಧಾಂತಗಳನ್ನು ಧಾರ್ಮಿಕವಾಗಿ ಮಂಡಿಸಿ ಹೊಸ ಪಂಥಗಳ ಉದಯಕ್ಕೆ


ಕಾರಣರಾಗಿದ್ದಾರೆ. ಗಾಧ ಸಪ್ತಶತಿ, ಮತ್ತ ವಿಲಾಸ ಪ್ರಹಸನ, ಕವಿರಾಜಮಾರ್ಗ, ಗದಾಯುದ್ಧ ವಿಕ್ರಮಾಂಕ ದೇವಚರಿತ ಮುಂತಾದ ಸಾವಿರಾರು ಶ್ರೇಷ್ಠ ಗ್ರಂಥಗಳು ಇಲ್ಲಿ ರಚನೆ ಆಗಿವೆ. ಮೇಲಿನ ಎಲ್ಲಾ ಅಂಶಗಳಿಂದ ದಖನ್ ಪ್ರಸ್ತಭೂಮಿಯು ಧಾರ್ಮಿಕವಾಗಿ, ಸಾಕವಾಗಿ, ಆರ್ಥಿಕವಾಗಿ ಭಾರತದ ಇತಿಹಾಸದ ಮೇಲೆ ತನ್ನ ಪ್ರಭಾವ ಬೀರಿದೆ.

4.


ಪೂರ್ವ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳು (The Eastern and Western Ghats):


ಪೂರ್ವ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳು ದಖನ್ ಪ್ರಸ್ಥಭೂಮಿಯಿಂದ ಪ್ರತ್ಯೇಕಗೊಂಡಿರುವ ಭಾಗಗಳಾಗಿವೆ. ಈ ಪ್ರದೇಶವು ಸಮುದ್ರತೀರಗಳಿಂದ ಒಳಗೊಂಡಿರುವ ಪ್ರದೇಶವಾಗಿದೆ. ಈ ಎರಡು ತೀರ ಪ್ರದೇಶಗಳು ದಕ್ಷಿಣಕ್ಕೆ ಇಳಿಜಾರಾಗಿದ್ದು ಕನ್ಯಾಕುಮಾರಿ ಹತ್ತಿರ ಒಂದಾಗುತ್ತವೆ. ಸಮುದ್ರ ತೀರ ಪ್ರದೇಶಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.


* ೮) ಪಶ್ಚಿಮ ತೀರ ಪ್ರದೇಶ ಅಥವಾ ಮಲಬಾರು ತೀರ ಪ್ರದೇಶ ಆ) ಪೂರ್ವ ತೀರ ಪ್ರದೇಶವನ್ನು ಕೋರಮಂಡಲ ತೀರಪ್ರದೇಶ ಎಂದು ಕರೆಯುತ್ತಾರೆ.


ಪಶ್ಚಿಮ ತೀರ ಪ್ರದೇಶವು ಪೂರ್ವ ತೀರ ಪ್ರದೇಶದ ವಿಶಾಲವಾಗಿಲ್ಲ .ಪಶ್ಚಿಮ ಪ್ರದೇಶ ಅರಬ್ಬಿ ಸಮುದ್ರಕ್ಕೆ ಸಮಾನಂತರವಾಗಿ ಸುಮಾರು 1140 ಕಿ.ಮೀ. ಉದ್ದವಿದೆ, ಉದ್ದಕ್ಕೂ ಕಡಿದಾದ ಬೆಟ್ಟಗಳಿಂದ ಕೂಡಿರುವ ಪ್ರದೇಶವನ್ನು ಪಶ್ಚಿಮ ಘಟ್ಟಗಳೆಂದು ಕರೆಯುತ್ತಾರೆ. ಇದರ ಮತ್ತೊಂದು ಹೆಸರು 'ಸಹ್ಯಾದ್ರಿ' ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಮಳೆ ಬೀಳುವುದರಿಂದ ಅಧಿಕ ಪ್ರಮಾಣದ ಮಳೆ ಬೀಳುವ ಪ್ರದೇಶವಾಗಿದೆ ಮತ್ತು ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದ್ದು ಉಬ್ಬುತಗ್ಗುಗಳನ್ನು ಒಳಗೊಂಡಿದೆ. ಈ ಭಾಗದಲ್ಲಿ ದಟ್ಟವಾದ ಅರಣ್ಯ ಸಂಪತ್ತು ಅಧಿಕವಾಗಿದ್ದು ತೇಗ, ಹೊನ್ನೆ, ಗಂಧದ ಮರಗಳು ಹೇರಳವಾಗಿವೆ. ಹಾಗೆಯೇ ಖನಿಜ ಸಂಪತ್ತು ಅಧಿಕವಾಗಿದ್ದು ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಗಳು ಸದಯಿಸಲು ಕಾರಣವಾಗಿದೆ. ಸಮದಟ್ಟಾದ ಭೂಮಿ ಇಲ್ಲಿ ಅತ್ಯಲ್ಪ ಪ್ರಮಾಣದಲ್ಲಿದೆ. ವ್ಯವಸಾಯಕ್ಕೆ ಯೋಗ್ಯವಾದ ಭೂಮಿ ಕಡಿಮೆ ಪ್ರಮಾಣದಲ್ಲಿದೆ, ಇಲ್ಲಿ ಭತ್ತ ಮತ್ತು ಹತ್ತಿಯನ್ನು ಬೆಳೆಯುತ್ತಾರೆ. ಇಲ್ಲಿ ಹಲವಾರು ಬಂದರುಗಳಿವೆ. ಈ ತೀರಪ್ರದೇಶಗಳ ಮೂಲಕ ಯೂರೋಪಿಯನ್ನರಾದ ಪೋರ್ಚುಗೀಸ್, ಇಂಗ್ಲೀಷರು ಮತ್ತುಡಚ್ಚರು, ಪ್ರಂಚರು ಭಾರತಕ್ಕೆ ಬಂದಿದ್ದರು.


