Posts

Showing posts from July, 2020

ಹೊಸ ಶಿಕ್ಷಣ ನೀತಿ ಜಾರಿ 2020

Image
ಹೊಸ ಶಿಕ್ಷಣ ನೀತಿ ಜಾರಿ ಇನ್ನು ಮುಂದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಭಾರತದಲ್ಲಿ ಜಾರಿಯಾಗಲಿದೆ.  ಈಗ ಇರುವ 10+2 ಶಿಕ್ಷಣ ವ್ಯವಸ್ಥೆ 5+3+3+4 ಮಾದರಿಯಾಗಿ ಬದಲಾವಣೆಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಈಗ ಈ ಹೊಸ ಎನ್‌ಇಪಿಗೆ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಹೊಸ ನೀತಿಯ ವಿವರಗಳನ್ನು ನೀಡಿದರು. 2015ರಿಂದ ಎನ್‌ಇಪಿ ಜಾರಿ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಹೊಸ ನೀತಿ ಜಾರಿಯಾಗಿದೆ. 34 ವರ್ಷದ ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಿತ್ತು. ಆದಾದ ಬಳಿಕ ಈಗ ಬದಲಾವಣೆ ಆಗುತ್ತಿದೆ. ಎನ್‌ಇಪಿಯಲ್ಲಿ ಏನಿದೆ?  ಇನ್ನು ಮುಂದೆ 10+2 ಶಿಕ್ಷಣ ವ್ಯವಸ್ಥೆ ಇರುವುದಿಲ್ಲ. ಇದನ್ನು 5+3+3+4 ರಂತೆ ವಿಂಗಡನೆ ಮಾಡಲಾಗಿದೆ. ಇದರರ್ಥ ಶಾಲೆಯ ಮೊದಲ ಐದು ವರ್ಷಗಳು ಅಡಿಪಾಯ ಹಂತ, 3 ರಿಂದ 5 ನೇ ತರಗತಿಯವರೆಗಿನ ಮೂರು ವರ್ಷಗಳನ್ನು ಪೂರ್ವಸಿದ್ಧತಾ ಹಂತವಾಗಿ ವಿಂಗಡಿಸಲಾಗಿದೆ. ನಂತರ ಮೂರು ವರ್ಷಗಳು ಮಧ್ಯಮ ಹಂತವಾಗಿ ವಿಂಗಡಿಸಲಾಗಿದೆ. ನಂತರದ ನಾಲ್ಕು ವರ್ಷವನ್ನು ದ್ವಿತೀಯ ಹಂತವನ್ನಾಗಿ ವಿಂಗಡಿಸಲಾಗಿದೆ. ಶಾಲೆಗಳು ಶಾಲೆಗಳು ಕಲೆ, ವಾಣಿಜ್ಯ, ವಿಜ್ಞಾನದ ಹೊಳೆಗಳ ಯಾವುದೇ ಕಟ್ಟುನಿಟ್ಟಿನ ರಚನೆಯನ್ನು ಹೊಂದಿರುವುದಿಲ್ಲ, ವಿದ್ಯಾರ್ಥಿಗಳು ತಾವು ಬಯಸ

2nd PUC online classes has started online YouTube channel free completely

Image
Dear friends YouTube channel classes are uploaded  So please visit and watch online classes for completely free Biology class playlist link below👇👇👇👇 Scroll down Screenshots. Below for proof Screenshots 1) Screenshots 2)  click here to go biology classes playlist