ಪೂರ್ವತೀರ ಪ್ರದೇಶ ವಿಶಾಲವಾದ ಪ್ರದೇಶವಾಗಿದೆ. ಈ ಪ್ರದೇಶವು ಸಮುದ್ರ ಮಟ್ಟಕ್ಕಿಂತ 3000 ಅಡಿಗಳಷ್ಟು ಎತ್ತರವಾಗಿದೆ. ಈ ಪ್ರದೇಶವು ಗಂಗಾನದಿ ಬಯಲುಗಳಿಂದ ದಕ್ಷಿಣದ ಕೋರಮಂಡಲ ಪ್ರದೇಶದವರೆಗೆ ರಿಸಿದೆ. ಈ ತೀರ ಪ್ರದೇಶವು ನೇರ ಮತ್ತು ಅಗಲವಾಗಿರುವ ಪ್ರದೇಶವಾಗಿದೆ. ಇದನ್ನು ಕೋರಮಂಡಲ ತೀರ ಪ್ರದೇಶವೆಂದು ಕರೆಯುತ್ತಾರೆ. ಇದು ಹಲವು ಸಂಪನ್ಮೂಲಗಳಿಂದ ಕೂಡಿದೆ. ಇದು ಮಳೆ ಬೀಳುವ ಪ್ರದೇಶವಾಗಿದ್ದು ಕಬ್ಬು, ಹತ್ತಿ, ಭತ್ತವನ್ನು ಅಧಿಕವಾಗಿ ಬೆಳೆಯುತ್ತಾರೆ. ಕೃಷ್ಣ, ಗೋದಾವರಿ, ಮಹಾನದಿ, ಕಾವೇರಿ ನದಿಗಳು ಹರಿದು ಆರ್ಥಿಕವಾಗಿ ಭೂಮಿಯನ್ನು ಫಲವತ್ತಾಗಿಸಿ ಈ ಪ್ರದೇಶವನ್ನು ಸಮೃದ್ಧಿ ಮಾಡಿದೆ.


ಪೂರ್ವ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳ ಪ್ರಾಮುಖ್ಯತ


ಇಲ್ಲಿ ದಟ್ಟವಾಗಿ ಬೆಳೆದ ಅರಣ್ಯ ಭಾರತದ ಚರಿತ್ರೆಯ ಮೇಲೆ ಆರ್ಥಿಕವಾಗಿ ಅಪಾರವಾದ ಪ್ರಭಾವವನ್ನು ಬೀರಿದೆ. ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಭಾರತೀಯ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದೆ. ಪೂರ್ವ ಮತ್ತು ಪಶ್ಚಿಮ ತೀರ ಪ್ರದೇಶಗಳಲ್ಲಿ ರಾಜಕೀಯವಾಗಿ ಶಾತವಾಹನರು, ಚೋಳರು, ಚೇರರು, ಮರಾರರು ನೌಕಾಪಡೆಯನ್ನು ನಿರ್ಮಿಸಿ ಆಳ್ವಿಕೆ ಮಾಡಿದ್ದಾರೆ, ಒಂದನೇ ರಾಜೇಂದ್ರ ಅಂಡಮಾನ್ ನಿಶೋಬಾರ್‌ ಮತ್ತು ಪೆಗು ದ್ವೀಪಗಳನ್ನು ಸಹ ಆಶ್ರಮಿಸಿದ್ದನು. ಭಾರತದ ಪೂರ್ವ ಮತ್ತು ಪಶ್ಚಿಮ ತೀರಗಳಲ್ಲಿ ಹಲವು ಬಂದರುಗಳಿದ್ದ ಪರಿಣಾಮವಾಗಿ ಅನಾದಿ ಕಾಲದಿಂದಲೂ ವಿದೇಶಿ ರಾಷ್ಟ್ರಗಳೊಂದಿಗೆ ಭಾರತ ವ್ಯಾಪಾರ ಸಂಪರ್ಕವನ್ನು ಹೊಂದಿತ್ತು. ಪೂರ್ವದ ಬಂದರುಗಳ ಮೂಲಕ ಭಾರತೀಯರ ಜಾವಾ, ಸುಮಾತ್ರಾ, ಬರ್ಮಾ, ಇಂಡೋ-ಚೀನಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿತ್ತು. ಹೀಗೆಯೇ ಭಾರತದ ಪಶ್ಚಿಮದ ಸೂರತ್, ಸೂಪಾರ್ ಮುಂತಾದ ಬಂದರುಗಳ ಮೂಲಕ ಗ್ರೀಕ್, ರೋಮ್‌ನರು ಅರಬ್ಬರು ದಕ್ಷಿಣ ಭಾರತದೊಡನೆ ಸಮುದ್ರ ವ್ಯಾಪಾರ ಸಂಪರ್ಕ ಹೊಂದಿದ್ದರು. ಕ್ಯಾಂಬೆ, ಮದ್ರಾಸ್, ಪಾಂಡಿಚೇರಿ, ಕ್ವಿಲಾನ್, ಸೂರತ್, ಮುಂಬೈ, ಗೋವಾ, ಕಲ್ಲಿಕೋಟೆ, ಕೊಚ್ಚಿನ್, ಮಾಖಪಟ್ಟಣ ಮತ್ತು ಕಲ್ಕತ್ತಾ ಮುಂತಾದವು ಆಧುನಿಕ ಕಾಲದ ಪ್ರಧಾನ ಬಂದರುಗಳಾಗಿವೆ.


ಪ್ರಧಾನ ನದಿಗಳು (Important Rivers)


ಭಾರತದ ಪ್ರಧಾನ ನದಿಗಳಾದ ಸಿಂಧೂ, ಗಂಗಾ, ಬ್ರಹ್ಮಪುತ್ರ ನದಿಗಳ ಜನ್ಮ ಸ್ಥಾನ ಹಿಮಾಲಯ ಪರ್ವತ ಪ್ರದೇಶ. ಈ ನದಿಗಳು ಅನಾದಿ ಕಾಲದಿಂದಲೂ ಉತ್ತರ ಭಾರತದ ಜನತೆಯ ಜೀವನಾಧಾರವೆನ್ನದ ಜೀವ ನದಿಗಳಾಗಿವೆ. ಕೃಷಿ, ವ್ಯಾಪಾರ, ವಾಣಿಜ್ಯ ಸಂಚಾರದ ವ್ಯವಸ್ಥೆಗೆ ಬೆನ್ನೆಲುಭಾಗಿ ಈ ನದಿಗಳು ಹರಿಯುತ್ತಿವೆ. ಪ್ರಧಾನವಾದ “ಸಿಂಧೂ ನದಿ'' ಕೈಲಾಸ ಪರ್ವತದಲ್ಲಿ ಜನಿಸಿ ದಕ್ಷಿಣಾಭಿಮುಖವಾಗಿ ಸುಮಾರು 2880 ಕಿ.ಮಿ, ಉದ್ದವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಸಿಂಧೂ ನದಿಯ ಉಪನದಿಗಳಾದ ರಾವಿ, ಬಿಯಾಸ್, ಝಲಂ, ಚೆನಾಬ್ ಮತ್ತು ಸಟ್ಲಜ್ ಪಂಜಾಬಿನಲ್ಲಿ ಹರಿದು ಸಿಂಧೂನದಿಯಲ್ಲಿ ವಿಲೀನಗೊಳ್ಳುತ್ತವೆ. ಹೀಗೆಯೇ 'ಗಂಗಾನದಿ'' ಕೂಡ ಹಿಮಾಲಯದ ಗೋಮುಖ ಮಂಜು ಕಣಿವೆಯಲ್ಲಿ ಜನಿಸಿ, ಉಪ ನದಿಗಳಾದ ಗೋಗ್ರ, ಕೋಸಿ, ಗಂಥಕ್, ಯಮುನಾ, ಚಂಬಲ್ ಮತ್ತು ಶೋಗಾಗಳು ವಿಲೀನಗೊಂಡು ಸುಮಾರು 2800 ಕಿ.ಮೀ ಗಳಷ್ಟು ಉದ್ದವಾಗಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ''ಬ್ರಹ್ಮಪುತ್ರ' ಎಂಬ ಮತ್ತೊಂದು ಪ್ರಧಾನವಾದ ನದಿಯು ಸಹ ಹಿಮಾಲಯದ ಕೈಲಾಸ ಪರ್ವತದಲ್ಲಿ ಜನಿಸಿ, ಉಪನದಿಗಳಾದ ದಿಬಾಂಗ್ ಮತ್ತು ಲುಹಿತ್‌ಗಳು ಎಲೀನಗೊಂಡು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.


ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲಿಯು ಹಲವಾರು ಪ್ರಮುಖ ನದಿಗಳಿವೆ. ಆದರೆ ಈ ನದಿಗಳು ಸಂಚಾರಕ್ಕೆ ಉಪಯುಕ್ತವಾಗಿಲ್ಲ. ಆದರೆ ಕೃಷಿ ಮತ್ತು ವಿದ್ಯುತ್‌ ಉತ್ಪಾದನೆಗೆ ಮಾತ್ರ ಬಹಳಷ್ಟು ಉಪಯುಕ್ತವಾಗಿವೆ. ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಗೋದಾವರಿ ನದಿ ಸಹ ಒಂದು. ಈ ನದಿಯು ಮಹಾರಾಷ್ಟ್ರದ ನಾಸಿಕ್ ಬಳಿ ಜನಿಸಿ ಪೂರ್ವಾಭಿಮುಖವಾಗಿ ಹರಿದು, ವಾರ್ಧಾ, ಪೆನುಗಂಣ, ವಯನಗಂಗಾ, ಇಂದ್ರಮತಿ, ಶಬರಿ ಮುಂತಾದ ಉಪನದಿಗಳನ್ನು ವಿಲೀನಗೊಳಿಸಿಕೊಂಡು ಆಂಧ್ರಪ್ರದೇಶದ ಮುಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮತ್ತೊಂದು ಪ್ರಧಾನ ನದಿಯಾದ 'ಕೃಷ್ಣಾನದಿ'' ಮಹಾ ಬಲೇಶ್ವರದ ಹತ್ತಿರ ಜನಿಸಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದ ಪಶ್ಚಿಮ ಘಟ್ಟದ ಬಾಬಾಬುಡನ್ಗಿರಿಯಲ್ಲಿ ಜನಿಸಿದ 'ತುಂಗಾ ಮತ್ತು ಭದ್ರ'' ಎಂಬ ಜೋಡಿ ನದಿಗಳು ಪೂರ್ವಾಭಿಮುಕವಾಗಿ ಹರಿದು ಆಂದ್ರಪ್ರದೇಶದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ದಕ್ಷಿಣದ ಮತ್ತು ಕರ್ನಾಟಕದ ಪ್ರಮುಖ ನದಿಯಾದ 'ಕಾವೇರಿ' ಬ್ರಹ್ಮಗಿರಿ (ಬಾಗಮಂಡಲ) ಯಲ್ಲಿ ಜನಿ ಪೂರ್ವಾಭಿಮುಖವಾಗಿ ಹರಿದು ತಮಿಳನಾಡಿನ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.  ಹವಾಮಾನ (CLIMATE) :


ಏಷ್ಯಾ ಖಂಡದಲ್ಲಿ ಉಪಖಂಡ ಮತ್ತು ಪರ್ಯಾಯ ದ್ವೀಪ ಏನಿಸಿರುವ ಭಾರತದಲ್ಲಿ ಸದಾಕಾಲ ತುಂಬಿ ಹರಿಯುವ ನದಿಗಳು, ಮರಳುಗಾಡು, ಪ್ರಸ್ತಭೂಮಿಯ ಅತಿ ಎತ್ತರವಾದ ಶಿಖರಗಳು, ಪರ್ವತಗಳು ಜೊತೆಗೆ ವೈವಿಧ್ಯಮಯವಾದ ವಾಯು ಗುಣವಿದೆ. ವರ್ಷದಲ್ಲಿ ಕೃನಿಷ್ಠ ನಾಲ್ಕು ಇಂಚುನಿಂದ ಹಿಡಿದು ಅತ್ಯಂತ ಹೆಚ್ಚು ಗರಿಷ್ಠ 480 ಇಂಚು ಸರಾಸರಿ ಮಳೆಯಾಗುವ ಪ್ರದೇಶಗಳು ಭಾರತದಲ್ಲಿವೆ. ಹೀಗಾಗಿ ಭಾರತದಾದ್ಯಂತ ಮಳೆಯ ಪ್ರಮಾಣ ಏಕರೂಪವಾಗಿಲ್ಲ. ಅತ್ಯಾದಿಕ, ಸಾಧಾರಣ ಮತ್ತು ಅತಿ ಕಡಿಮೆ ಹಾಗೂ ಮಳೆಯ ಬೀಳದ ಮರುಭೂಮಿ ಪ್ರತಿ ವರ್ಷ ಪ್ರದೇಶಗಳಿವೆ. ಅಸ್ಸಾಂ, ಪೂರ್ವ ಬಂಗಾಳ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ತಪ್ಪದೇ ಅಧಿಕ ಮಳೆ ಬೀಳುತ್ತದೆ. ದಕ್ಷಿಣದ ಬಹು ಭಾಗ, ಉದಯಪುರ ಮತ್ತು ಅಶ್ಮೀರ್ ಭಾಗಗಳಲ್ಲಿ 10 ರಿಂದ 30 ಇಂಚು ಮಳೆಯಾದರೆ ರಾಜಸ್ಥಾನದಲ್ಲಿ ಮಳೆ ಪ್ರಮಾಣ ತೀರ ಕಡಿಮೆ ಹೀಗಾಗಿ ಭಾರತದ ದೇಶದಲ್ಲಿ ಅತಿ ಉಷ್ಟ, ಅತಿ ಶೀತ, ಅತಿ ಒಣ ಹಾಗೂ ಅತಿ ಆದ್ರ್ರ ವಾಯು ಗುಣವ ಪ್ರದೇಶಗಳಿವೆ, ಮನ್ಸೂನ್ ಗಾಳಿಗಳು ಭಾರತದ ಜನತೆಯ ಆರ್ಥಿಕ ಜೀವನದ ಮೇಲೆ ಆಗಾಧ ಪ್ರಭಾವ ಬೀರಿದೆ. ಈ ರೀತಿಯ ನೈಸರ್ಗಿಕ ವೈಪರೀತ್ಯಗಳು ಹಾಗೂ ಬೌಗೋಳಿಕ ಅಂಶಗಳು ಇಲ್ಲಿನ ಸಸ್ಯವರ್ಗ, ಪ್ರಾಣಿವರ್ಗ, ಬೆಳೆ, ಪಕ್ಷಿವರ್ಗ ಹಾಗೂ ಜನಜೀವನದಲ್ಲಿ ವೈವಿಧ್ಯವನ್ನುಂಟು ಮಾಡಿದೆ