ನಾವು ಊರು ಬಿಟ್ಟವರು.. kannada story

ನಾವು ಊರು ಬಿಟ್ಟವರು.. ಲಾಕ್ ಡೌನಿನ ಹಿಂದಿನ ದಿನ ಬೆಂಗಳೂರಿನ ಕೊಲೀಗು ಹೇಳುತ್ತಾನೆ: "ನಿನಗೇನು ಬಿಡು ಮಾರಾಯಾ, ನೀನು ಊರಿನವನು!" ಲಾಕ್ ಡೌನಿನ ದಿನ ಊರಿಗೆ ಬಂದಿಳಿದಾಗ ಅಲ್ಯಾರೋ ಗೊಣಗಿಕೊಳ್ಳುತ್ತಾರೆ: "ಇವನ್ಯಾಕೆ ಈಗ ಬಂದ? ಇವನು ಬೆಂಗಳೂರಿನವನು!" ಎರೆಡೂ ಊರಿಗೆ ಸ್ವಂತವಾಗದ ನಾವು ಎರೆಡು ಮಾತನ್ನೂ ಮೌನವಾಗಿ ಕೇಳಿಸಿಕೊಂಡು ಸುಮ್ಮನಿರುತ್ತೇವೆ.  ಏಕೆಂದರೆ ನಾವು ಊರು ಬಿಟ್ಟವರು. ಹಸಿದು ರೂಮಿಗೆ ಬಂದಾಗ ಉಣಬಡಿಸುವ ಅಕ್ಕರೆಯ ಅಮ್ಮನಿಲ್ಲ.  ಜ್ವರವೆಂದು ಮಲಗಿದಾಗ ಮಾತ್ರೆ ತಂದು ಕೊಡಲು ಕಾಳಜಿಯ ಅಪ್ಪನಿಲ್ಲ.  ಇವರಿಬ್ಬರ ನೆನಪನ್ನಷ್ಟೇ ಎದೆಯೊಳಗಿಟ್ಟುಕೊಂಡು ದೂರದ ಶಹರದಲ್ಲಿ ಸಿಕ್ಕಿದ್ದನ್ನು ತಿಂದು ಅರೆಹೊಟ್ಟೆಯಲ್ಲೇ ಮಲಗುತ್ತೇವೆ.  ಏಕೆಂದರೆ ನಾವು ಊರು ಬಿಟ್ಟವರು. ಅದೊಂದು ಬೆಳ್ಳಂಬೆಳಗ್ಗೆ ಫೋನು ಬರುತ್ತದೆ: "ನಿಮ್ಮ ಅಜ್ಜ ಹೋಗಿಬಿಟ್ಟರು!"  ಎದ್ದು ಬಿದ್ದು ಊರಿಗೆ ಓಡಿ ಬಂದವರನ್ನು ಅಂಗಳದಲ್ಲಿಟ್ಟ ಅಜ್ಜನ ಶವವಷ್ಟೇ ಎದುರುಗೊಳ್ಳುತ್ತದೆ. ಅಕ್ಕರೆಯ ಜೀವದೊಂದಿಗೆ ಕೊನೆಯ ಮಾತೂ ಆಡಲಾಗದೇಹೋದ ನೋವಿಗೆ ನಾವು ಯಾರನ್ನೂ ಹೊಣೆ ಮಾಡುವಂತಿಲ್ಲ. ಏಕೆಂದರೆ ನಾವು ಊರು ಬಿಟ್ಟವರು. ಸಣ್ಣ ಸಂಬಳದಲ್ಲಿ ಉಳಿಸಿದ ದೊಡ್ಡ ಭಾಗದಿಂದ ಊರಿನಲ್ಲೊಂದು ಮನೆ ಕಟ್ಟುತ್ತೇವೆ.  ಕಟ್ಟಿದ ಮನೆಯಲ್ಲಿ ಎರೆಡು ದಿನ ಇರಲೂ ರಜೆ ಸಾಲದೇ ಮರಳಿ ಬೆಂಗಳೂರಿಗೆ ಓಡುತ್ತೇವೆ. ಅಲ್ಲಿ ವಿಶಾಲವಾದ ಮನೆ ಕಟ್ಟಿದ ಖುಷಿಯಲ್ಲಿ ಇಲ್ಲಿ ಇಕ್ಕಟ್