ವೈವಿಧ್ಯತೆಯಲ್ಲಿ ಏಕತೆ (UNITY IN DIVERSITY) : ಭಾರತದ ಜನಸಂಖ್ಯೆ ಭಾರತದ ಭೂ ವಿಸ್ತೀರ್ಣದ ಅಗಾಧತೆಗೆ ಅನುಗುಣವಾಗಿದೆ. ಇತಿಹಾಸದ ಪಿತಾಮಹಾ ಹೆರೊಡೋಟಸ್ ಕ್ರಿ.ಪೂ. 5ನೇ ಶತಮಾನದ ಪೂರ್ವದಲ್ಲಿಯೇ ಎಂದಿದ್ದಾನೆ. ನಮಗೆ ತಿಳಿದಿರುವ ರಾಷ್ಟ್ರಗಳೆಲ್ಲೆಲ್ಲಾ ಭಾರತವೇ ಅತಿ ಹೆಚ್ಚಿನ ಜನಸಂಖ್ಯೆಯುಳ್ಳದ್ದು ಇಡೀ ವಿಶ್ವದ ಜನಸಂಖ್ಯೆಯ ಸುಮಾರು 1/5 ಭಾಗ ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. 1961ರ ಜನಗಣತಿಯ ಪ್ರಕಾರ ಬರ್ಮಾವನ್ನು ಬಿಟ್ಟರೆ ಈ ಉಪಖಂಡದ ಜನಸಂಖ್ಯೆ 520 ಮಿಲಿಯನ್, ಈ ಅಪಾರ ಜನಸಂಖ್ಯೆಯ ಒಕ್ಕೂಟದಲ್ಲಿ ವಿವಿಧ ಜನಾಂಗಗಳಿವೆ. ಈ ಜನಾಂಗಗಳು ಅನೇಕ ಶತಮಾನಗಳಿಂದ ಈ ದೇಶದಲ್ಲಿ ನೆಲೆಸಿರುವುದರಿಂದ ಪ್ರತಿ ಜನಾಂಗದ ಪರಿಶುದ್ಧತೆಯು ಬಹಳ ಹಿಂದಿನ ಕಾಲದಲ್ಲಿ ಕಣ್ಮರೆಯಾಗಿ ಸಮ್ಮಿಶ್ರ ಸ್ವರೂಪದ ಜನಾಂಗಗಳನ್ನು ಪ್ರಸಕ್ತ ಭಾರತ ದೇಶ ಹೊಂದಿದೆ, ಏಕೆಂದರೆ ಇತಿಹಾಸ ಪೂರ್ವಕಾಲದಿಂದಲೇ ಬೇರೆ ಬೇರೆ ಜನಾಂಗಕ್ಕೆ ಮತ್ತು ಬುಡಕಟ್ಟುಗಳಿಗೆ ಸೇರಿದ ಜನರು ಆಕ್ರಮಣ ಮತ್ತು ವಲಸೆಯ ಮೂಲಕ ಭಾರತಕ್ಕೆ ಬಂದು ಭಾರತದಲ್ಲಿಯೇ ನೆಲೆಸಿದರು. ಪರಿಣಾಮವಾಗಿ ಭಾರತದ ಜನ ಸಮುದಾಯದಲ್ಲಿ ಶಕರು, ಹೂಣರು, ಪ್ರಾರ್ಥಿಯನ್ನರು, ಕುಶಾಣರು, ಭಿಲ್ಲರು, ಕೋಲರು, ಸಂತಾಲರು, ದ್ರಾವಿಡರು, ಆರ್ಯರು, ಟರ್ಕರು, ಆಫ್‌ ಇದ್ದರು ಮತ್ತು ಮಂಗೋಲಿಯನ್ ಮುಂತಾದ ಜನಾಂಗದವರು ಭಾರತದ ಜನ ಸಮುದಾಯದಲ್ಲಿ ವಿಲೀನಗೊಂಡಿದ್ದಾರೆ. ಮಾನವಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರು ಭಾರತೀಯ ಸಮಾಜವನ್ನು ಅಧ್ಯಯನ ಮಾಡಿ ಭಾರತವು ಹಲವು ಜನಾಂಗಗಳ ನೆಲೆವೀಡಾಗಿದೆ, ಆದರೆ ಯಾವುದೊಂದು ಜನಾಂಗವು ಪರಿಶುದ್ಧವಾಗಿ ಉಳಿದಿಲ್ಲ. ಹೀಗಾಗಿ ಭಾರತೀಯ ಸಮಾಜವು ಬುಡಕಟ್ಟಿನ ದೃಷ್ಟಿಯಿಂದ ಸಮ್ಮಿಶ್ರ ಸ್ವರೂಪದ್ದಾಗಿದೆ. ಈ ಸ ಮಿತ್ರ ಸ್ವರೂಪದಲ್ಲಿ ವಿವಿಧ ಜನಾಂಗಗಳು ಸೇರಿದ್ದು ಇಡೀ ಜನ ಲೆಕ್ಕವಿಲ್ಲದಷ್ಟು ಜಾತಿಗಳಾಗಿ ಮತ್ತು ಮತ ಮತಗಳಾಗಿ ವಿಭಜಿತರಾಗಿದ್ದಾರೆ.

ಭಾರತ ವಿವಿಧ ಜನಾಂಗಗಳ ವಾಸ ಸ್ಥಾನವಾದ್ದರಿಂದ 200ಕ್ಕೂ ಹೆಚ್ಚಿನ ಭಾಷೆ ಮತ್ತು ಉಪ ಭಾಷೆಗಳನ್ನು ಮಾತನಾಡುತ್ತಾರೆ. ಅದರಲ್ಲಿ ಈಗ 18 ಅಧಿಕೃತ ಭಾಷೆಗಳಾಗಿವೆ. ಭಾರತದ ಪ್ರಧಾನ ಭಾಷೆಗಳನ್ನು ಮೂರು ಭಾಷಾವರ್ಗಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ ಆರ್ಯ, ದ್ರಾವಿಡ ಮತ್ತು ಮುಂಡ ಭಾಷೆ, ಓರಿಸ್ಸಾದಲ್ಲಿ ಸಂತಾಲರು ಮಾತನಾಡುವ ಭಾಷೆಯೇ ಮುಂಡ ಭಾಷೆ, ಅರ್ಯ ಅಥವಾ ಇಂಡೋ ಆರ್ಯನ್ ಭಾಷಾ ವರ್ಗಕ್ಕೆ ಸಂಸ್ಕೃತ, ಪ್ರಾಕೃತ, ಪಂಜಾಬಿ, ಸಿಂಧಿ, ಹಿಂದಿ, ಬಿಹಾರಿ, ರಾಜಾನಿ, ಮರಾಠಿ, ಓರಿಯ, ಬಂಗಾಳಿ, ಅಸ್ಸಾಮೀ, ಗುಜರಾತಿ, ಕಾಶ್ಮೀರ ಮುಂತಾದ ಭಾಷೆಗಳೇ ಆರ್ಯ ಭಾಷೆಗಳಾಗಿವೆ. ಭಾರತದ ಒಟ್ಟು ಜನಸಂಖ್ಯೆಯ ಮುಕ್ಕಾಲು ಪಾಲು ಜನರು ಆರ್ಯ ಭಾಷಾ ವರ್ಗಕ್ಕೆ ಸೇರಿದ ಭಾಷೆಗಳನ್ನು ವಿಶೇಷವಾಗಿ ಉತ್ತರ ಭಾರತದ ಜನತೆ ಈ ಭಾಷೆಗಳನ್ನು ಮಾತನಾಡುತ್ತಾರೆ. ಆರ್ಯ ಅಥವಾ ಇಂಡೋ-ಆರ್ಯನ್ ಭಾಷೆಗೆ ಪೂರ್ವಿಕವಾಗಿ ದ್ರಾವಿಡ ಭಾಷೆಗಳನ್ನು ಬಳಸುತ್ತಿದ್ದರು. ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಗಳೆಂದರೆ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಪ್ರಮುಖವಾಗಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಕಾಲು ಭಾಗದಷ್ಟು ಜನರು ವಿಶೇಷವಾಗಿ ದಕ್ಷಿಣ ಭಾರತೀಯರು ಮಾತಾನಾಡುತ್ತಾರೆ. ಅನಾದಿ ಕಾಲದಿಂದ ಇಂದಿನವರೆಗೂ ಭಾರತದಾದ್ಯಂತ ಎಲ್ಲ ಜನರು ತಿಳಿಯುವಂತಹ ಒಂದು ಸಾಮಾನ್ಯ ಭಾಷೆ ಇರಲಿಲ್ಲ. ಪ್ರಾಚೀನ ಕಾಲದಲ್ಲಿ ಸಂಸ್ಕೃತ ಭಾಷೆ ಪ್ರಧಾನ ಭಾಷೆಯಾಗಿತ್ತು ಆದರೆ ಇತ್ತೀಚೆಗೆ ಪ್ರಾದೇಶಿಕವಾಗಿ ವಿಭಿನ್ನ ಭಾಷೆಗಳನ್ನು ಮಾತನಾಡಿದರೂ ಸಹ ಇಂಗ್ಲೀಷ್ ಭಾಷೆ ವಿಶೇಷವಾಗಿ ವಿದ್ಯಾವಂತರ ಸಂಪರ್ಕ ಕಲ್ಪಿಸುವ ಪ್ರಬಲ ಭಾಷಾ ಮಾಧ್ಯಮವಾಗಿ ಬೆಳೆದಿದೆ. ಹಿಂದಿ ಭಾಷೆ ಭಾರತದ ಕೇಂದ್ರ ಸರಕಾರದ ಅಧಿಕೃತ ಭಾಷೆ ವಿಶೇಷವಾಗಿ ಉತ್ತರ ಭಾರತೀಯರ ಮಾತನಾಡುವ ಭಾಷೆಯಾಗಿದೆ.


ಭಾರತದ ಸನಾತನ (ಹಿಂದೂ) ಧರ್ಮ ವೈವಿಧ್ಯತೆಯನ್ನು ಹೊಂದಿರುವ ಭಾರತೀಯರಲ್ಲಿ ಏಕತೆಯನ್ನು ಮೂಡಿಸುವಲ್ಲಿ ವಿಶಿಷ್ಟ ಪೂರ್ಣ ಪಾತ್ರವನ್ನು ವಹಿಸಿದೆ. ಹಿಂದೂ ಧರ್ಮ ಭಾರತೀಯರ ಜೀವಾಳ, ಮಂದರೆ ಭಾರತದಲ್ಲಿ ಹಿಂದೂ, ಬೌದ್ಧ, ಜೈನ್, ಪಾರ್ಕಿ, ಸ್ಟಾಮ್ ಮತ್ತು ಕ್ರೈಸ್ತ ಧರ್ಮಗಳ ಬೆಂಬಲಿಗರ ವಾಸಿಸುತ್ತಿದ್ದಾರೆ. ಈ ಧರ್ಮಗಳಲ್ಲಿಯೂ ಅನೇಕ ಒಳಪಂಗಡಗಳೂ (ಪಂಥಗಳು) ಇವೆ. ರೈತ, ಅದ್ವ, ಶ, ವಿಶಿಷ್ಟಾದ್ಯ ಶ, ವಜ್ರಯಾನ, ತೇರಾ ಪಂಥ, ಚಾರ್ವಾಕ, ಭಕ್ತಿ ಪಂಥ ಮತ್ತು ಪಿಯಾ, ಸುನ್ನಿ, ಶಿಖ್ ಮುಂತಾದವು ಬೆಳವಣಿಗೆ ಹೊಂದಿರುವುದನ್ನು ಕಾಣುತ್ತೇವೆ.


ಈ ನಿಟ್ಟಿನಲ್ಲಿ ಭಾರತದ ಹಲವಾರು ಋುಷಿ ಮಹರ್ಷಿಗಳು, ಸಾದು ಸಂತರ ಮತ್ತು ರಾಮ, ಕೃಷ್ಣ, ಗೌತಮ ಬುದ್ರ ಮಹಾವೀರ, ಶಂಕರ ಚಾರ್ಯ, ಬಸವೇಶ್ವರ, ಕಬೀರ, ಗುರುನಾನಕ್, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಹಾತ್ಮ ಗಾಂಧೀಜಿ ಮುಂತಾದ ಅಸಂಖ್ಯೆ ಮಹಾತ್ಮರು ನಮ್ಮ ದೇಶದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಉಜ್ವಲ ಗೊಳಿಸುವಲ್ಲಿ ಅಮೂಲ್ಯಪಾತ್ರ ವಹಿಸಿದರು. ಹೀಗಾಗಿ ಪ್ರಾಚೀನ ಕಾಲದಿಂದಲೂ ಸಾಗಿ ಬಂದಿದ್ದ ಧಾರ್ಮಿಕ, ಸಾಮರಸ್ಯ ಮತ್ತು ವೃದ್ಧಿಗೊಂಡಿತು. ಏತನ್ಮಧ್ಯೆ ಭಾರತದಲ್ಲಿ ಹಿಂದೂ ಧರ್ಮ ಕೇವಲ ಒಂದು ಧರ್ಮವಾಗಿರದೆ, ಜೀವನ ಪದ್ಧತಿಯಾಗಿದೆ. ಈ ಧರ್ಮವು ಭಾರತದಲ್ಲಿ ವಾಸಿಸುವ ಎಲ್ಲರಿಗೂ ಆರಾಧನಾ ಸ್ವಾತಂತ್ರ್ಯ ನೀಡಿದೆ. ಧಾರ್ಮಿಕ ಸಹಿಷ್ಣತ, ವಿಶಾಲ ಮತ್ತು ಉದಾರತೆಯ ಮನೋವೃತ್ತಿ ಸರ್ವ ಜನಾಃ ಸುಖಿನೋ ಭವನಂತು'' ''ಆಹಿಂಸಾ ಪರಮೋ 'ಧರ್ಮ' ಮುಂತಾದ ಧಾರ್ಮಿಕ ಮೌಲ್ಯಗಳನ್ನು ಹೊಂದಿರುವ ಮತ್ತು ಭೋದಿಸುವ ಹಿಂದೂ ಭೌಗೋಳಿಕ ಮೇಲೆ ಲಕ್ಷಣಗಳು ಮತ್ತು ಅದರ ಪ್ರಭಾವ


ಧರ್ಮವು ಭಾರತದ ಸಾಂಸ್ಕೃತಿಕ ಏಕತೆಗೆ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಅನನ್ಯ ಕೊಡುಗೆ


ಅನಾದಿಕಾಲದಿಂದಲೂ ಭಾರತದಲ್ಲಿ ರಾಜಕೀಯವಾಗಿ ಅಂಖಡ ಸಾಮ್ರಾಜ್ಯವನ್ನು ಬಹು ಕಾಲ ಯಾವ ರಾಜನು ಸ್ಥಾಪಿಸಲಾಗಲಿಲ್ಲ. ಆದರೂ ಈ ಮಧ್ಯೆ ಪ್ರಾಚೀನ ಕಾಲದಲ್ಲಿ ಮೌರ್ಯರ ಚಕ್ರವರ್ತಿ ಅಶೋಕ ಮತ್ತು ಮಧ್ಯಕಾಲದಲ್ಲಿ ಮೊಘಲ್‌ರ ಚಕ್ರವರ್ತಿ ಅಕ್ಷರ ಮಾತ್ರ ಭಾರತದ ಬಹುತೇಕ ಭಾಗಗಳ ಮೇಲೆ ಕೇಂದ್ರಾಡಳಿತವನ್ನು ಸ್ಥಾಪಿಸಿದರು. ಉಳಿದಂತೆ ಎಲ್ಲ ಕಾಲಗಳಲ್ಲೂ ಬೇರೆ ಬೇರೆ ಸಂತತಿಯ ರಾಜರು ಬೇರೆ ಬೇರೆ ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿದರು. ಏಕೆಂದರೆ ಭಾರತದ ವಿಶಾಲ ಭೂ ರ್ಣ ಮತ್ತು ಭೌತಿಕ ಲಕ್ಷಣಗಳೂ ಅಖಂಡ ಸಾಮ್ರಾಜ್ಯ ಸ್ಥಾಪನೆಗೆ ತಡೆಯನ್ನುಂಟು ಮಾಡಿದ್ದರು, ಗುಪ್ತರ ಚಕ್ರವರ್ತಿ ಸಮುದ್ರಗುಪ್ತನು ದಕ್ಷಿಣ ಭಾರತದ ಮೇಲೆ ದಂಡಯಾತ್ರೆ ಮಾಡಿದರೂ ಸಹ ತನ್ನ ಆಡಳಿತವನ್ನು ಸ್ಥಾಪಿಸಲಾಗಲಿಲ್ಲ. ಮಧ್ಯಕಾಲದಲ್ಲಿ 'ದೆಹಲಿಯ ಸುಲ್ತಾನರಾದ ಅಲ್ಲಾವುದ್ದೀನ್ ಖಿಲ್ಲಿ ಮಹಮದ್ ಬಿನ್ ತೊಘಲಕ್ ದಕ್ಷಿಣ ಭಾರತದ ಮೇಲೆ ಯಶಸ್ವಿ ಆಕ್ರಮಣ ಮಾಡಿದರೂ ಸಹ ಅವುಗಳನ್ನು ತಮ್ಮ ಸಾಮ್ರಾಜ್ಯಕ್ಕೆ ನೇರವಾಗಿ ಸೇರಿಸಿ ಕೊಂಡು ಆರೈಕೆ ಮಾಡಲಿಲ್ಲ. ಹೀಗೆಯೇ ದಕ್ಷಿಣ ಭಾರತದ ರಾಜರು ಸಹ ವಿಂಧ್ಯ ಪರ್ವತದ ಉತ್ತರಕ್ಕೆ ತಮ್ಮ ಸಾಮ್ರಾಜ್ಯದ ಎಲ್ಲೆಯನ್ನು ವಿಸ್ತರಿಸಲಾಗಲಿಲ್ಲ. ಆದರೆ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಮತ್ತು ಅವರ ತಂದ ಆಂಗ್ಲ ಮಾಧ್ಯಮ ಶಿಕ್ಷಣ, ರೈಲ್ವೆ ಅಂಚೆ ಮತ್ತು ತಂತಿ ಮತ್ತು ಅವರ ಸಾಮ್ರಾಜ್ಯಶಾಹಿ ನೀತಿ, ಮುಂತಾದ ಅಂಶಗಳು ಭಾರತ ಹಿಂದೆಂದೂ ಕಾಣದ ರಾಜಕೀಯ ಏಕತೆಯನ್ನು ಪಡೆಯಿತು.


ಭಾರತದಲ್ಲಿ ಬಹು ಜನಾಂಗ, ಬಹು ಬುಡಕಟ್ಟಿಗಳ, ಭಾಷೆಗಳು, ಮತಗಳು ಸಂಪ್ರದಾಯಗಳಿದ್ದರೂ ಸಹ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ವೈವಿಧ್ಯತೆಯಲ್ಲಿ ಏಕತೆ ಮಹತ್ವ ಪೂರ್ಣ ಗುಣವಾಗಿದೆ. ಅಖಂಡ ಭಾರತದ ಸಂಸ್ಕೃತಿ ಮತ್ತು ಏಕತೆಯನ್ನು ಪ್ರಾಚೀನ ಕಾಲದಿಂದಲೂ ಸಾಧು ಸಂತರು, ಮಹರ್ಷಿಗಳು, ದಾರ್ಶನಿಕರು, ವಿದ್ವಾಂಸರು, ಕವಿಗಳು ಮತ್ತು ಈವರೆಗೂ ಆಳ್ವಿಕೆ ಮಾಡಿದ ರಾಜ ಮಹಾರಾಜರು ಮತ್ತು ಸಾಹಿತ್ಯ ಹಾಗೂ ಇತಿಹಾಸ ಗ್ರಂಥಗಳು ಮತ್ತು ಕಾರ್ಯಗಳಲ್ಲಿ ಪ್ರತಿಬಿಂಬಿಸಿದ್ದಾರೆ.


ಎಷ್ಟು ಪುರಾಣದಲ್ಲಿ ಉತ್ತರಮ್' ಯತ್ ಸಮುದ್ರ ಹಿಮಾದ್ರೇನ ದಕ್ಷಿಣಮ್, ವರ್ಷಂತದ್ ಭಾರತಂನಾಮ ಭಾರತೀಯತ್ರ ಸಂತತಿ !'' ಯೆಂದು ಭಾರತ ದೇಶವನ್ನು ವರ್ಣಿಸಲಾಗಿದೆ.


ಅಂದರೆ ಭಾರತದ ಏಕತೆಯನ್ನು ಸಾಗರದಿಂದ ಉತ್ತರಕ್ಕೆ ಹಿಮಾಲಯದಿಂದ ದಕ್ಷಿಣಕ್ಕೆ ವ್ಯಾಪಿಸಿರುವ ಭಾರತವೆನ್ನುತ್ತಾರೆ. ಇಲ್ಲಿ ಭರತನ ವಂಶಜರು ವಾಸಿಸುತ್ತಾರೆಂದು ಈ ಶ್ಲೋಕದಲ್ಲಿ ವಿವರಿಸಲಾಗಿದೆ.


''ಗಂಗೇ ಚ ಯಮುನೇ ಚೈವ


ಗೋದಾವರೀ, ಸರಸ್ವತೀ ನರ್ಮದೇ ಸಿಂಧೂ ಕಾವೇರಿ


ಜಲೇಸ್ಮಿನ್ ಸನ್ನಿಧಿಂ ಕುರು' ಎಂಬುದಾಗಿ ಭಾರತದಾದ್ಯಂತ ಹರಿಯುವ ನದಿಗಳ ಹೆಸರನ್ನೊಳಗೊಂಡ ಪ್ರಾರ್ಥನಾ ಶ್ಲೋಕವನ್ನು ಜಪಿಸುವುದು ಭಾರತೀಯರ ಸಂಪ್ರದಾಯ. ಈ ಮಧ್ಯೆ, ಭಾರತದಲ್ಲಿ ಋಷಿ ಮುನಿಗಳು, ಸಾಧು ಸಂತರ ಮತ್ತು ದಾರ್ಶನಿಕರ ಪ್ರಾಚೀನ ಕಾಲದಲ್ಲಿ ಪ್ರಾಂಶ, ನಾಡು ಮತ್ತು ವ್ಯಾಪ್ತಿಯ ಅರಿವಿಲ್ಲದೆ ಭಾರತದಲ್ಲೆಲ್ಲ ಪ್ರಯಾಣ ಮಾಡಿ ಭಾರತದ ಭೌಗೋಳಿಕ ಏಕತೆಯನ್ನು ಜನತೆಯ ಮನದಲ್ಲಿ ಬೇರೂರುವಂತೆ ಮಾಡಿದ್ದಾರೆ. ಭಾರತದ ಮೂಲಭೂತ ಐಕ್ಯಮತ್ಯವು ವೇದ ಉಪನಿಷತ್ತುಗಳು ಹಾಗೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾ ಭಾರತಗಳಲ್ಲಿ ಕೊಟ್ಟಿರುವ ಭರತನ ದೇಶ (ಭಾರತ ವರ್ಷ) ಎಂಬ ಹೆಸರಿನಿಂದ ಸ್ಪಷ್ಟವಾಗುತ್ತದೆ. ಜೊತೆಗೆ ಈ ಅಮೂಲ್ಯ ಗ್ರಂಥಗಳು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ವಿಭಿನ್ನ ಹಿಂದೂ ಪಂಗಡಗಳ ಜನತೆಗೆ ಪವಿತ್ರ ಗ್ರಂಥಗಳೆಂಬ ಅರಿವಿನಿಂದ ಇಡೀ ಭಾರತದ ಭಾರತೀಯರು ಒಂದೇ ಎಂಬ ಪ್ರವೃತ್ತಿ ಏಕತೆಯ ಪ್ರತೀಕವಾಗಿದ್ದಿತು. ರಾಜಕೀಯವಾಗಿ ಅಖಂಡ ಭಾರತದ ಕಲ್ಪನೆ ರಾಮಾಯಣ ಮತ್ತು ಮಹಾಭಾರತ ಕಾವ್ಯಗಳಲ್ಲಿ ದೇಶದ ಎಲ್ಲ ಭಾಗಗಳಿಗೂ ಸಂಬಂಧಿಸಿದ ವಿವರಗಳನ್ನು ಕಾಣಬಹುದು. ವೇದಗಳ ಕಾಲದಲ್ಲಿ ರಾಜ ಮಹಾ ರಾಜರು ಹೊಂದಿರುವ ಬಿರುಡೆಗಳಾದ ರಾಜಾದಿರಾಜ, ಅಧಿರಾಜ, ಸಾಮ್ರಾಟ್, ಏಕರಾಟ್, ವಿರಾಟ್, ಸಾರ್ವಭೌಮ ಮುಂತಾದವು ಭಾರತದ ವಿಭಿನ್ನ ಭಾಗಗಳಲ್ಲಿ ಆಳ್ವಿಕೆ ಮಾಡಿದವರು ಬಗ್ಗೆ ಬೆಳಕು ಚೆಲ್ಲುತ್ತದ, ಮೌರ್ಯ ಸಂತತಿಯ ರಾಜ ಅಶೋಕ ಮಹಾಶಯ ಇಡೀ ಭಾರತವನ್ನು ಗೆದ್ದು ರಾಜ ಮಕತೆಯನ್ನು ಸ್ಥಾಪಿಸಿದ್ದನು. ಮಧ್ಯ ಕಾಲದಲ್ಲಿ ಟರ್ಕರೂ, ಆ‌‌ನ್ನರೂ ಮತ್ತು ಮೊಘಲರೂ ಭಾರತವನ್ನು ಗೆಲ್ಲಲು ಬಂದರೂ ಸಹ ಕ್ರಮೇಣ ಇಲ್ಲಿನಲೆಸಿದರು. ಇದಕ್ಕೆ ಮೂಲ ಕಾರಣ ಭಾರತೀಯ ಧರ್ಮ ಮತ್ತು ಸಂಸ್ಕೃತಿಯ ಔದಾರ್ಯತ, ಉದಾರತೆ, ಸಾಮರಸ್ಯ ಮೊದಲಾದ ಅಂಶಗಳಿಂದ ವಿದೇಶಿಯರ ಭಾರತೀಯ ಸಂಸ್ಕೃತಿಯೊಂದಿಗೆ ವಿಲೀನಗೊಂಡರು.


ಪ್ರಾಚೀನ ಕಾಲದಿಂದಲೂ ಭಾರತ ವಿವಿಧ ಜನಾಂಗಗಳ ಸಂಸ್ಕೃತಿಗಳ, ಉತ್ತಮವಾದ ಅಂಶಗಳನ್ನು ವಿಲೀನಗೊಳಿಸಿಕೊಂಡು ತಮ್ಮದೇ ಆದ ವಿಶಿಷ್ಟ ಪೂರ್ಣ ಸಮ್ಮಿಶ್ರ ಸ್ವರೂಪದ ಸಂಸ್ಕೃತಿಯನ್ನು ಬೆಳೆಸಿಕೊಂಡಿದೆ. ಭಾರತ ಆರಂಭದಿಂದಲೇ ಆರ್ಯ ಮತ್ತು ದ್ರಾವಿಡ ಸಂಸ್ಕೃತಿಗಳ ಸಮನ್ವಯವನ್ನು ಇತಿಹಾಸದಲ್ಲಿ ಕಾಣುತ್ತೇವೆ. ಕ್ರಿ.ಪೂ. 6ನೇ ಶತಮಾನದಲ್ಲಿ ಹೊಸ ಮತಗಳ ಉದಯಸಿದರೂ ಸಹ ಆ ಧರ್ಮಗಳ ತತ್ವಗಳು ಹಿಂದೂ ಧರ್ಮದಿಂದ ಪ್ರಭಾವಿತವಾಗಿದ್ದವು. ಮಧ್ಯಕಾಲದ ಭಾರತದಲ್ಲಿ ಮುಸ್ಲಿಂರು ಭಾರತವನ್ನು ಆಕ್ರಮಿಸಿದ ನಂತರ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ಮಧ್ಯೆ ಪರಸ್ಪರ ಸಾಂಸ್ಕೃತಿಕ ವಿನಿಮಯ ಏರ್ಪಟ್ಟಿತು. ಆಧುನಿಕ ಕಾಲದಲ್ಲಿ ಭಾರತೀಯ ಸಂಸ್ಕೃತಿಯ ಪಾಶ್ಚಾತ್ಯ ಸಂಸ್ಕೃತಿಯ ಉತ್ತಮ ಅಂಶಗಳನ್ನು ವಿಲೀನಗೊಳಿಸಿಕೊಂಡಿದೆ. ಈ ಹೊಂದಾಣಿಕೆ ಮತ್ತು ಉದಾರತ, ಔದಾರ್ಯತ ಪ್ರವೃತ್ತಿಯಿಂದಾಗಿ ಭಾರತೀಯ ಸಂಸ್ಕೃತಿಯ ಸತ್ಯ ಸಂಪನ್ನವಾಗಿದೆ.


"ಏಕತೆ'' ಎನ್ನುವುದು ಒಂದೇ ಭಾಷೆ, ಧರ್ಮ, ಜನಾಂಗ ಮತ್ತು ಸಂಸ್ಕೃತಿಯಿಂದಲೇ ನಿರ್ಮಾಣವಾಗುತ್ತದೆ ಎಂಬುದು ಭ್ರಮೆ ಮಾತ್ರ ಏಕೆಂದರೆ ಭಾರತ' ಬಹು ಭಾಷೆ, ಬಹು ಧರ್ಮ, ಜನಾಂಗ, ಸ ಶಿಗಳ ನಾಡು ಎನ್ನುವುದು ಕಠೋರ ಸತ್ಯವಾದರೂ ಸಹ ವೈವಿಧ್ಯತೆಯ ಅಂಶಗಳ ಅಡಿಯಲ್ಲೂ ಭಾರತದ ಸಾಂಸ್ಕೃತಿಕ ಕತೆಯು ಕಂಡು ಬರುವ ಅಂಶವನ್ನು ಈಗಾಗಲೇ ನಾವು ಮೇಲಿನ ವಿವರಗಳಲ್ಲಿ ಕಂಡಿದ್ದೇವೆ. ಭಾರತದಲ್ಲಿ ರಾಜಕೀಯ ಏಕತೆ ಇಲ್ಲದ ಕಾಲದಲ್ಲೂ ಭಾರತೀಯ ಸಾಂಸ್ಕೃತಿಕ ಏಕತೆ ಕುಂಠಿತವಾಗಲಿಲ್ಲ ಎಂಬ ಅಂಶ ಗಮನಾರ್ಹವಾಗಿದೆ. ಏಕೆಂದರೆ ಅಂಗ್ಲರ ಆಳ್ವಿಕೆಯ ಕಾಲಾವಧಿಯಲ್ಲಿ ಇಡೀ ಭಾರತ ಹಿಂದೆಂದೂ ಕಾಣದ ರಾಜಕೀಯ ಏಕತೆಯನ್ನು ಪಡೆಯುವುದರ ಜೊತೆಗೆ ಬೃಹತ ಜನತೆಯ ಆಂದೋಲನ ಮೂಲಕ ಸ್ವಾತಂತ್ರ್ಯವನ್ನು ಪಡೆದಿರುವ ಅಂಶವು ಸಹ ಸತ್ಯ.

Comments

Popular posts from this blog

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

Rainbow loader with html with CSS